ಶಿವಮೊಗ್ಗ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯವಾದಿ ಇನ್ನಿಲ್ಲ, ಅವರ ಕುರಿತ ಮಾಹಿತಿ ಇಲ್ಲಿದೆ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 11 SEPTEMBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಹಿರಿಯ ನ್ಯಾಯವಾದಿ (Advocate), ಸಾಮಾಜಿಕ ಹೋರಾಟಗಾರ್ತಿ ಮಂಜುಳಾ ದೇವಿ (67) ಭಾನುವಾರ ನಿಧನರಾದರು. ಇವರು ಶಿವಮೊಗ್ಗ ನ್ಯಾಯಾಲಯದ (Court) ಮೊದಲ ಮಹಿಳಾ ನ್ಯಾಯಾವಾದಿ.

ಶಿವಮೊಗ್ಗ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾವಾದಿ. 1976ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ಖ್ಯಾತ ಮನೋವೈದ್ಯ ಡಾ.ಅಶೋಕ್ ಪೈ ಅವರ ತಂದೆ ವಕೀಲರಾದ ಕಟೀಲ್ ಅಪ್ಪು ಪೈ ಅವರ ಜೂನಿಯರ್ ಆಗಿ ವೃತ್ತಿ ಶುರು ಮಾಡಿದ್ದರು.ಕೆ.ಪಿ.ಶ್ರೀಪಾಲ್‌, ನ್ಯಾಯವಾದಿ

ತುಂಗಾ ಮೂಲ ಉಳಿಸಿ ಹೋರಾಟ

ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಮಂಜುಳಾ ದೇವಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವಿವಾಹಿತರಾಗಿದ್ದ ಮಂಜುಳಾದೇವಿ ಶಾಲಾ ಗೇಣಿ ಜಮೀನು ಹೋರಾಟ ಸೇರಿ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಇದನ್ನೂ ಓದಿ – ಮಹಿಳೆಯರಿಗೆ ಉಚಿತ ಪ್ರಯಾಣ, ಶಿವಮೊಗ್ಗದಲ್ಲಿ ಭರ್ಜರಿ ರೆಸ್ಪಾನ್ಸ್‌, ಈತನಕ ಎಷ್ಟು ಮಂದಿ ಓಡಾಡಿದ್ದಾರೆ?

ಚಳವಳಿಗಳ ಜೊತೆಗೆ ವಕೀಲಿ ವೃತ್ತಿಯನ್ನು ಮುಂದುವರೆಸಿದ್ದರು. ಜಿಲ್ಲೆಯ ಹಲವು ಹೆಸರಾಂತ ವಕೀಲರು ಇವರ ಗರಡಿಯಲ್ಲಿ ಕಲಿತಿದ್ದಾರೆ. ರಾಜಕಾರಣದಲ್ಲು ತೊಡಗಿದ್ದ ಮಂಜುಳಾ ದೇವಿ ಅವರು ಶಿವಮೊಗ್ಗ ವಿಧಾನಸಭೆ ಚುನಾವಣೆಗು (Election) ಸ್ಪರ್ಧೆ ಮಾಡಿದ್ದರು. ಜನತಾ ಪಕ್ಷ, ಜನತಾದಳ, ಸಂಯುಕ್ತ ಜನತಾದಳ ಸಂಘಟನೆ ಮಾಡಿದ್ದರು ಎಂದು ವಕೀಲ ಕೆ.ಪಿ.ಶ್ರೀಪಾಲ್‌ ಸಾಮಾಜಿಕ ಜಾಲತಾಣದಲ್ಲಿ ಮಂಜುಳಾದೇವಿ ಅವರನ್ನು ಸ್ಮರಿಸಿದ್ದಾರೆ.

ಭಾನುವಾರ ಮಂಜುಳಾದೇವಿ ಅವರು ಕೊನೆಯುಸಿರೆಳೆದಿದ್ದು, ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment