ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
CITY NEWS, 8 SEPTEMBER 2024 : ಸಾವಿರ ಕೋಟಿಯ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಶಿವಮೊಗ್ಗದ ನಾಗರಿಕರಿಗೆ ಹೊಸ ಸಮಸ್ಯೆಗಳು ಶುರುವಾಗಿವೆ. ನಗರದಾದ್ಯಂತ ಅಳವಡಿಸಿರುವ ಲಾಕಿಂಗ್ ಟೈಲ್ಸ್ಗಳು (Locking Tiles) ಜನರ ಸುಗಮ ಸಂಚಾರಕ್ಕೆ ಬ್ರೇಕ್ ಹಾಕುತ್ತಿವೆ. ನಮ್ಮೂರು ಸ್ಮಾರ್ಟ್ ಸಿಟಿ ಆಗುವ ಮೊದಲೇ ಚೆನ್ನಾಗಿತ್ತು ಎಂದು ಜನರ ಗೊಣಗುವಂತಾಗಿದೆ.
ನೆಮ್ಮದಿಯ ಒಡಾಟಕ್ಕೆ ‘ಲಾಕ್ʼ
ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಯ ವಾರ್ಡ್ಗಳಲ್ಲಿ ರಸ್ತೆಯ ಎರಡು ಬದಿ ಮತ್ತು ಫುಟ್ ಪಾತ್ಗಳಲ್ಲಿ ಲಾಕಿಂಗ್ ಟೈಲ್ಸ್ ಹಾಕಲಾಗಿದೆ. ಇದರಿಂದ ನಗರದ ರಸ್ತೆಗಳಿಗೆ ಹೈಟೆಕ್ ಲುಕ್ ಬಂದಿತ್ತು. ಆದರೆ ಈ ಲುಕ್ ಕೆಲವೇ ತಿಂಗಳಲ್ಲಿ ಜನರ ನೆಮ್ಮದಿ ಕಸಿಯುತ್ತಿದೆ. ಲಾಕಿಂಗ್ ಟೈಲ್ಸ್ಗಳ ಕಾರಣಕ್ಕೆ ಎಲ್ಲಿ ಬಿದ್ದು ಕೈ, ಕಾಲು ಮುರಿದುಕೊಳ್ಳುತ್ತೇವೋ ಎಂದು ಜನರು ಆತಂಕಕ್ಕೀಡಾಗಿದ್ದಾರೆ.

ಲಾಕಿಂಗ್ ಟೈಲ್ಸ್ನಿಂದ ಏನೆಲ್ಲ ಸಮಸ್ಯೆಯಾಗ್ತಿದೆ?
» ಸಮಸ್ಯೆ 1 : ರಸ್ತೆಯ ಎರಡು ಬದಿಯಲ್ಲಿ ಲಾಕಿಂಗ್ ಟೈಲ್ಸ್ ಹಾಕಲಾಗಿದೆ. ನೀರಿನ ಪೈಪ್ ಲೈನ್, ಕೇಬಲ್ ಅಳವಡಿಕೆ, ಚರಂಡಿ ರಿಪೇರಿ ಸೇರಿದಂತೆ ನಾನಾ ಕಾರಣಕ್ಕೆ ಲಾಕಿಂಗ್ ಟೈಲ್ಸ್ ತೆಗೆಯಲಾಗುತ್ತಿದೆ. ಇವುಗಳನ್ನ ಮತ್ತೆ ಅಳವಡಿಸದೆ ಹಾಗೆ ಬಿಡಲಾಗಿದೆ. ಇದರಿಂದ ಜನರು ರಸ್ತೆ ಬದಿಯಲ್ಲಿ ಓಡಾಡುವುದು ಕಷ್ಟವಾಗಿದೆ.
» ಸಮಸ್ಯೆ 2 : ವಿವಿಧೆಡೆ ಲಾಕಿಂಗ್ ಟೈಲ್ಸ್ಗಳನ್ನೇ ಹಾಕದೆ ಕಾಮಗಾರಿ ಅರೆಬರೆ ಮಾಡಿರುವ ಆರೋಪವಿದೆ. ಇಂತಹ ಕಡೆ ಲಾಕಿಂಗ್ ಟೈಲ್ಸ್ಗಳೇ ಇಲ್ಲವಾಗಿದೆ.

» ಸಮಸ್ಯೆ 3 : ಮೇಲ್ನೋಟಕ್ಕೆ ಲಾಕಿಂಗ್ ಟೈಲ್ಸ್ಗಳಿವೆ. ಆದರೆ ಕಾಮಗಾರಿ ಸಮರ್ಪಕವಾಗಿ ಆಗದೆ ಟೈಲ್ಸ್ ಕುಸಿಯುತ್ತಿವೆ. ಜನ ಫುಟ್ ಪಾತ್ ಮೇಲೆ ನಡೆಯಲು, ರಸ್ತೆ ಬದಿಯಲ್ಲಿ ವಾಹನ ಓಡಿಸಲು ಹೆದರುವಂತಾಗಿದೆ.
» ಸಮಸ್ಯೆ 4 : ರಸ್ತೆ ತಿರುವುಗಳಲ್ಲು ಈ ಟೈಲ್ಸ್ ಹಾಕಲಾಗಿದೆ. ಮಳೆಯಾದರೆ ಈ ತಿರುವುಗಳಲ್ಲಿ ದ್ವಿಚಕ್ರ ವಾಹನ ಸವಾರರು ಮೈಯಲ್ಲ ಕಣ್ಣಾಗಿಸಿಕೊಳ್ಳಬೇಕಾಗಿದೆ. ಯಾಮಾರಿದರೆ ಆಸ್ಪತ್ರೆ ಹಾದಿ ಹಿಡಿಯಬೇಕಾಗುತ್ತದೆ.

» ಸಮಸ್ಯೆ 5 : ಕೆಲವೆಡೆ ಟೈಲ್ಸ್ಗಳನ್ನು ತೆಗೆಯಲಾಗಿದೆ. ಅದಕ್ಕೆ ಕಾರಣವೇನು ಎಂಬುದು ಸ್ಥಳೀಯರಾರಿಗೂ ಗೊತ್ತಿಲ್ಲ. ಈಗ ಅಲ್ಲಿ ಗುಂಡಿಗಳಾಗಿದ್ದು, ಪಾಲಿಕೆಯಾಗಲಿ, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳಾಗಲಿ ಇತ್ತ ಕಣ್ಣು ಹಾಯಿಸಿಲ್ಲ. ಜನರಿಗೆ ಸಮರ್ಪಕ ಕಾರಣವನ್ನು ನೀಡಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಗೆ ಶಿವಮೊಗ್ಗ ನಗರ ಆಯ್ಕೆಯಾದಾಗ ಖುಷಿ ಪಟ್ಟಿದ್ದ ನಾಗರಿಕರು ಈಗ ತಲೆ ಚೆಚ್ಚಿಕೊಳ್ಳುತ್ತಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ ಸಾವಿರ ಕೋಟಿಯ ಕಾಮಗಾರಿಗಳನ್ನು ಮುಗಿಸಲಾಗಿದೆ. ಈಗ ಒಂದೊಂದೆ ಸಮಸ್ಯೆ ತಲೆ ಎತ್ತುತ್ತಿವೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಪೊಲೀಸ್, RAF ರೂಟ್ ಮಾರ್ಚ್, ಎಲ್ಲೆಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















