SHIVAMOGGA LIVE | 4 AUGUST 2023
SHIMOGA : ಕೆಎಸ್ಆರ್ಟಿಸಿ ಬಸ್ ಮತ್ತು ಟ್ರ್ಯಾಕ್ಸ್ ಮಧ್ಯೆ ಅಪಘಾತ (Mishap) ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಜೈನ್ ಶಾಲೆ ಮುಂಭಾಗ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಮೈಸೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್, ಶಿವಮೊಗ್ಗ ಭದ್ರಾವತಿ ನಡುವೆ ಸಂಚರಿಸುತ್ತಿದ್ದ ಟ್ರ್ಯಾಕ್ಸ್ ಅಪಘಾತಕ್ಕೀಡಾಗಿವೆ (Mishap). ಟ್ರ್ಯಾಕ್ಸ್ನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಟ್ರ್ಯಾಕ್ಸ್ ಮುಂಭಾಗ ಜಖಂ ಆಗಿದೆ.
ಇದನ್ನೂ ಓದಿ – ಸಿಗಂದೂರು ಬಳಿ ಶರಾವತಿ ನದಿಯಲ್ಲಿ ಮುಳುಗಿದ 10 ಚಕ್ರದ ಲಾರಿ
ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿಯಾಗಿಲ್ಲ. ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಈ ಭಾಗದಲ್ಲಿ ಒನ್ ವೇ ಸಂಚಾರವಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.