SHIVAMOGGA LIVE NEWS | 11 SEPTEMBER 2023
SHIMOGA : ಹಿರಿಯ ನ್ಯಾಯವಾದಿ (Advocate), ಸಾಮಾಜಿಕ ಹೋರಾಟಗಾರ್ತಿ ಮಂಜುಳಾ ದೇವಿ (67) ಭಾನುವಾರ ನಿಧನರಾದರು. ಇವರು ಶಿವಮೊಗ್ಗ ನ್ಯಾಯಾಲಯದ (Court) ಮೊದಲ ಮಹಿಳಾ ನ್ಯಾಯಾವಾದಿ.
![]() |
ತುಂಗಾ ಮೂಲ ಉಳಿಸಿ ಹೋರಾಟ
ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಮಂಜುಳಾ ದೇವಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವಿವಾಹಿತರಾಗಿದ್ದ ಮಂಜುಳಾದೇವಿ ಶಾಲಾ ಗೇಣಿ ಜಮೀನು ಹೋರಾಟ ಸೇರಿ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಇದನ್ನೂ ಓದಿ – ಮಹಿಳೆಯರಿಗೆ ಉಚಿತ ಪ್ರಯಾಣ, ಶಿವಮೊಗ್ಗದಲ್ಲಿ ಭರ್ಜರಿ ರೆಸ್ಪಾನ್ಸ್, ಈತನಕ ಎಷ್ಟು ಮಂದಿ ಓಡಾಡಿದ್ದಾರೆ?
ಚಳವಳಿಗಳ ಜೊತೆಗೆ ವಕೀಲಿ ವೃತ್ತಿಯನ್ನು ಮುಂದುವರೆಸಿದ್ದರು. ಜಿಲ್ಲೆಯ ಹಲವು ಹೆಸರಾಂತ ವಕೀಲರು ಇವರ ಗರಡಿಯಲ್ಲಿ ಕಲಿತಿದ್ದಾರೆ. ರಾಜಕಾರಣದಲ್ಲು ತೊಡಗಿದ್ದ ಮಂಜುಳಾ ದೇವಿ ಅವರು ಶಿವಮೊಗ್ಗ ವಿಧಾನಸಭೆ ಚುನಾವಣೆಗು (Election) ಸ್ಪರ್ಧೆ ಮಾಡಿದ್ದರು. ಜನತಾ ಪಕ್ಷ, ಜನತಾದಳ, ಸಂಯುಕ್ತ ಜನತಾದಳ ಸಂಘಟನೆ ಮಾಡಿದ್ದರು ಎಂದು ವಕೀಲ ಕೆ.ಪಿ.ಶ್ರೀಪಾಲ್ ಸಾಮಾಜಿಕ ಜಾಲತಾಣದಲ್ಲಿ ಮಂಜುಳಾದೇವಿ ಅವರನ್ನು ಸ್ಮರಿಸಿದ್ದಾರೆ.
ಭಾನುವಾರ ಮಂಜುಳಾದೇವಿ ಅವರು ಕೊನೆಯುಸಿರೆಳೆದಿದ್ದು, ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200