SHIVAMOGGA LIVE | 4 AUGUST 2023
BYKODU : ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ 10 ಚಕ್ರದ ಲಾರಿ (Truck Drowned) ಶರಾವತಿ ಹಿನ್ನೀರಿನಲ್ಲಿ ಮುಳುಗಿದೆ. ಅದೃಷ್ಟವಶಾತ್ ಚಾಲಕ ಪಾರಾಗಿದ್ದಾರೆ.
ಸೇತುವೆ ನಿರ್ಮಾಣ ಕಂಪನಿ ದಿಲೀಪ್ ಬಿಲ್ಡ್ ಕನ್ಸ್ಟ್ರಕ್ಷನ್ ಸಂಸ್ಥೆಗೆ ಲಾರಿಯಲ್ಲಿ ಸೇತುವೆ ನಿರ್ಮಾಣ ಸಾಮಗ್ರಿ ತರಲಾಗಿತ್ತು. ಗುರುವಾರ ಸಂಜೆ ಹೊಳೆಬಾಗಿಲು ಬಳಿ ಲಾಂಚ್ಗೆ ಹತ್ತಿಸಲು ಲಾರಿಯನ್ನು ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಚಾಲಕ ಲಾರಿಯಿಂದ ಹಾರಿ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಅಂಗಡಿ, ವಾಣಿಜ್ಯ ಸಂಸ್ಥೆ ಮಾಲೀಕರಿಗೆ 15 ದಿನ ಗಡುವು, ತಪ್ಪಿದರೆ ಕ್ರಮ