ಶಿವಮೊಗ್ಗದಲ್ಲಿ ಇವತ್ತು ಮದ್ಯ ಮಾರಾಟ ಇಲ್ಲ, ಭದ್ರಾವತಿಯಲ್ಲೂ DRY DAY ಘೋಷಣೆ, ಯಾವ್ಯಾವಾಗ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

 SHIVAMOGGA LIVE NEWS 

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ | ಗಣಪತಿ ವಿಸರ್ಜನೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆಯಾ ತಾಲೂಕಿನಲ್ಲಿ ಪ್ರಮುಖ ಗಣಪತಿ ವಿಸರ್ಜನೆ ವೇಳೆ ಮದ್ಯ ಮಾರಾಟ ಇರುವುದಿಲ್ಲ. ಆ ದಿನವನ್ನು DRY DAY ಎಂದು ಘೋಷಿಸಲಾಗಿದೆ.

ನಿಷೇಧಕ್ಕೆ ಕಾರಣವೇನು?

TODAY-LINK-NEWS-IMAGE.jpgಶಿವಮೊಗ್ಗ ಜಿಲ್ಲೆಯ ಪ್ರಮುಖ ಮತ್ತು ಅತಿ ಸೂಕ್ಷ್ಮ ಅನಿಸುವ ಗಣಪತಿ ವಿಸರ್ಜನೆ ವೇಳೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಶಾಂತಿ ಮತ್ತು ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಪೊಲೀಸ್ ಇಲಾಖೆ ಕೋರಿಕೆಯನ್ನು ಪರಿಗಣಿಸಿ DRY DAY ಎಂದು ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಮದ್ಯ ತಯಾರಿಕೆ, ಮಾರಾಟ, ಸರಬರಾಜು ಮತ್ತು ಸಾಗಣೆಯನ್ನು ನಿಷೇಧಿಸಲಾಗಿದೆ.

ಯಾವ್ಯಾವ ತಾಲೂಕಿನಲ್ಲಿ ಯಾವಾಗ DRY DAY?

ಶಿವಮೊಗ್ಗ ತಾಲೂಕು

ಸೆ.2ರಂದು 3ನೇ ದಿನ ಗಣಪತಿ ವಿಸರ್ಜನೆ ನಡೆಯಲಿದೆ. ಆದ್ದರಿಂದ ಶಿವಮೊಗ್ಗ ನಗರದಲ್ಲಿ ಸೆ.2ರ ಬೆಳಗ್ಗೆ 6 ಗಂಟೆಯಿಂದ ಸೆ.3ರ ಬೆಳಗ್ಗೆ 6 ಗಂಟೆವೆರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಸೆ.4ರಂದು ಗಣಪತಿ ವಿಸರ್ಜನೆಯ 5ನೇ ದಿನ. ಶಿವಮೊಗ್ಗ ನಗರದಲ್ಲಿ ಸೆ.4ರ ಬೆಳಗ್ಗೆ 6 ಗಂಟೆಯಿಂದ ಸೆ.5ರ ಬೆಳಗ್ಗೆ 6 ಗಂಟೆವರೆಗೆ DRY DAY ಎಂದು ಘೋಷಿಸಲಾಯಿತು.

ಸೆ.6ರಂದು ಟ್ಯಾಂಕ್ ಮೊಹಲ್ಲಾ ಹರಿಜನ ಸೇವಾ ಸಮಿತಿ ಗಣಪತಿ ವಿಸರ್ಜನೆ. ಆದ್ದರಿಂದ ಶಿವಮೊಗ್ಗ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಹಾರನಹಳ್ಳಿ ಶಿವಾಜಿ ಗಣಪತಿಯನ್ನು ಸೆ.8ರಂದು ವಿಸರ್ಜಿಸಲಾಗುತ್ತಿದೆ. ಹಾಗಾಗಿ ಹಾರನಹಳ್ಳಿಯಲ್ಲಿ ಸೆ.7ರ ಸಂಜೆ 6 ಗಂಟೆಯಿಂದ ಸೆ.9ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟ ಇರುವುದಿಲ್ಲ.

