SHIVAMOGGA LIVE NEWS | 24 DECEMBER 2022
ಶಿವಮೊಗ್ಗ : ರೌಡಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಹಲವರ ಗಡಿಪಾರಿಗೆ ಮನವಿ ಮಾಡಿದೆ. ಈ ನಡುವೆ ಕಾರ್ಯಾಗಾರ ಆಯೋಜಿಸಿ ಗೂಂಡಾ ಕಾಯ್ದೆ (goonda act) ಮತ್ತು ಗಡಿಪಾರು ಕುರಿತು ಮತ್ತಷ್ಟು ತಿಳಿವಳಿಕೆ ಮೂಡಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಡಿಪಾರು ಮತ್ತು ಗೂಂಡಾ ಕಾಯ್ದೆ (goonda act) ಕುರಿತು ಕಾರ್ಯಾಗಾರ ಆಯೋಜಿಸಲಾಗಿತ್ತು. ಬೆಂಗಳೂರು ಸಿಐಡಿಯ ಕಾನೂನು ಸಲಹೆಗಾರ ಮಹೇಶ್ ವೈದ್ಯ ಅವರು ಕಾರ್ಯಾಗಾರ ನಡೆಸಿಕೊಟ್ಟರು.
ಇದನ್ನೂ ಓದಿ – ಕಾರಲ್ಲಿ ಬಂದು ಬಾಲಕನ ಕಿಡ್ನಾಪ್, ಅಡಕೆ ವ್ಯಾಪಾರಿ ಸೇರಿ ಭದ್ರಾವತಿ, ಶಿವಮೊಗ್ಗ, ಸಾಗರದ ಐವರು ಅರೆಸ್ಟ್
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ತಹಶೀಲ್ದಾರ್, ಜಿಲ್ಲೆಯ ಡಿವೈಎಸ್ಪಿಗಳು, ಇನ್ಸ್ ಪೆಕ್ಟರ್ ಗಳು, ಪಿಎಸ್ಐಗಳು, ತನಿಖಾ ಸಹಾಯಕ ಸಿಬ್ಬಂದಿ ಉಪಸ್ಥಿತರಿದ್ದರು.