ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ಕೆಎಸ್ಸಿಎ ಹಾಗೂ ಜೆಎನ್ಎನ್ಸಿಇ ಕ್ರೀಡಾಂಗಣದಲ್ಲಿ ಡಿ.8ರಿಂದ ವಿಜಯ್ ಮರ್ಚೆಂಟ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ (Cricket Tournament) ನಡೆಯಲಿದೆ. ಬಿಸಿಸಿಐ ಮೂರನೇ ಬಾರಿಗೆ ಇಲ್ಲಿ ಪ್ರಮುಖ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ.
16 ವರ್ಷದೊಳಗಿನ ಪ್ರತಿಭೆಗಳನ್ನು ಗುರುತಿಸಲು ಪಂದ್ಯಾವಳಿ ಅತ್ಯಂತ ಮಹತ್ವದ್ದೆನಿಸಿದೆ. ದೇಶದ ವಿವಿಧ ರಾಜ್ಯಗಳ 36 ತಂಡಗಳು ಹಲವು ಕಡೆಗಳಲ್ಲಿ ಆಯೋಜಿಸಿರುವ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ತಲಾ ಆರು ತಂಡಗಳ ಆರು ಗುಂಪುಗಳನ್ನು ರಚಿಸಲಾಗಿದೆ.
ಎ ಗುಂಪಿನ ಎಲ್ಲ ಪಂದ್ಯಗಳು ಶಿವಮೊಗ್ಗದ ಮೂರು ಕ್ರೀಡಾಂಗಣದಲ್ಲಿ ನಡೆಯಲಿವೆ. ಎ ಗುಂಪಿನಲ್ಲಿ ಚಂಡೀಗಢ, ಗುಜರಾತ್, ತಮಿಳುನಾಡು, ತ್ರಿಪುರ, ಉತ್ತರಪ್ರದೇಶ ಹಾಗೂ ವಿದರ್ಭ ತಂಡಗಳಿವೆ. ಕರ್ನಾಟಕ ತಂಡವು ಡಿ ಗುಂಪಿನಲ್ಲಿ ಛತ್ತೀಸ್ಗಢದಲ್ಲಿ ಆಡಲಿದೆ. ಈ ಗುಂಪಿನಲ್ಲಿ ಮಧ್ಯಪ್ರದೇಶ, ಉತ್ತರಾಖಂಡ, ಆಂಧ್ರಪ್ರದೇಶ, ಗೋವಾ ಹಾಗೂ ಬರೋಡ ತಂಡಗಳಿವೆ.

ಇದನ್ನೂ ಓದಿ » ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ, ಡಿ.ಎಸ್.ಅರುಣ್ಗೆ ಭರ್ಜರಿ ಗೆಲುವು
ಪಂದ್ಯಾವಳಿ ಡಿ.31ಕ್ಕೆ ಮುಕ್ತಾಯವಾಗಲಿದೆ. ಪಂದ್ಯಗಳಿಗೆ ಕೆಂಪು ಬಣ್ಣದ ಚೆಂಡು ಬಳಸಲಾಗುತ್ತದೆ. ಆಟಗಾರರು ಬಿಳಿ ಬಣ್ಣದ ಉಡುಪಿನಲ್ಲಿ ಕಣಕ್ಕಿಳಿಯಲಿದ್ದಾರೆ. ಪಂದ್ಯ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿವೆ. 16 ವರ್ಷದೊಳಗಿನವರ ರಾಷ್ಟ್ರೀಯ ತಂಡದ ಆಯ್ಕೆಗಾರರು ಪಂದ್ಯ ಗಳನ್ನು ವೀಕ್ಷಿಸಲು ಶಿವಮೊಗ್ಗಕ್ಕೆ ಆಗಮಿಸುವರು ಎಂದು ಶಿವಮೊಗ್ಗ ವಲಯ ಸಂಚಾಲಕ ಎಚ್.ಎಸ್. ಸದಾನಂದ ತಿಳಿಸಿದ್ದಾರೆ.
ಯಾವ್ಯಾವ ಪಂದ್ಯ ಎಲ್ಲೆಲ್ಲಿ ನಡೆಯಲಿದೆ?
ಡಿ.8 ರಿಂದ 10 : ತಮಿಳುನಾಡು – ವಿದರ್ಭ – ಜೆಎನ್ಎನ್ಸಿಇ ಕಾಲೇಜು
ತ್ರಿಪುರ -ಉತ್ತರಪ್ರದೇಶ : ಕೆಎಸ್ಸಿಎ ಕ್ರೀಡಾಂಗಣ
ಡಿ.12 ರಿಂದ 14 : ಗುಜರಾತ್ – ತಮಿಳುನಾಡು : ಕೆಎಸ್ಸಿಎ -1
ಚಂಡೀಗಢ – ಉತ್ತರಪ್ರದೇಶ : ಕೆಎಸ್ಸಿಎ-2
ಡಿ.18 ರಿಂದ 20 : ಗುಜರಾತ್ – ತ್ರಿಪುರಾ : ಕೆಎಸ್ಸಿಎ-1
ಉತ್ತರಪ್ರದೇಶ –ವಿದರ್ಭ : ಕೆಎಸ್ಸಿಎ – 2
ಚಂಡೀಗಢ – ತಮಿಳುನಾಡು : ಜೆಎನ್ಎನ್ಸಿಇ ಕಾಲೇಜು
ಡಿ.23 ರಿಂದ 25 : ತಮಿಳುನಾಡು -ಉತ್ತರಪ್ರದೇಶ : ಕೆಎಸ್ಸಿಎ-1
ಗುಜರಾತ್ – ವಿದರ್ಭ : ಕೆಎಸ್ಸಿಎ-2
ಚಂಡೀಗಢ – ತ್ರಿಪುರಾ : ಜೆಎನ್ಎನ್ ಸಿಇ ಕಾಲೇಜು
ಡಿ.29 ರಿಂದ 31 : ತಮಿಳುನಾಡು – ತ್ರಿಪುರಾ : ಕೆಎಸ್ಸಿಎ-2
ಗುಜರಾತ್ – ಉತ್ತರಪ್ರದೇಶ : ಜೆಎನ್ಎನ್ಸಿಇ ಕಾಲೇಜು
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