ಸೆ.9ರಂದು ಶಿವಮೊಗ್ಗ ಹಿಂದೂ ಮಹಾಸಭಾ (HINDU MAHASABHA) ಗಣಪತಿ ವಿಸರ್ಜನೆ ನಡೆಯಲಿದೆ. ಶಿವಮೊಗ್ಗ ನಗರದಲ್ಲಿ ಸೆ.8ರಂದು ಸಂಜೆ 6 ಗಂಟೆಯಿಂದ ಸೆ.10ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಸೆ.10ರಂದು ಆಯನೂರಿನ ಸರ್ವ ಸಿದ್ದಿ ವಿನಾಯಕ ಗಣಪತಿ ವಿಸರ್ಜನೆ ನೆರವೇರಲಿದೆ. ಸೆ.9ರ ಸಂಜೆ 6 ಗಂಟೆಯಿಂದ ಸೆ.11ರ ಬೆಳಗ್ಗೆ 6 ಗಂಟೆವರೆಗೆ ಆಯನೂರಿನಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಅಶೋಕ ರಸ್ತೆಯ ಓಂ ಗಣಪತಿ ವಿಸರ್ಜನೆ ಸೆ.11ರಂದು ನಡೆಯಲಿದೆ. ಆದ್ದರಿಂದ ಸೆ.10ರಂದು ಸಂಜೆ 6 ಗಂಟೆಯಿಂದ ಸೆ.12ರ ಬೆಳಗ್ಗೆ 6 ಗಂಟೆವರೆಗೆ ಶಿವಮೊಗ್ಗ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಭದ್ರಾವತಿ ತಾಲೂಕು

ಸೆ.8ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ನಡೆಯಲಿದೆ. ಆದ್ದರಿಂದ ಸೆ.7ರ ಬೆಳಗ್ಗೆ 6 ಗಂಟೆಯಿಂದ ಸೆ.9ರಂದು ಬೆಳಗ್ಗೆ 6 ಗಂಟೆವರೆಗೆ ಭದ್ರಾವತಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಹೊಳೆಹೊನ್ನೂರು ನೃಪತುಂಗ ಸರ್ಕಲ್ ಗಣಪತಿಯನ್ನು ಸೆ.10ರಂದು ವಿಸರ್ಜಿಸಲಾಗುತ್ತಿದೆ. ಸೆ.10ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಹೊಳೆಹೊನ್ನೂರು ಪೇಟೆಯಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ.

Shimoga Nanjappa Hospital

ಹೊಳೆಹೊನ್ನೂರಿನ ಭಗೀರಥ ಸರ್ಕಲ್ ಗಣಪತಿ ಮೂರ್ತಿ ವಿಸರ್ಜನೆ ಕಾರ್ಯವು ಸೆ.12ರಂದು ನೆರವೇರಲಿದೆ. ಆದ್ದರಿಂದ ಸೆ.12ರಂದು ಬೆಳಗ್ಗ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಹೊಳೆಹೊನ್ನೂರು ಪಟ್ಟಣದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಸೆ.18ರಂದು ಹೊಸಮನೆಯ ಓಂ ಹಿಂದೂ ಕೋಟೆ ಗಣಪತಿ ಮತ್ತು ನ್ಯೂ ಟೌನ್ ಕೂಲಿ ಬ್ಲಾಕ್ ಶೆಡ್ ಶ್ರೀರಾಮ ಸೇವಾ ಸಮಿತಿ ಗಣಪತಿ ವಿಸರ್ಜನೆ ನೆರವೇರಿಲಿದೆ. ಸೆ.17ರ ಬೆಳಗ್ಗೆ 6 ಗಂಟೆಯಿಂದ ಸೆ.19ರ ಬೆಳಗ್ಗೆ 6 ಗಂಟೆವರೆಗೆ DRY DAY ಘೋಷಿಸಲಾಗಿದೆ.

Shimoga Nanjappa Hospital

ಇದನ್ನೂ ಓದಿ – ಹಾಡಹಗಲೆ ಸ್ಕೆಚ್, ವಿನೋಬನಗರ ಪೊಲೀಸರ ದಾಳಿ, ಸಿಕ್ಕಿಬಿದ್ದವರ ಬಳಿ ಏನೇನಿತ್ತು?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment