ಬಿಜೆಪಿ ಮಡಿಲಿಗೆ ಶಿವಮೊಗ್ಗ ಪಾಲಿಕೆ ಮೇಯರ್, ಉಪಮೇಯರ್, ಯಾರಿಗೆಷ್ಟು ಓಟ್ ಬಂತು ಗೊತ್ತಾ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | 28 ನವೆಂಬರ್ 2018

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಲತಾ ಗಣೇಶ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಎಸ್.ಎನ್.ಚನ್ನಬಸಪ್ಪ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

47003313 2162086187386024 6472598569286107136 n.jpg? nc cat=102& nc ht=scontent bom1 1

PHOTO | ನೂತನ ಮೇಯರ್, ಉಪಮೇಯರ್’ಗೆ ಅಭಿನಂದನೆ ಸಲ್ಲಿಸಿದ ಶಾಸಕ ಈಶ್ವರಪ್ಪ

ಕುತೂಹಲ ಮೂಡಿಸಿದ ಕಾಂಗ್ರೆಸ್, ಜೆಡಿಎಸ್ ನಡೆ

ಸಂಖ್ಯಾಬಲ ಇಲ್ಲದಿದ್ದರೂ ಕಡೇ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷ, ಮೇಯರ್, ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿತ್ತು. ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷ ಬೆಂಬಲ ಘೋಷಿಸಿತ್ತು. ಹಾಗಾಗಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಯ್ತು.

46524160 2162086157386027 596266066275991552 n.jpg? nc cat=108& nc ht=scontent bom1 1

PHOTO | ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು

ಯಾರೆಲ್ಲ ಸ್ಪರ್ಧಿಸಿದ್ದರು? ಯಾರಿಗೆಷ್ಟು ಓಟು ಬಂತು?

ಮೇಯರ್ ಸ್ಥಾನ, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಹಾಗಾಗಿ ಬಿಜೆಪಿಯ ಲತಾ ಗಣೇಶ್, ಕಾಂಗ್ರೆಸ್ ಪಕ್ಷದ ಮಂಜುಳಾ ಶಿವಣ್ಣ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿಯ ಲತಾ ಗಣೇಶ್ ಅವರಿಗೆ 26 ಮತಗಳು, ಮಂಜುಳಾ ಶಿವಣ್ಣ ಅವರಿಗೆ 12 ಮತಗಳು ಲಭಿಸಿದವು.

47139240 2162086044052705 6461972240375218176 n.jpg? nc cat=107& nc ht=scontent bom1 1

PHOTO | ಕೈ ಎತ್ತಿ ಮತ ಚಲಾಯಿಸುತ್ತಿರುವ ಬಿಜೆಪಿ ಸದಸ್ಯರು

ಇನ್ನು, ಉಪಮೇಯರ್ ಸಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬಿಜೆಪಿಯಿಂದ ಎಸ್.ಎನ್.ಚನ್ನಬಸಪ್ಪ, ಕಾಂಗ್ರೆಸ್ ಪಕ್ಷದಿಂದ ಯೋಗೇಶ್ ಸ್ಪರ್ಧಿಸಿದ್ದರು. ಚನ್ನಬಸಪ್ಪ 26 ಮತಗಳನ್ನು ಪಡೆದರೆ, ಯೋಗೇಶ್ 12 ಮತಗಳನ್ನು ಪಡೆದುಕೊಂಡರು. ಹಾಗಾಗಿ ಮೇಯರ್, ಉಪಮೇಯರ್ ಸ್ಥಾನಗಳೆರಡೂ ಬಿಜೆಪಿ ಪಾಲಾಯಿತು.

47000960 2162086034052706 1275914825205022720 n.jpg? nc cat=101& nc ht=scontent bom1 1

PHOTO | ತಟಸ್ಥವಾಗಿ ಉಳಿದ ಕೇಬಲ್ ನಾಗರಾಜ್, ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ ಶಿವಣ್ಣ, ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಯೋಗೇಶ್

ತಟಸ್ಥವಾಗಿ ಉಳಿದ ಕೇಬಲ್ ನಾಗರಾಜ್

ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ತಟಸ್ಥವಾಗಿ ಉಳಿದು ಗಮನ ಸೆಳೆದರು. ಬಿಜೆಪಿ ಅಭ್ಯರ್ಥಿಗೂ ಬೆಂಬಲ ನೀಡದೆ, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಗೂ ಬೆಂಬಲ ಕೊಡದೆ ಕಾರ್ಪೊರೇಟರ್ ಕೇಬಲ್ ನಾಗರಾಜ್ ತಟಸ್ಥವಾಗಿ ಉಳಿದರು. ಕೇಬಲ್ ನಾಗರಾಜ್ ಅವರು, ವಿದ್ಯಾನಗರ ದಕ್ಷಿಣ ವಾರ್ಡ್’ನಿಂದ ಆಯ್ಕೆಯಾಗಿದ್ದಾರೆ.

46837521 2162086074052702 4000074966010691584 n.jpg? nc cat=102& nc ht=scontent bom1 1

PHOTO | ಚುನಾವಣಾಧಿಕಾರಿ ಶಿವಯೋಗಿ ಕಳಸದ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಪಾಲಿಕೆ ಕಮಿಷನರ್ ಚಾರುಲತಾ ಸೋಮಲ್

ಇದ್ದದ್ದು 40 ಓಟ್, ಚಲಾವಣೆಯಾಗಿದ್ದು 39

ಮೇಯರ್, ಉಪಮೇಯರ್ ಚುನಾವಣೆಗೆ ಪಾಲಿಕೆ ಸದಸ್ಯರು ಸೇರಿ 40 ಮಂದಿಗೆ ಮತದಾನಕ್ಕೆ ಅವಕಾಶವಿತ್ತು. ಶಾಸಕರಾದ ಕೆ.ಎಸ್.ಈಶ್ವರಪ್ಪ, ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್ ಮತ ಚಲಾಯಿಸಿದರು. ಆದರೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಗೈರಾಗಿದ್ದರು. ಹಾಗಾಗಿ 39 ಮತಗಳಷ್ಟೇ ಚಲಾವಣೆಯಾದವು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಕರೆ ಮಾಡಿ | 9964634494

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment