ಶಿವಮೊಗ್ಗ ಲೈವ್.ಕಾಂ | SHIMOGA | 22 ಫೆಬ್ರವರಿ 2020
ಮಾಜಿ ಸೈನಿಕ ರಾಘವೇಂದ್ರ ಮತ್ತು ರಾಘವ್ ಸಿಂಹ ಅವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಮೂರು ದಿನ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ. ಸ್ಪರ್ಧಾಕಾಂಕ್ಷಿಗಳ ಅನುಕೂಲಕ್ಕಾಗಿ ದುರ್ಗಿಗುಡಿ 3ನೇ ತಿರುವಿನಲ್ಲಿರುವ ಅನುದಾನಿತ ನೌಕರರ ಸಹಕಾರ ಸಂಘ ಕಟ್ಟಡದಲ್ಲಿರುವ ಅಧಿಕಾರಿ ಅಕಾಡೆಮಿಯಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ.
ಕೆಎಎಸ್, ಎಪ್’ಡಿಎ, ಎಸ್’ಡಿಎ, ಪಿಎಸ್ಐ, ಪಿಸಿ ಸೇರಿದಂತೆ ವಿವಿಧ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಶಿಕಾರಿಪುರದ ಸಾಧನ ಅಕಾಡೆಮಿಯ ಬಿ.ಎಂ.ಮಂಜುನಾಥ್ ಅವರು ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಸಕ್ತರು 9682570834, 8722173603 ನಂಬರ್’ಗೆ ಕರೆ ಮಾಡಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.