ಧರ್ಮಸ್ಥಳದಲ್ಲಿ ಆರಿಹೋಯ್ತಂತೆ ದೀಪ, ಮನೆ ಮುಂದೆ ಬೆಳಗಬೇಕಂತೆ ಹಣತೆ, ಎಲ್ಲೆಲ್ಲಿ ಆಗ್ತಿದೆ ಪೂಜೆ? ಡಾ.ವೀರೇಂದ್ರ ಹೆಗ್ಗಡೆ ಏನಂತಾರೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಕರೋನ ಲಾಕ್’ಡೌನ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರ ಪರದಾಟದ ನಡುವೆ, ಮನೆ ಮುಂದೆ ದೀಪ ಬೆಳಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ ಸುದ್ದಿಯಿಂದ ಆತಂಕಕ್ಕೀಡಾಗಿದ್ದಾರೆ. ಗುರುವಾರ ರಾತ್ರಿಯಿಂದಲೇ ಹಲವು ಕಡೆಗೆ ಪೂಜೆ ಸಲ್ಲಿಸಲಾಗುತ್ತಿದೆ.

ವಾಟ್ಸಪ್’ನಲ್ಲಿ ಧರ್ಮಸ್ಥಳದ ದೀಪದ ಕಥೆ

ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಮುಂದೆ ಬೆಳಗುತ್ತಿದ್ದ ದೀಪ ನಂದಿ ಹೋಗಿದೆ. ಹಾಗಾಗಿ ಎಲ್ಲರು ಸೇರಿ ಮನೆ ಮುಂದೆ ದೀಪ ಬೆಳಗಬೇಕು ಎಂದು ತಿಳಿಸಲಾಗಿದೆ ಅಂತಾ ವಾಟ್ಸಪ್ ಮೂಲಕ ಹಬ್ಬಿಸಲಾಗಿದೆ. ಈ ಮೆಸೇಜ್ ಜಿಲ್ಲೆಯಾದ್ಯಂತ ವೈರಲ್ ಆಗಿದೆ.

Dharmasthala Temple

ರಾತ್ರಿಯಿಂದಲೇ ಪೂಜೆ ಶುರು

ವಾಟ್ಸಪ್’ನಲ್ಲಿ ಸಂದೇಶ ಹರಡುತ್ತಿದ್ದಂತೆ ರಾತ್ರಿಯಿಂದಲೇ ಜನರು ಪೂಜೆ ಆರಂಭಿಸಿದ್ದಾರೆ. ಮನೆ ಮುಂದೆ ಸಗಣಿ ಸಾರಿಸಿ, ಹೊಸ್ತಿಲ ಮುಂದೆ ದೀಪ ಬೆಳಗುತ್ತಿದ್ದಾರೆ. ಬೆಳಗ್ಗೆಯು ಜಿಲ್ಲೆಯ ವಿವಿಧೆಡೆ ಪೂಜೆ ನಡೆಯುತ್ತಿದೆ.

ವಾಟ್ಸಪ್ ಸುದ್ದಿ ನಿಜನಾ?

ಶ್ರೀ ಮಂಜನಾಥನ ಸನ್ನಿಧಿಯಲ್ಲಿ ದೀಪ ಆರಿರುವುದು, ಪೂಜೆ ಮಾಡಿ ಅಂತಾ ಜನರಿಗೆ ತಿಳಿಸಿರುವುದೆಲ್ಲ ಸುಳ್ಳು ಅನ್ನುತ್ತಿದೆ ಧರ್ಮಸ್ಥಳ ದೇವಸ್ಥಾನದ ಮೂಲಗಳು. ವಾಟ್ಸಪ್ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ. ಇದನ್ನು ನಂಬಿಕೊಂಡು ಶಿವಮೊಗ್ಗ ಜಿಲ್ಲೆಯಾದ್ಯಂತ ಪೂಜೆ ನಡೆಸಲಾಗುತ್ತಿದೆ. ಕೆಲವು ಕಡೆ ನಡುರಾತ್ರಿ ಜನರು ಗುಂಪುಗೂಡಿ ಪೂಜೆ ನಡೆಸಿದ ಮಾಹಿತಿಯು ಇದೆ.

91309411 3071464056252898 7836684241239801856 o.jpg? nc cat=102& nc sid=110474& nc ohc=coaID9sjUO8AX TZuCC& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment