ಬಸವನಗಂಗೂರು ಸೇತುವೆ ಬಳಿ ಬೈಕ್ ಸವಾರನ ಮೇಲೆ ರಾಡ್‌ನಿಂದ ಹಲ್ಲೆ, ಗಂಭೀರ ಗಾಯ, ಘಟನೆಗೇನು ಕಾರಣ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 APRIL 2023

SHIMOGA : ಅಪಘಾತದ ವೇಳೆ ಜಗಳವಾಗಿದ್ದು ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ (Attack) ನಡೆಸಲಾಗಿದೆ. ಇಬ್ಬರು ಯುವಕರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

Crime-News-General-Image

ಬಸವನಗಂಗೂರು ಸೇತುವೆ ಬಳಿ ಘಟನೆ ಸಂಭವಿಸಿದೆ. ಆದರ್ಶ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಪ್ರಸನ್ನ ಎಂಬುವವರ ಮೇಲೆಯು ಹಲ್ಲೆಯಾಗಿದೆ.

ಏನಿದು ಪ್ರಕರಣ?

ಆದರ್ಶ ಮತ್ತು ಪ್ರಸನ್ನ ಬೈಕಿನಲ್ಲಿ ಸ್ನೇಹಿತನ ಹುಟ್ಟುಹಬ್ಬಕ್ಕೆ ತೆರಳುತ್ತಿದ್ದರು. ಬಸವನಗಂಗೂರು ಸೇತುವೆ ಬಳಿ ಎದುರಿನಿಂದ ಬಂದ ಓಮ್ನಿ ಕಾರು ಮತ್ತು ಬೈಕ್ ಡಿಕ್ಕಿಯಾಗಿದೆ. ಘಟನೆ ಬಳಿಕ ಓಮ್ನಿ ಕಾರು ಚಾಲಕ ಫೋನ್ ಮಾಡಿದ್ದು, ಸುಮಾರು 20 ಮಂದಿ ಬೈಕುಗಳು, ಎರಡು ಟಿಪ್ಪರ್ ಲಾರಿಗಳಲ್ಲಿ ಬಂದಿದ್ದಾರೆ. ಕಬ್ಬಿಣ ರಾಡ್‍ ಮತ್ತು ಜಾಕ್ ಲಿವರ್‍ನಿಂದ ಹಲ್ಲೆ (Attack) ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಿಂದ ಜೀರೋ ಟ್ರಾಫಿಕ್‌ನಲ್ಲಿ ವಿಶೇಷ ಆಂಬುಲೆನ್ಸ್‌ನಲ್ಲಿ ಡಾ.ವಿನಯ್ ಬೆಂಗಳೂರಿಗೆ ಶಿಫ್ಟ್

ಘಟನೆಯಲ್ಲಿ ಆದರ್ಶ ಎಂಬಾತನಿಗೆ ಗಂಭೀರ ಗಾಯವಾಗಿದೆ. ಪ್ರಸನ್ನ ಎಂಬಾತನ ಮೇಲೂ ಹಲ್ಲೆಯಾಗಿದೆ. ಆದರ್ಶ ಮತ್ತು ಪ್ರಸನ್ನ ಅವರ ಸ್ನೇಹಿತರು, ಪೋಷಕರು ಸ್ಥಳಕ್ಕೆ ಭೇಟಿ ನೀಡಿ ಜಗಳ ಬಿಡಿಸಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment