ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 9 NOVEMBER 2023
SHIMOGA : ರೈತರ (Farmers) ಸಾಲ ವಸೂಲಿಗೆ ಕೆನರಾ ಬ್ಯಾಂಕ್ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿ, ರಾಜ್ಯ ರೈತ ಸಂಘದಿಂದ ಜಿಲ್ಲಾ ಪಂಚಾಯಿತಿ ಎದುರಿನ ಕೆನರಾ ಲೀಡ್ ಬ್ಯಾಂಕ್ ಎದುರು ಅನಾರೋಗ್ಯ ಪೀಡಿತ ಸಾಲಗಾರ ಕುಪೇಂದ್ರಪ್ಪ ಕುಟುಂಬದ ಜತೆ ಪ್ರತಿಭಟನೆ ನಡೆಸಲಾಯಿತು.
5 ಲಕ್ಷ ಬಾಕಿಗೆ 1 ಕೋಟಿ ಬಡ್ಡಿ
ತಾಲೂಕಿನ ಹೊಳೆಹಟ್ಟಿ ಗ್ರಾಮದ ಕುಪ್ಪೇಂದ್ರಪ್ಪ ಎಂಬುವರು ವಿವಿಧ ಉದ್ದೇಶ ಗಳಿಗೆ ಹೊಳಲೂರಿನ ಕೆನರಾ ಬ್ಯಾಂಕಿನಿಂದ ಒಟ್ಟು 9.52 ಲಕ್ಷ ರೂ. ಸಾಲ ಪಡೆದಿದ್ದರು. ಇದರಲ್ಲಿ 4.5 ಲಕ್ಷ ರೂ. ಬ್ಯಾಂಕಿಗೆ ಜಮೆ ಮಾಡಿದ್ದಾರೆ. ಉಳಿದ 5.02 ಲಕ್ಷ ಪಾವತಿಸಲು ಬ್ಯಾಂಕಿಗೆ ಹೋದಾಗ ಅಸಲಿನ ಜತೆಗೆ 1 ಕೋಟಿ 1 ಲಕ್ಷ ರೂ. ಬಾಕಿ ಇದೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. 9 ಲಕ್ಷಕ್ಕೆ ಬೃಹತ್ ಮೊತ್ತದ ಬಡ್ಡಿ ಹಾಕುವುದು ನ್ಯಾಯವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಮನೆ ಸ್ವಾದೀನಕ್ಕೆ ಬ್ಯಾಂಕ್ ನೊಟೀಸ್
ಬ್ಯಾಂಕಿನವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಸ್ವಾದೀನ ಪಡಿಸಿಕೊಳ್ಳುವ ನೋಟಿಸ್ ಅಂಟಿಸಿ ಹೋಗಿದ್ದಾರೆ. ಇದರಿಂದ ಕುಪೇಂದ್ರಪ್ಪ ಅವರ ಕುಟುಂಬ ಆತ್ಮಹತ್ಯೆಯ ದಾರಿ ಹಿಡಿದಿತ್ತು. ಗ್ರಾಮಸ್ಥರೆಲ್ಲ ಸೇರಿ ಚಂದಾ ಸಂಗ್ರಹಿಸಿ ಮನೆಯಿಂದ ಕುಟುಂಬದವರನ್ನು ಹೊರ ಹಾಕುವುದನ್ನು ತಪ್ಪಿಸಲು ಸಿದ್ದರಿದ್ದಾರೆ ಎಂದು ರೈತ ಸಂಘದ ಕಾರ್ಯಕರ್ತರು ತಿಳಿಸಿದರು.
[su_quote cite=”ಹೆಚ್.ಆರ್.ಬಸವರಾಜಪ್ಪ, ರೈತ ಸಂಘ“]ಆರ್ಬಿಐ ಗೈಡ್ಲೈನ್ ಒಂದೊಂದು ಬ್ಯಾಂಕ್ಗೆ ಒಂದೊಂದು ಬಗೆ ಇರುತ್ತದಾ? ಉಳಿದ ಬ್ಯಾಂಕ್ಗಳು ರಿಯಾಯಿತಿ ನೀಡುತ್ತಿವೆ. ಆದರೆ ಕೆನರಾ ಬ್ಯಾಂಕ್ ಲಾಭ ತೋರಿಸಲು ಈ ರೀತಿ ಮಾಡುತ್ತಿವೆ.[/su_quote]
ಮನೆಯಲ್ಲಿ ಎಲ್ಲರೂ ಅನಾರೋಗ್ಯ ದಿಂದ ಬಳಲುತ್ತಿದ್ದಾರೆ. ಅನ್ಯಾಯವಾಗಿ ಬ್ಯಾಂಕ್ ವಿಧಿಸಿದ ಕೋಟಿಗಟ್ಟಲೆ ಹಣ ಪಾವತಿ ಮಾಡುವುದು ಅಸಾಧ್ಯ. ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಡಿದ ಬ್ಯಾಂಕ್ಗಳು ರೈತರಿಂದ ಹೆಚ್ಚಿನ ಹಣ ವಸೂಲು ಮಡುವುದು ನ್ಯಾಯವಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು. ನ್ಯಾಯ ದೊರಕದಿದ್ದಲ್ಲಿ ರೈತ ಸಂಘ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿತು.

[su_quote cite=”ನೆಲ್ಸನ್, ಲೀಡ್ ಬ್ಯಾಂಕ್ ಅಧಿಕಾರಿ“]2009ರಲ್ಲಿ ಎನ್ಪಿಎ ಆಗಿತ್ತು. ಆರ್ಬಿಐ ಗೈಡ್ಲೈನ್ನಂತೆಯೆ ಎಲ್ಲವು ಮಾಡಿದ್ದೇವೆ. ಕಂಪ್ಯೂಟರ್ನಲ್ಲಿ 1.06 ಕೋಟಿ ಬಂದಿದೆ. ಲೋನ್ ತೀರಿಸಲು ಹಲವು ಅವಕಾಶ ಕೊಟ್ಟಿದ್ದೆವು. 20 ಲಕ್ಷಕ್ಕೆ ಸೆಟಲ್ ಮಾಡಲು ನಮ್ಮ ಅಧಿಕಾರಿಗಳು ತಿಳಿಸಿದ್ದರು. ಆದರೂ ಯಾವುದೆ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬರಗಾಲ ಘೋಷಣೆ ಮೊದಲೆ ಈ ಆದೇಶ ಆಗಿದೆ. ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ.[/su_quote]

ಸಚಿವ, ಸಂಸದರಿಗು ಮನವಿ
ಜಿಲ್ಲಾ ಪಂಚಾಯಿತಿಯಲ್ಲಿ ಕೆಡಿಪಿ ತ್ರೈಮಾಸಿಕ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ರೈತ ಸಂಘ ಸಮಸ್ಯೆಯನ್ನು ಮನವರಿಕೆ ಮಾಡಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಎಚ್.ಆರ್.ಬಸವರಾಜಪ್ಪ, ಈರಣ್ಣ ಅರೆಬಿಳಚಿ, ಎಸ್.ಶಿವಮೂರ್ತಿ, ಹಿಟ್ಟೂರು ರಾಜು ಸೇರಿದಂತೆ ಮತ್ತಿತರರಿದ್ದರು.
ಇದನ್ನೂ ಓದಿ – ಸಾಗರ – ಸೊರಬ – ಶಿಕಾರಿಪುರದಿಂದ ಬೆಂಗಳೂರಿಗೆ ಎರಡು KSRTC ಪಲ್ಲಕ್ಕಿ ಬಸ್, ಟೈಮಿಂಗ್ ಪ್ರಕಟ
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















