SHIVAMOGGA LIVE NEWS | 22 FEBRUARY 2024
SHIMOGA : ವಿದ್ಯಾನಗರದ 14ನೇ ವಾರ್ಡ್ ರೈಲ್ವೆ ಕೆಳ ಸೇತುವೆ ನಿರ್ಮಾಣ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಪ್ರತಿಪಕ್ಷದ ಮಾಜಿ ನಾಯಕಿ ಯಮುನಾ ರಂಗೇಗೌಡ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸ್ಥಳೀಯರು ಪ್ರತಿಭಟನೆ ನಡೆಸಿದರು.
14ನೇ ವಾರ್ಡ್ ವಿದ್ಯಾನಗರ ಹಾಗೂ ಹೊಳೆಹೊನ್ನೂರು ರಸ್ತೆ ಈ ಭಾಗದಲ್ಲಿ ಮೇಲೆತುವೆ ನಿರ್ಮಾಣವಾಗಿದೆ. ಆದರೆ, ಈ ಕಾಮಗಾರಿ ಟೆಂಡರ್ನಲ್ಲಿಯೇ ಚಿಕ್ಕಲ್, ಗುರುಪುರ, ಶಾಂತಮ್ಮ ಲೇಔಟ್, ಹೊಳೆಹೊನ್ನೂರು ರಸ್ತೆ, ಗರುಡ ಲೇಔಟ್ ಈ ಭಾಗದ ಸ್ಥಳೀಯರಿಗೆ ನಿತ್ಯ ಓಡಾಟಕ್ಕೆ ಅನುಕೂಲವಾಗುವಂತೆ ಕೆಳ ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಕೆಳ ಸೇತುವೆಗೆ ಸಂಬಂಧಿಸಿದಂತೆ ಕಾಮಗಾರಿಗೆ ಅನುಮೋದನೆ ಕೂಡ ನೀಡಲಾಗಿತ್ತು. ಆದರೆ ರೈಲ್ವೆ ಇಲಾಖೆ ಈ ಕಾಮಗಾರಿಯನ್ನು ಕೈಬಿಟ್ಟಿದೆ. ಇದರಿಂದ ಈ ಭಾಗದ ಜನರಿಗೆ ದಿನನಿತ್ಯ ಸಂಚಾರಕ್ಕೆ ತುಂಬ ತೊಂದರೆಯಾಗುತ್ತದೆ. ಆದ್ದರಿಂದ ತಕ್ಷಣವೇ ಕೆಳಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ರಂಗೇಗೌಡ, ಸತೀಶ್, ವಾಹಬ್ ಸಾಬ್, ವೆಂಕಟೇಶ್, ಮೋಹನ್, ಅಲ್ತಾಬ್, ಸುರೇಶ್, ಸಿದ್ದಣ್ಣ, ಶಾಂತಮ್ಮ, ಸಲೀಂ, ರಾಜಶೇಖರ್, ಸೈಯ್ಯದ್ ಅಹಮ್ಮದ್, ಬೇಬಿ, ರಾಜು, ವೆಂಕಟೇಶ, ಲಕ್ಷ್ಮೀಕಾಂತ್ ಇತರರಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿನಿಮಾ ನೋಡಿಕೊಂಡು ರಾತ್ರಿ ಮನೆಗೆ ಮರಳುತ್ತಿದ್ದವನಿಗೆ ಹಿಂಬದಿಯಿಂದ ಬಂದು ಗುದ್ದಿದ ಲಾರಿ