| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS | 17 DECEMBER 2022
ಶಿವಮೊಗ್ಗ : ಬಸ್ ಹತ್ತುವ ಭರದಲ್ಲಿ ವ್ಯಕ್ತಿಯೊಬ್ಬರ ಕಾಲಿಗೆ ಸೂಟ್ ಕೇಸ್ (suit case) ತಾಗಿದೆ. ಇದೆ ವಿಚಾರವಾಗಿ ಎರಡು ಕಡೆಯವರು ಕೈ ಕೈ ಮಿಲಾಯಿಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು, ಪ್ರತಿದೂರು ದಾಖಲಾಗಿದೆ.

ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ತಾಹೀರ್ ಪರ್ವೀನ್ ಮತ್ತು ಅವರ ಮಗ ದಾವಣಗೆರೆ ಬಸ್ ಹತ್ತಲು ತೆರಳುತ್ತಿದ್ದರು. ತಾಹೀರ್ ಪರ್ವಿನ್ (60) ಅವರ ಮಗ ಹಿಡಿದುಕೊಂಡಿದ್ದ ಸೂಟ್ ಕೇಸ್ (suit case) ಕೇಶವಮೂರ್ತಿ (70) ಎಂಬುವವರ ಕಾಲಿಗೆ ತಾಗಿದೆ. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿದ್ದಾರೆ.
(suit case)
ಕೇಶವಮೂರ್ತಿ ಆರೋಪವೇನು?
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಶವಮೂರ್ತಿ ಅವರು ದೂರು ನೀಡಿದ್ದಾರೆ. ‘ಸೂಟ್ ಕೇಸ್ ಕಾಲಿಗೆ ತಾಗಿತು. ಸರಿಯಾಗಿ ನೋಡಿಕೊಂಡು ಬಾರಯ್ಯ ಎಂದಿದ್ದಕ್ಕೆ ಆ ವ್ಯಕ್ತಿ ಅವಾಚ್ಯವಾಗಿ ಬೈದು, ಹೊಡೆಯಲು ಆರಂಭಿಸಿದ. ಇದೆ ಹೊತ್ತಿಗೆ ಇನ್ನೂ ಮೂವರು ಯುವಕರು ಆತನ ಜೊತೆಯಾಗಿ ತನ್ನ ಮೇಲೆ ಹಲ್ಲೆ ಮಾಡಿ, ಬಟ್ಟೆ ಹರಿದಿದ್ದಾರೆ. ತನ್ನ ಬಳಿ ಇದ್ದ 3500 ರೂ. ನಗದು, 8 ಗ್ರಾಂ ತೂಕದ ಬಂಗಾರದ ಚೈನ್ ಕಿತ್ತುಕೊಂಡು ಹೋಗಿದ್ದಾರೆ. ತಾಹೀರ್ ಪರ್ವಿನ್ ಎಂಬ ಮಹಿಳೆ ಯುವಕರಿಗೆ ಕುಮ್ಮಕ್ಕು ನೀಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ತಾಹೀರ್ ಪರ್ವೀನ್ ದೂರಿನಲ್ಲಿ ಏನಿದೆ?
ಘಟನೆ ಸಂಬಂಧ ತಾಹೀರ್ ಪರ್ವೀನ್ ಕೂಡ ದೂರು ನೀಡಿದ್ದಾರೆ. ‘ಸೂಟ್ ಕೇಸ್ ತಾಗಿದ್ದಕ್ಕೆ ಆ ವ್ಯಕ್ತಿ ಅವಾಚ್ಯವಾಗಿ ಬೈದಿದ್ದಾರೆ. ಗೊತ್ತಾಗಿಲ್ಲ ಎಂದು ತಾನು ಮತ್ತು ಮಗ ಹೇಳಿದೆವು. ಇದಕ್ಕೆ ಸುಮ್ಮನಾಗದ ಆ ವ್ಯಕ್ತಿ ಅವಾಚ್ಯವಾಗಿ ನಿಂದಿಸಿ, ತನ್ನ ಮಗನಿಗೆ ಹೊಡೆದರು. ಬಿಡಿಸಲು ಹೋದಾಗ ತನ್ನನ್ನು ಎಳೆದಾಡಿ, ಬಟ್ಟೆ ಹರಿದಿದ್ದಾರೆ. ಈ ಹೊತ್ತಿಗೆ ಸಾರ್ವಜನಿಕರು ಜಗಳ ಬಿಡಿಸಿದ್ದಾರೆ. ಆಗ ಆ ವ್ಯಕ್ತಿಯ ಬಟ್ಟೆ ಹರಿದಿದೆ’ ಎಂದು ದೂರಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ 20 ಚೆಕ್ ಪೋಸ್ಟ್, ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, 46 ಜನರ ವಿರುದ್ಧ ಕೇಸ್
ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಕೋಟೆ ದೇವಸ್ಥಾನದಲ್ಲಿ 30 ದಿನ ಸೀತಾಕಲ್ಯಾಣ ಶತಮಾನೋತ್ಸವ, ಏನೇನೆಲ್ಲ ಕಾರ್ಯಕ್ರಮ ಇರಲಿದೆ?
- BREAKING NEWS – ಶಿವಮೊಗ್ಗದ ಖ್ಯಾತ ಡಾಕ್ಟರ್ ಮತ್ತು ಪುತ್ರ ನೇಣಿಗೆ ಶರಣು
- ಬಿಸ್ಕತ್ತು, ಕೇಕ್, ಪಿಜ್ಜಾ, ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ, ಯಾರೆಲ್ಲ ಭಾಗವಹಿಸಬಹುದು?
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
![]()