GOOD MORNING SHIMOGA | ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

GOOD MORNING SHIMOGA, 3 OCTOBER 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

#fed740 - SHUBODAYA-SHIVAMOGGA

ವೈರಿಗಳು ಹೊರಗಿಲ್ಲ. ನಮ್ಮೊಳಗೇ ಇದ್ದಾರೆ. ಸಿಟ್ಟು, ಅಹಂ, ಮೋಹ, ದ್ವೇಷಗಳೆ ನಿಜವಾದ ಶತ್ರುಗಳು.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲ ಧಗೆ, ಒಣ ಹವೆ, ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

ಶಿವಮೊಗ್ಗ ಸಿಟಿ ಸುದ್ದಿ

#d4dcdcಮಹಾನಗರ ಪಾಲಿಕೆ : ಶಿವಮೊಗ್ಗದಲ್ಲಿ ಇವತ್ತಿನಿಂದ ಶರನ್ನವರಾತ್ರಿ. 68 ವಿವಿಧ ಕಾರ್ಯಕ್ರಮ ಆಯೋಜನೆ. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಚನ್ನಬಸಪ್ಪ ಹೇಳಿಕೆ.

#d4dcdcಶಿವಮೊಗ್ಗ ಸಿಟಿ : ನಗರದ ವಿವಿಧ ದೇಗುಲಗಳಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ. ಬೆಳಗ್ಗೆಯಿಂದಲೆ ಪೂಜೆಗಳು ಆರಂಭ.

#d4dcdcಕುವೆಂಪು ರಂಗಮಂದಿರ : ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ. ಗಾಂಧೀಜಿ ಸೇರಿದಂತೆ ಅನೇಕರ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆ.

#d4dcdcಶಿವಮೊಗ್ಗ ಸಿಟಿ : ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ನಗರದಲ್ಲಿ ಪಾದಯಾತ್ರೆ ನಡೆಸಲಾಯಿತು. ಗಾಂಧಿ ಟೋಪಿ ಧರಿಸಿ, ಗಾಂಧೀಜಿ ಪರ ಘೋಷಣೆ ಮೊಳಗಿಸುತ್ತ ಪಾದಯಾತ್ರೆ ನಡೆಸಲಾಯಿತು.

#d4dcdcಗೋಪಿ ಸರ್ಕಲ್‌ : ಬಿಜೆಪಿ ನಗರ ಘಟಕದ ವತಿಯಿಂದ ಖಾದಿ ಉತ್ಸವ. ಖಾದಿ ಉತ್ಪನ್ನಗಳ ಮಾರಾಟ ಮಳಿಗೆಗೆ ಸಂಸದ ರಾಘವೇಂದ್ರ ಚಾಲನೆ.

#d4dcdcಶಿವಮೊಗ್ಗ ಸಿಟಿ : ಮೂಡ ಹಗರಣದಲ್ಲಿ ಆಗಿರುವ ತಪ್ಪು ಮರೆಮಾಚಲು ಸಾಧ್ಯವಿಲ್ಲ. ಯಾರೆ ತಪ್ಪು ಮಾಡಿದ್ದರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದ ರಾಘವೇಂದ್ರ ಹೇಳಿಕೆ.

#d4dcdcಶಿವಮೊಗ್ಗ ಸಿಟಿ : ಮೂಡ ಹಗರಣದ ವಿರುದ್ಧ ಬಿಜೆಪಿಯ ಹೋರಾಟವನ್ನು ಲಘುವಾಗಿ ಪರಿಗಣಿಸಲಾಗಿತ್ತು. ಈಗ ಸಿದ್ದರಾಮಯ್ಯ ಅವರ ಪತ್ನಿ ಸೈಟ್‌ ಹಿಂತಿರುಗಿಸಿದ್ದಾರೆ. ಇನ್ನಾದರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಎಂಎಲ್‌ಸಿ ಡಿ.ಎಸ್‌.ಅರುಣ್‌ ಆಗ್ರಹ.

ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಈ ರಾಶಿಯವರಿಗೆ ಸ್ತ್ರೀ ದೋಷ, ಹಣಕಾಸು ಸಮಸ್ಯೆ

ತಾಲೂಕು ಸುದ್ದಿಗಳು

#d4dcdcಸಕ್ರೆಬೈಲು : ಶಿವಮೊಗ್ಗ ದಸರಾಗೆ ಬಿಡಾರದ ಆನೆಗಳಿಗೆ ಆಹ್ವಾನ. ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು.

#d4dcdcಹೊಳೆಹೊನ್ನೂರು : ಆನವೇರಿಯಲ್ಲಿ ತಗಡಿನ ಶೆಡ್‌ ನಿರ್ಮಾಣದ ವೇಳೆ ವಿದ್ಯುತ್‌ ಅವಘಡಕ್ಕೆ ರಕ್ಷಿತ್‌ (22) ಸಾವು. ಕೂಡ್ಲಿಯಲ್ಲಿ ತುಂಗಭದ್ರ ಸಂಗಮದಲ್ಲಿ ಸ್ನಾನಕ್ಕೆ ಇಳಿದಿದ್ದ ಹರ್ಷಿತ್‌ (23) ನಾಪತ್ತೆ.

#d4dcdcಸಾಗರ : ಹೆಗ್ಗೋಡಿನ ನೀನಾಸಂನಲ್ಲಿ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮದಲ್ಲಿ ಪರಿಸರ ಅಂಕಣಕಾರ ನಾಗೇಶ್‌ ಹೆಗಡೆ ಭಾಗಿ. ಚಳವಳಿಗಳ ಸಂದರ್ಭ ಕಲೆಗಳ ಮೂಲಕ ಕಲಾವಿದರು ಜನರ ಬಳಿ ಸಮಸ್ಯೆ ಕೊಂಡೊಯ್ಯುತ್ತಿದ್ದರು. ಈಗಲೂ ಕಲೆಗಳು ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿವೆ ಎಂದರು.

#d4dcdcರಿಪ್ಪನ್‌ಪೇಟೆ : ಬಿಜೆಪಿಯಿಂದ ಉಚ್ಛಾಟಿತರಾಗಿರುವ ಮಾಜಿ ಸಚಿವ ಕೆ.ಎಸ್‌.ಈ‍ಶ್ವರಪ್ಪ ಅವರ ಸಲಹೆ ಪಕ್ಷಕ್ಕೆ ಅಗತ್ಯವಿಲ್ಲ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿಕೆ.

#d4dcdcಶಿಮುಲ್‌ : ಹಾಲು ಉತ್ಪಾದಕರಿಂದ ಖರೀದಿ ದರ 90 ಪೈಸೆ ಇಳಿಸಿದ ಹಾಲು ಒಕ್ಕೂಟ. ಪರಿಷ್ಕೃತ ದರ ಅ.1ರಿಂದಲೇ ಜಾರಿಗೆ ಬಂದಿದೆ.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಯಾವ್ಯಾವ ಗ್ಯಾರಂಟಿ ಯೋಜನೆ ಎಷ್ಟು ಜನರಿಗೆ ತಲುಪುತ್ತಿದೆ? ಇಲ್ಲಿದೆ ಡಿಟೇಲ್ಸ್‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment