ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಕರೋನ ಲಾಕ್’ಡೌನ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರ ಪರದಾಟದ ನಡುವೆ, ಮನೆ ಮುಂದೆ ದೀಪ ಬೆಳಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ ಸುದ್ದಿಯಿಂದ ಆತಂಕಕ್ಕೀಡಾಗಿದ್ದಾರೆ. ಗುರುವಾರ ರಾತ್ರಿಯಿಂದಲೇ ಹಲವು ಕಡೆಗೆ ಪೂಜೆ ಸಲ್ಲಿಸಲಾಗುತ್ತಿದೆ.
ವಾಟ್ಸಪ್’ನಲ್ಲಿ ಧರ್ಮಸ್ಥಳದ ದೀಪದ ಕಥೆ
ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಮುಂದೆ ಬೆಳಗುತ್ತಿದ್ದ ದೀಪ ನಂದಿ ಹೋಗಿದೆ. ಹಾಗಾಗಿ ಎಲ್ಲರು ಸೇರಿ ಮನೆ ಮುಂದೆ ದೀಪ ಬೆಳಗಬೇಕು ಎಂದು ತಿಳಿಸಲಾಗಿದೆ ಅಂತಾ ವಾಟ್ಸಪ್ ಮೂಲಕ ಹಬ್ಬಿಸಲಾಗಿದೆ. ಈ ಮೆಸೇಜ್ ಜಿಲ್ಲೆಯಾದ್ಯಂತ ವೈರಲ್ ಆಗಿದೆ.

ರಾತ್ರಿಯಿಂದಲೇ ಪೂಜೆ ಶುರು
ವಾಟ್ಸಪ್’ನಲ್ಲಿ ಸಂದೇಶ ಹರಡುತ್ತಿದ್ದಂತೆ ರಾತ್ರಿಯಿಂದಲೇ ಜನರು ಪೂಜೆ ಆರಂಭಿಸಿದ್ದಾರೆ. ಮನೆ ಮುಂದೆ ಸಗಣಿ ಸಾರಿಸಿ, ಹೊಸ್ತಿಲ ಮುಂದೆ ದೀಪ ಬೆಳಗುತ್ತಿದ್ದಾರೆ. ಬೆಳಗ್ಗೆಯು ಜಿಲ್ಲೆಯ ವಿವಿಧೆಡೆ ಪೂಜೆ ನಡೆಯುತ್ತಿದೆ.
ವಾಟ್ಸಪ್ ಸುದ್ದಿ ನಿಜನಾ?
ಶ್ರೀ ಮಂಜನಾಥನ ಸನ್ನಿಧಿಯಲ್ಲಿ ದೀಪ ಆರಿರುವುದು, ಪೂಜೆ ಮಾಡಿ ಅಂತಾ ಜನರಿಗೆ ತಿಳಿಸಿರುವುದೆಲ್ಲ ಸುಳ್ಳು ಅನ್ನುತ್ತಿದೆ ಧರ್ಮಸ್ಥಳ ದೇವಸ್ಥಾನದ ಮೂಲಗಳು. ವಾಟ್ಸಪ್ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ. ಇದನ್ನು ನಂಬಿಕೊಂಡು ಶಿವಮೊಗ್ಗ ಜಿಲ್ಲೆಯಾದ್ಯಂತ ಪೂಜೆ ನಡೆಸಲಾಗುತ್ತಿದೆ. ಕೆಲವು ಕಡೆ ನಡುರಾತ್ರಿ ಜನರು ಗುಂಪುಗೂಡಿ ಪೂಜೆ ನಡೆಸಿದ ಮಾಹಿತಿಯು ಇದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






