ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 5 FEBRUARY 2024
SHIMOGA : ಯುಟ್ಯೂಬ್, ಗೂಗಲ್ ಮ್ಯಾಪ್ನಲ್ಲಿ ರೆಸ್ಟೋರೆಂಟ್ಗಳಿಗೆ ರಿವ್ಯೂ ಬರೆದು ಹಣ ಸಂಪಾದಿಸಬಹುದು. ಪ್ರತಿ ರಿವ್ಯೂಗೆ 50 ರೂ.ನಂತೆ ನಿತ್ಯ 2 ಸಾವಿರದಿಂದ 2700 ರೂ.ವರೆಗು ಪಡೆಯಬಹುದು ಎಂದು ವಾಟ್ಸಪ್ನಲ್ಲಿ ಬಂದ ಮೆಸೇಜ್ ನಂಬಿ ಉಪ್ಯಾಸಕಿಯೊಬ್ಬರು (ಹೆಸರು ಗೌಪ್ಯ) 12.69 ಲಕ್ಷ ರೂ. ಕಳೆದುಕೊಂಡಿದ್ದಾರೆ.
ರಿಸೆಪ್ಷನಿಸ್ಟ್ ಪ್ರಿಯಾ ತಂದ ಸಂಕಷ್ಟ
ಜ.22ರಂದು ವಾಟ್ಸಪ್ನಲ್ಲಿ ಬಂದ ಮೆಸೇಜ್ನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದ ಉಪನ್ಯಾಸಕಿ ಟೆಲಿಗ್ರಾಂನಲ್ಲಿ ಡೈಲಿ ಟಾಸ್ಕ್ ಮತ್ತು ರಿಸೆಪ್ಷನಿಸ್ಟ್ ಪ್ರಿಯಾ ಎಂಬ ಗ್ರೂಪ್ಗಳಿಗೆ ಜಾಯಿನ್ ಆಗಿದ್ದರು. ಅಲ್ಲಿ ಒದಗಿಸಿದ ರೆಸ್ಟೋರೆಂಟ್ನ ಯುಟ್ಯೂಬ್ ಮತ್ತು ಗೂಗಲ್ ಮ್ಯಾಪ್ ಲಿಂಕ್ನಲ್ಲಿ ರಿವ್ಯು ಬರೆದಿದ್ದರು. ಉಪನ್ಯಾಸಕಿಯ ಬ್ಯಾಂಕ್ ಖಾತೆಗೆ 100 ರೂ.ನಿಂದ 225 ರೂ.ವರೆಗೆ 17 ಬಾರಿ ಹಣ ಬಂದಿತ್ತು. ಬಳಿಕ ಸಾವಿರ ರೂ. ಹೂಡಿಕೆ ಮಾಡಿದರೆ 1300 ರೂ., 3 ಸಾವಿರ ರೂ. ಹೂಡಿಕೆಗೆ 3900 ರೂ. ನೀಡುವುದಾಗಿ ಟೆಲಿಗ್ರಾಂ ಮೂಲಕ ತಿಳಿಸಲಾಗಿತ್ತು.
ಲಕ್ಷ ಲಕ್ಷ ಹೋಗಿದ್ದು ಬರಲೇ ಇಲ್ಲ
ಉಪನ್ಯಾಸಕಿಯ ವಿಶ್ವಾಸ ಸಂಪಾದಿಸಿದ ವಂಚಕರು ದೊಡ್ಡ ಮೊತ್ತದ ಹೂಡಿಕೆ ಮಾಡಿ, ಲಾಭ ಪಡೆಯುವಂತೆ ಪುಸಲಾಯಿಸಿದ್ದರು. ಜ.25 ರಿಂದ 29ರವರೆಗೆ ವಿವಿಧ ಬ್ಯಾಂಕ್ ಖಾತೆ, ಯುಪಿಐ ಐಡಿಗೆ ಒಟ್ಟು 12.69 ಲಕ್ಷ ರೂ. ಹಣ ಹಾಕಿಸಿಕೊಂಡಿದ್ದರು. ಆದರೆ ಆ ಹಣವಾಗಲಿ, ಲಾಭಾಂಶವಾಗಲಿ ಉಪನ್ಯಾಸಕಿಯ ಖಾತೆಗೆ ಮರಳಲಿಲ್ಲ. ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ಉಪನ್ಯಾಸಕಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
‘ಮನೆಯಲ್ಲೇ ಕಲಸ’, ಹೆಸರಲ್ಲಿ ಮೋಸ
ಮನೆಯಲ್ಲೆ ಕೆಲಸ. ನಿತ್ಯ ಸಾವಿರಾರು ರೂ. ಹಣ ಸಂಪಾದನೆ ಹೆಸರಲ್ಲಿ ವಂಚನೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಲವರು ಈ ವಂಚಕರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಪರಿಚಯವಿಲ್ಲದೆ, ಕಂಪನಿಗಳ ವಿಳಾಸ, ಅಧಿಕೃತ ಕರಾರುಗಳಿಲ್ಲದೆ ಹಣ ಹೂಡಿಕೆ ಮಾಡಿದರೆ ವಂಚನೆಗೊಳಗಾಗಬೇಕಾಗುತ್ತದೆ. ಈ ಕುರಿತು ಸೈಬರ್ ಕ್ರೈಮ್ ಪೊಲೀಸರು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಿದ್ದೂ ಲಾಭಾಂಶದ ಆಸೆಗೆ ಬಿದ್ದು ಜನ ಹಣ ಕಳೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ – ಮ್ಯಾಟ್ರಿಮೋನಿ ಆ್ಯಪ್ ಬಳಸುತ್ತಿದ್ದ ಉಪನ್ಯಾಸಕಿಗೆ ಇಂಗ್ಲೆಂಡ್ನಿಂದ ಗಿಫ್ಟ್, ಕಾದಿತ್ತು ಶಾಕ್, ಶಿವಮೊಗ್ಗದಲ್ಲಿ ಕೇಸ್
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















