ಕಮಲ್‌ ಹಾಸನ್‌ ನಟನೇ ಅಲ್ಲ, ಆರಗ ಆಕ್ರೋಶ, ಕಿಮ್ಮನೆಗು ತಿರುಗೇಟು ನೀಡಿದ ಮಾಜಿ ಮಿನಿಸ್ಟರ್‌, ಏನಂದ್ರು?

ಶಿವಮೊಗ್ಗ: ಕಮಲ್‌ ಹಾಸನ್‌ ನಟನಲ್ಲ (Actor). ಅವರೊಬ್ಬ ರಾಜಕಾರಣಿ. ಅವರಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದು ಸೂಕ್ತವಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಕಮಲ್‌ ಹಾಸನ್‌ರನ್ನು ನಿರ್ಲಕ್ಷಿಸುವುದೇ ಸೂಕ್ತ. ಕನ್ನಡಕ್ಕೆ ಅದರದ್ದೆ ಆದ ತೂಕವಿದೆ. ಕಮಲ್‌ ಹಾಸನ್‌ರಿಂದ ಕನ್ನಡಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದರು.

https://chat.whatsapp.com/JPJ0lTQsTKf365Fqu6Q7cd
ಈ ಫೋಟೊ ಮೇಲೆ ಕ್ಲಿಕ್‌ ಮಾಡಿ, ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಿರಿ.

ಹಿಂದೂಗಳಿಗೆ ತೊಂದರೆ ಕೊಡ್ತಿದೆ ಕಾಂಗ್ರೆಸ್

ಮಂಗಳೂರು ಮಾತ್ರವಲ್ಲ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತುಷ್ಟೀಕರಣದ ರಾಜಕಾರಣಕ್ಕೆ ಬಹಳ ಜನ ಬಲಿಯಾಗಿದ್ದಾರೆ. ಮುಸ್ಲಿಂ ಮುಖಂಡರು ಕಾಂಗ್ರೆಸ್‌ ತೊರೆಯುವುದಾಗಿ ತಿಳಿಸಿದ್ದಾರೆ. ಆಗ ಕಾಂಗ್ರೆಸ್‌ ಪಕ್ಷ ತರಾತುರಿ ತೋರಿಸಿದೆ ಎಂದರು.

Araga-Jnanendra-speaks-to-media-in-Shimoga

ಈಗ ಹಿಂದುಗಳಿಗೆ ತೊಂದರೆ ಕೊಡಲು, ಪೊಲೀಸರನ್ನು ಮನೆಗೆ ನುಗ್ಗಿಸಲು ಕಾಂಗ್ರೆಸ್‌ ಮುಂದಾಗಿದೆ. ಕೆಲವರನ್ನು ಗಡಿಪಾರು ಮಾಡುವುದು, ಪ್ರಕರಣ ದಾಖಲಿಸುವುದು ಸೇರಿ ಹಿಂದೂ ಮುಖಂಡರಿಗೆ ಹಿಂಸೆ ನೀಡುತ್ತಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು. ‌

Toyota-demo-car-sale.

ಹತ್ತು ವರ್ಷ ರೈಲು ಬಿಟ್ಟಿದ್ದಾರೆ

ಹತ್ತು ವರ್ಷ ಕಿಮ್ಮನೆ ರತ್ನಾಕರ್‌ ಅವರು ರೈಲು ಬಿಟ್ಟಿದ್ದಾರೆ. ಭಾಷಣ ಮಾಡುವುದು ಬಿಟ್ಟರೆ ಬೇರಾವ ಕೆಲಸವು ಮಾಡಿಲ್ಲ. ಅವರು ಏನಾದರು ಕೆಲಸ ಮಾಡಿದ್ದರೆ ತೋರಿಸಲಿ. ಎರಡೂವರೆ ವರ್ಷಕ್ಕೆ ಸಿದ್ದರಾಮಯ್ಯ ಅವರು ಕಿಮ್ಮನೆ ರತ್ನಾಕರ್‌ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದ್ದರು. ಅವರು ರಾಜ್ಯ ಖಾತೆ ಸಚಿವರಾಗಿದ್ದರು. ನಾನು ಕ್ಯಾಬಿನೆಟ್‌ ಸಚಿವನಾಗಿದ್ದೆ ಎಂದು ತಿಳಿಸಿದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಶಿವಮೊಗ್ಗದಲ್ಲಿ ಆರ್‌ಸಿಬಿ ಹವಾ, ಗೆಲುವಿಗಾಗಿ ಪ್ರಾರ್ಥನೆ, ರಕ್ತದಾನ, ಹಾಲಿನ ಅಭಿಷೇಕ

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : June 3, 2025 at 4:53 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜೂನ್ 3, 2025

Leave a Comment