ಶಿವಮೊಗ್ಗ: ಹೆದ್ದಾರಿಯಲ್ಲಿದ್ದ ಬೃಹತ್ ಗುಂಡಿಗಳನ್ನು (potholes) ಮುಚ್ಚಲು ಆಡಳಿತ ವ್ಯವಸ್ಥೆ ವಿಫಲವಾದ ಹಿನ್ನೆಲೆ ಸ್ಥಳೀಯರೇ ಸ್ವಯಂಪ್ರೇರಿತರಾಗಿ ಗುಂಡಿ ಮುಚ್ಚಿದ್ದಾರೆ. ಗಾಡಿಕೊಪ್ಪ ಸರ್ಕಲ್ನಲ್ಲಿ ಹೆದ್ದಾರಿಯಲ್ಲಿ ಬೃಹತ್ ಗುಂಡಿಯಾಗಿತ್ತು. ಇದರಿಂದ ಅಪಘಾತಗಳು ಸಂಭವಿಸಿದ್ದವು.
ಗುಂಡಿಯಿಂದಾಗಿ ನಿರಂತರ ಅಪಘಾತ
ಗಾಡಿಕೊಪ್ಪದಲ್ಲಿ ಹಾದು ಹೋಗಿರುವ ಬಿ.ಹೆಚ್.ರಸ್ತೆಯಲ್ಲಿ ಸರ್ಕಲ್ ಬಳಿ ರಸ್ತೆ ಹದಗೆಟ್ಟಿದೆ. ಬೃಹತ್ ಗುಂಡಿಯಿಂದಾಗಿ ಪ್ರತಿನಿತ್ಯ ವಾಹನ ಸವಾರರಿಗೆ ಸಂಕಷ್ಟ ಎದುರಾಗುತ್ತಿತ್ತು. ಈ ಗುಂಡಿಯಿಂದಾಗಿ ಹಲವು ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿದ್ದರು. ಈ ಹಿನ್ನೆಲೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಜೆಲ್ಲಿ, ಮಣ್ಣು, ಸಿಮೆಂಟ್ ತಂದ ಜನ
ಸಮೀಪದಲ್ಲಿ ನಿರ್ಮಾಣ ಹಂತದ ಮನೆಯಿಂದ ಸಿಮೆಂಟ್, ಜೆಲ್ಲಿ, ಮರಳು ತಂದು ಸ್ಥಳೀಯರೆ ಗುಂಡಿ ಮುಚ್ಚಿದ್ದಾರೆ. ಅಲ್ಲದೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಹೆದ್ದಾರಿಯಲ್ಲಿ ಇರುವ ಗುಂಡಿಗಳನ್ನು ಕೂಡಲೆ ಮುಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಭದ್ರಾವತಿಯ ಆರು ಮಂದಿಗೆ 3 ವರ್ಷ ಜೈಲು, ₹2,30,000 ದಂಡ, ಏನಿದು ಕೇಸ್?
