ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 5 ನವೆಂಬರ್ 2021
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮೂರಿನ ಪ್ರತಿ ಮನೆಗೂ ತೆರಳಿ ಸಿಹಿ ಹಂಚಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮೂರಿನಲ್ಲಿ ಎಲ್ಲರ ಮನೆಗೂ ಭೇಟಿ ನೀಡಿದ್ದರು.
ಆರಗ ಜ್ಞಾನೇಂದ್ರ ಅವರು ತಮ್ಮ ಹುಟ್ಟೂರು ಹಿಸಣ ಹೊಸ್ಕೇರಿಯ ಪ್ರತಿ ಮನೆಗೂ ಇವತ್ತು ಭೇಟಿ ನೀಡಿದ್ದರು. ಎಲ್ಲರ ಮನೆಗೂ ತೆರಳಿ ಸಿಹಿ ವಿತರಣೆ ಮಾಡಿ, ಹಬ್ಬದ ಶುಭಾಶಯ ಕೋರಿದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಕೊಂಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕಳೆದ ಮೂರು ದಶಕದಿಂದ ತಾವು ಈ ಪದ್ಧತಿಯನ್ನು ರೂಢಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಇನ್ನು, ಗೃಹ ಸಚಿವರು ಮನೆಗಳಿಗೆ ಭೇಟಿ ನೀಡಿದಾಗ, ಮನೆ ಮಂದಿಯಲ್ಲ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಹಬ್ಬ ಅಂದ್ಮೇಲೆ ಸಿಹಿ ಇರಲೇಬೇಕು. ಶಿವಮೊಗ್ಗ ನಗರದಲ್ಲಿ ಕೇವಲ ಏಳು ನಿಮಿಷದಲ್ಲಿ ರೆಡಿಯಾಗುತ್ತೆ ನೀವು ಕೇಳಿದ ಕೇಕ್. ಮೊದಲ ಮೂರು ದಿನ ಭರ್ಜರಿ ಆಫರ್. ಕರೆ ಮಾಡಿ.. ಆರ್ಡರ್ ಮಾಡಿ..