DINA BHAVISHYA, 27 NOVEMBER 2024
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
» ಮೇಷ
ಅನಗತ್ಯ ಆಲೋಚನೆಗಳಿಂದ ಸಮಯ ವ್ಯರ್ಥ. ಪ್ರಮುಖ ಪ್ರಕರಣಗಳಲ್ಲಿ ಜಯ ಸಿಗಲಿದೆ. ಮಾತಿನ ಮೇಲೆ ನಿಗಾ ಇರಲಿ. ತಾಳ್ಮೆಯಿಂದ ಇರುವುದು ಉಚಿತ.
» ವೃಷಭ
ವ್ಯಾಪಾರ ಉದ್ದೇಶಕ್ಕೆ ದೂರ ಪ್ರಯಾಣ. ದೀರ್ಘಾವಧಿ ಲಾಭ ದೊರೆಯಲಿದೆ. ಇಂದಿನಿಂದಲೆ ಹಣ ಕೂಡಿಡುವುದನ್ನು ಆರಂಭಿಸಿ. ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ.
» ಮಿಥುನ
ಸಂಜೆ ವೇಳೆಗೆ ಶುಭ ಸುದ್ದಿ ಸಿಗಲಿದೆ. ಕುಟುಂಬದವರಿಗಾಗಿ ವಿಶೇಷ ಯೋಜನೆ ರೂಪಿಸುತ್ತೀರಿ. ಮನೆಯಲ್ಲಿ ನಿಮ್ಮ ಗುಣಗಳ ಬಗ್ಗೆ ಚರ್ಚೆಯಾಗಲಿದೆ. ನೆಮ್ಮದಿ ಇರಲಿದೆ.
» ಕರ್ಕಾಟಕ
ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ. ಮಕ್ಕಳಿಂದ ಖುಷಿ ಮತ್ತು ನೆಮ್ಮದಿ ಲಭಿಸಲಿದೆ. ನಿರೀಕ್ಷೆಗು ಮೀರಿ ಆದಾಯ ದೊರೆಯಲಿದೆ. ಆದರೂ ಚಿಂತೆ ಕಡಿಮೆಯಾಗುವುದಿಲ್ಲ.
» ಸಿಂಹ
ಕೋಪದ ಸ್ವಭಾವದಿಂದ ಹಣ ಸಂಪಾದನೆಗೆ ತೊಡಕಾಗಲಿದೆ. ಸ್ಪಷ್ಟ ಕಾರಣವೇ ಇಲ್ಲದೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಸ್ನೇಹಿತರೊಂದಿಗೆ ಮಾತುಕತೆ ಹಿತ ನೀಡಲಿದೆ.

» ಕನ್ಯಾ
ಯಾವುದೆ ಹೂಡಿಕೆಗೆ ಇಂದು ಒಳ್ಳೆಯ ದಿನವಲ್ಲ. ಜೊತೆಗಿರುವವರ ಹೊಗಳಿಕೆಯಿಂದ ಹಿಗ್ಗುತ್ತೀರಿ. ಇದರಿಂದ ತುಸು ನೆಮ್ಮದಿಯ ಭಾವ ಮೂಡಲಿದೆ. ಒತ್ತಡದ ದಿನವಾದರೂ ಆರೋಗ್ಯದ ಮೇಲೆ ಗಮನವಿರಲಿ.
» ತುಲಾ
ದುಂದು ವೆಚ್ಚಕ್ಕೆ ಕಡಿವಾಣ ಹಾಕಿ. ಅತಿಯಾದ ಖರ್ಚಿನಿಂದಾಗಿ ಕುಟುಂಬದವರು ಚಿಂತೆಗೀಡಾಗುತ್ತಾರೆ. ಆರೋಗ್ಯದ ಮೇಲೆ ಹೆಚ್ಚು ಮುತುವರ್ಜಿ ವಹಿಸಿ.
» ವೃಶ್ಚಿಕ
ಹಣದ ಅವಶ್ಯಕತೆ ಉಂಟಾಗಲಿದೆ. ಆದರೆ ಯಾರೊಬ್ಬರು ನಿಮ್ಮ ನೆರವಿಗೆ ಬರುವುದಿಲ್ಲ. ಹೊರಗಿನವರ ಕಾರಣಕ್ಕಾಗಿ ಸಂಗಾತಿಯೊಂದಿಗೆ ಜಗಳ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.
» ಧನು
ಮಹತ್ವದ ನಿರ್ಧಾರ ಕೈಗೊಳ್ಳಲು ಸುಸಮಯ. ಪೋಷಕರ ಅಭಿಪ್ರಾಯ ಮುಖ್ಯವಾಗಲಿದೆ. ಆಸಕ್ತಿದಾಯ ವಿಷಯಗಳತ್ತ ಹೆಚ್ಚು ಸಮಯ ಕಳೆಯುತ್ತೀರಿ. ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತೀರಿ.
» ಮಕರ
ಬಾಕಿ ಇರುವ ಸಾಲದ ಹಣ ಹಿಂತಿರುಗಲಿದೆ. ಕೈಗೊಂಡ ಯೋಜನೆಗಳು ಅರ್ಧಕ್ಕೆ ಸ್ಥಗಿತವಾಗಲಿದೆ. ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಸಾಧ್ಯತೆ.
» ಕುಂಭ
ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ನಿಮ್ಮ ಸಾಮರ್ಥ್ಯದ ಕುರಿತು ಏಕಾಂತದಲ್ಲಿ ಕುಳಿತು ಯೋಚಿಸಿ. ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿದೆ.
» ಮೀನ
ಆಸ್ತಿ ವ್ಯವಹಾರದಲ್ಲಿ ಲಾಭ ದೊರೆಯಲಿದೆ. ನೆರೆ ಹೊರೆಯವರಿಂದ ತೊಂದರೆ. ಮನೆಯಲ್ಲಿ ಸಮಯ ಕಳೆಯಲು ಬಯಸುತ್ತೀರಿ. ಆದರೆ ಶಾಂತಿಯುತವಾಗಿ ಇರಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ » ಇಂದಿರಾ ಕ್ಯಾಂಟೀನ್ನಲ್ಲಿ ಮಿನಿಸ್ಟರ್ಗೆ ಹೊಟೇಲ್ ಊಟ ಪೂರೈಕೆ, ಒಂದು ದಿನದ ಬಳಿಕ ಹೊರಬಂತು ಸ್ಪಷ್ಟನೆ
Dina Bhavishya
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





