ಪ್ರಯಾಣಿಕರೆ ಗಮನಿಸಿ, ಡಿ.31ರಿಂದ ರಸ್ತೆಗಿಳಿಲ್ಲ KSRTC ಬಸ್, ಕಾರಣವೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 28 DECEMBER 2024

ಶಿವಮೊಗ್ಗ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರು ಡಿಸೆಂಬರ್‌ 31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಮುಷ್ಕರ ಆರಂಭಕ್ಕು ಮುನ್ನ ಸರ್ಕಾರ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ KSRTC ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಈ ಸಂದರ್ಭ ಮುಖಂಡರು ಮುಷ್ಕರಕ್ಕೆ ಮೂರು ಪ್ರಮುಖ ಕಾರಣ ವಿವರಿಸಿದರು.

City Co Operative Bank Kiran

ಮೂರು ಪ್ರಮುಖ ಡಿಮಾಂಡ್‌ಗಳು

» ಡಿಮಾಂಡ್‌ 1 : KSRTCಯಲ್ಲಿ 4 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಅದರಂತೆ ಬಸವರಾಜ ಬೊಮ್ಮಾಯಿ ಸರ್ಕಾರ ವೇತನ ಪರಿಷ್ಕರಿಸಿತ್ತು. ಆದರೆ ವೇತನ ಹೆಚ್ಚಳ 38 ತಿಂಗಳಿಂದ ಬಾಕಿ ಇದೆ. ಇದನ್ನು ಕೂಡಲೆ ಪಾವತಿಸಬೇಕು.

ksrtc%20workers

» ಡಿಮಾಂಡ್‌ 2 : ಕೈಗಾರಿಕೆ ಒಪ್ಪಂದಂತೆ ನಾಲ್ಕು ವರ್ಷವಾದರು ವೇತನ ಪರಿಷ್ಕರಣೆ ಆಗಿಲ್ಲ. ಈ ಕೂಡಲೆ ಸರ್ಕಾರ ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೆ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಬೇಕು.

» ಡಿಮಾಂಡ್‌ 3 : ನಿವೃತ್ತ ನೌಕರರಿಗೆ ಸುತ್ತೋಲೆ ಹಣ ಬಿಡಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಅಗ್ರಹಿಸಿದರು.

RED-LINE

ಯಾರೆಲ್ಲ ಏನೆಲ್ಲ ಹೇಳಿದರು?

ಕೈಗಾರಿಕಾ ಒಪ್ಪಂದದಂತೆ ವೇತನ ಪರಿಷ್ಕರಣೆ ಮಾಡಬೇಕಿತ್ತು‌. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ವೇತನ ಪರಿಷ್ಕರಣೆ ಮಾಡಿಲ್ಲ. ಹಲವು ಬಾರಿ ಸಭೆಯಾದರು ನಮ್ಮ ಬೇಡಿಕೆ ಈಡೇರಿಲ್ಲ. ಈಚೆಗೆ ಬೆಳಗಾವಿ ವಿಧಾನಸೌಧದ ಮುಂಭಾಗ ಹೋರಾಟ ಮಾಡಿದ್ದೆವು. ಕಾನೂನು ಪ್ರಕಾರ ಮುಷ್ಕರಕ್ಕೆ 21 ದಿನ ಮೊದಲು ನೊಟೀಸ್ ಕೊಡಬೇಕು. ಅಂದು ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ನಿಯೋಗಕ್ಕೆ ಮುಷ್ಕರದ ನೊಟೀಸ್ ನೀಡಿದ್ದೇವೆ. ಈತನ ಸರ್ಕಾರ ನಮ್ಮನ್ನು ಕರೆದು ಮಾತನಾಡಿಲ್ಲ.

ಮಹಾದೇವ್‌, ಕೆಎಸ್ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿ

RED-LINE-

KSRTC-Bus-Stand-Shivamogga

ಇದನ್ನೂ ಓದಿ » ಕೆಎಸ್‌ಆರ್‌ಟಿಸಿಯಿಂದ 100 ಅಶ್ವಮೇಧ ಬಸ್ಸುಗಳು, ಹೇಗಿರುತ್ತೆವೆ ಈ ಬಸ್ಸುಗಳು?

ಕೆಎಸ್‌ಆರ್‌ಟಿಸಿ ನೌಕರರು ಶಕ್ತಿ ಯೋಜನೆಯನ್ನು ಯಾವುದೇ ವಿವಾದ ಇಲ್ಲದೆ ಯಶಸ್ವಿಗೊಳಿಸಿ, ಸರ್ಕಾರಕ್ಕೆ ಉತ್ತಮ ಹೆಸರು ತಂದಿದ್ದಾರೆ. ಆದರೆ ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿಗೆ ಬಾಕಿ ಇರುವ ಹಣವನ್ನು ಸರ್ಕಾರ ಸಂಪೂರ್ಣವಾಗಿ ಬಿಡುಗಡೆ ಮಾಡುತ್ತಿಲ್ಲ. ಕೇವಲ ಶೇ.40ರಷ್ಟು ಮಾತ್ರ ಪವಾತಿಸುತ್ತಿದೆ. ಇದರಿಂದ ನಿಗಮಗಳಿಗೆ ಭಾರಿ ತೊಂದರೆ ಆಗುತ್ತಿದೆ.

ರಾಜು ಚಿನ್ನಸ್ವಾಮಿ, ವಿಭಾಗೀಯ ಅಧ್ಯಕ್ಷ, ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌

RED-LINE-

ಸುದ್ದಿಗೋಷ್ಠಿಯಲ್ಲಿ ಲೋಕನಾಥ್, ಕರಿಬಸಪ್ಪ, ನಾಗರಾಜ್, ಮಂಜಪ್ಪ, ಧರ್ಮರಾಜ್, ಗುರುರಾಜ್, ಪೀರ್ ಸಾಬ್ ಸೇರಿ ಹಲವರು ಇದ್ದರು.

ಇದನ್ನೂ ಓದಿ » ಶಕ್ತಿ ಯೋಜನೆ, ಶಿವಮೊಗ್ಗದಲ್ಲಿ ಈವರೆಗೂ ಉಚಿತವಾಗಿ ಓಡಾಡಿದ ಮಹಿಳೆಯರೆಷ್ಟು?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment