ಧಗಧಗ ಹೊತ್ತಿ ಉರಿಯಲಿದೆ ಗಾಂಧಿ ಪಾರ್ಕ್‌, ಕೆಲವರಿಗಿದು ಓಪನ್‌ ಬಾರ್‌, ಹೇಗಿದೆ ಒಳಗಿನ ಸ್ಥಿತಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಆಕಸ್ಮಿಕವಾದ ಒಂದೇ ಒಂದು ಬೆಂಕಿ ಕಿಡಿ ಸಾಕು, ಧಗಧಗ ಹೊತ್ತಿ ಉರಿಯಲಿದೆ ಇಡೀ ಪಾರ್ಕ್‌! ಕಂಡ ಕಂಡಲ್ಲಿ ಸಿಗುತ್ತೆ ಬಿಯರ್‌ ಬಾಟಲ್‌! ರಾಶಿ ರಾಶಿ ಕಸ, ಅಲ್ಲಲ್ಲಿ ಉಪಕರಣಗಳು ಧ್ವಂಸ! ಅಹ್ಲಾದಕರ ವಾತಾವರಣ ಸೃಷ್ಟಿಸಬೇಕಿದ್ದ ಉದ್ಯಾನವನ (Park) ಈಗ ಅನೈತಿಕ ಚಟುವಟಿಕೆಯ ತಾಣ!

ಇದಷ್ಟು ನಗರದ ಹೃದಯ ಭಾಗದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಗಾಂಧಿ ಪಾರ್ಕ್‌ (Gandhi Park) ವಾಸ್ತವ ಸ್ಥಿತಿ. ಈ ಉದ್ಯಾನದಿಂದ ಕೆಲವೇ ಮೀಟರ್‌ ಅಂತರದಲ್ಲಿ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಆಡಳಿತ ಕಚೇರಿ, ಮಹಾನಗರ ಪಾಲಿಕೆ ಕಚೇರಿಗಳಿವೆ. ಜಿಲ್ಲೆ ಮತ್ತು ಸಿಟಿಯ ಅಭಿವೃದ್ಧಿಯ ಹೊಣೆ ಹೊತ್ತ ಕಚೇರಿಗಳೆಲ್ಲ ಸುತ್ತಲು ಇದ್ದರು ಗಾಂಧಿ ಪಾರ್ಕ್‌ ಮಾತ್ರ ಕಸದ ಕೊಂಪೆಯಾಗಿದೆ. ಅನೈತಿಕ ಚಟುವಟಿಕೆಯ ತಾಣವಾಗಿದೆ.

ಕಸದ ರಾಶಿಯ ಸ್ವಾಗತ

ಗಾಂಧಿ ಪಾರ್ಕ್‌ಗೆ ಪ್ರವೇಶಕ್ಕೆ ವಯಸ್ಕರಿಗೆ 10 ರೂ., ಮಕ್ಕಳಿಗೆ 5 ರೂ. ಟಿಕೆಟ್‌ ಖರೀದಿಸಬೇಕು. ಒಳಗೆ ಕಾಲಿಡುತ್ತಲೆ ಕಸದ ರಾಶಿ, ಧೂಳು ಹಿಡಿದ ಕಾರಂಜಿ ಸ್ವಾಗತ ಕೋರುತ್ತವೆ.

Gandhi Park Shimoga poor maintenance

ಒಣಗಿದ ಗಿಡ, ಮರಗಳು

ನಾನಾ ಬಗೆ ಗಿಡಮರಗಳು, ಚಿವುಗುಡುವ ಹಕ್ಕಿಗಳು ಗಾಂಧಿ ಪಾರ್ಕ್‌ನ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಸದ್ಯ ಗಿಡ, ಮರಗಳು ಒಣಗಿವೆ. ಒಣಗಿದ ಎಲೆ ರಾಶಿರಾಶಿಯಾಗಿ ಬಿದ್ದಿವೆ. ಆಕಸ್ಮಿಕವಾಗಿ ಬೆಂಕಿ ಕಿಡಿ ಬಿದ್ದರೆ ಇಡೀ ಗಾಂಧಿ ಪಾರ್ಕ್‌ ಧಗಧಗ ಹೊತ್ತಿ ಉರಿಯುವ ಅಪಾಯವಿದೆ.

Gandhi Park Shimoga poor maintenance

ತುಕ್ಕು ಹಿಡಿದ ಮಕ್ಕಳ ಆಟಿಕೆಗಳು

ಮಕ್ಕಳ ಅಚ್ಚುಮೆಚ್ಚಿನ ತಾಣವಾಗಬೇಕಿದ್ದ ಗಾಂಧಿ ಪಾರ್ಕ್‌ಗೆ ಮಕ್ಕಳನ್ನು ಕರೆತಂದರೆ ಜೀವಕ್ಕೆ ಅಪಾಯವಾಗುವ ಸ್ಥಿತಿ ಇದೆ. ಆಟಿಕೆಗಳು ತುಕ್ಕು ಹಿಡಿದಿವೆ. ಮುರಿದು ಮೂಲೆಗುಂಪಾಗಿವೆ. ಟಾಯ್‌ ಟ್ರೈನ್‌ ಕೂಡ ತುಕ್ಕು ಹಿಡಿದು ಹಳಿ ಮೇಲೆ ನಿಂತಿದೆ.

Gandhi Park Shimoga poor maintenance

ಕಂಡ ಕಂಡಲ್ಲೆಲ್ಲ ರಾಶಿ ರಾಶಿ ಕಸ

ಗಾಂಧಿ ಪಾರ್ಕ್‌ನಲ್ಲಿ ಎಲ್ಲೆ ನೋಡಿದರು ರಾಶಿ ರಾಶಿಯಾಗಿ ಕಸ ಒಟ್ಟುಗೂಡಿಸಲಾಗಿದೆ. ಪ್ಲಾಸ್ಟಿಕ್‌ ಬಾಟಲಿಗಳು, ಕವರ್‌, ಪೇಪರ್‌ ಸೇರಿ ಎಲ್ಲೆಲ್ಲು ಕಸ ಕಾಣಿಸುತ್ತದೆ.

Gandhi Park Shimoga poor maintenance

ಕುಡಿಯೋಕೆ ನೀರು ಸಿಗಲ್ಲ

ಗಾಂಧಿ ಪಾರ್ಕ್‌ನಲ್ಲಿ ಕುಡಿಯೋಕೆ ನೀರು ಸಿಗಲ್ಲ. ಇಲ್ಲಿರುವ ಟ್ಯಾಂಕುಗಳು ನೀರು ಕಂಡು ವರ್ಷಗಳೇ ಕಳೆದಂತಿದೆ. ಸಿಂಕ್‌ಗಳು ತುಕ್ಕು ಹಿಡಿದಿವೆ. ಮುರಿದು ಬಿದ್ದಿವೆ. ಇದೇ ಕಾರಣಕ್ಕೆ ಸಾರ್ವಜನಿಕರು ಹಣ ಕೊಟ್ಟು ನೀರು ತರುತ್ತಾರೆ. ಕೆಲವರಂತು ಕೊನೆಗೆ ಪ್ಲಾಸ್ಟಿಕ್‌ ಬಾಟಲಿಯನ್ನು ಅಲ್ಲೆ ಬಿಸಾಡಿ ಹೋಗುತ್ತಿದ್ದಾರೆ.  

Gandhi Park Shimoga poor maintenance

ರಾರಾಜಿಸುತ್ತವೆ ಬಿಯರ್‌ ಬಾಟಲಿಗಳು

ಈ ಹಿಂದೆ ಯುವತಿಯೊಬ್ಬಳು ಇದೇ ಪಾರ್ಕ್‌ನಲ್ಲಿ ಬಿಯರ್‌ ಕುಡಿಯುವ ವಿಡಿಯೋ ವೈರಲ್‌ ಆಗಿತ್ತು. ಈಗಲು ಪರಿಸ್ಥಿತಿ ಭಿನ್ನವಾಗಿಲ್ಲ. ಕೆಲವರು ಗಾಂಧಿ ಪಾರ್ಕನ್ನು ಓಪನ್‌ ಬಾರ್‌ ಮಾಡಿಕೊಂಡಂತೆ ತೋರುತ್ತದೆ. ಅಲ್ಲಲ್ಲಿ ಖಾಲಿ ಬಿಯರ್‌ ಬಾಟಲಿಗಳು, ಟಿನ್‌ಗಳು ಕಾಣಿಸುತ್ತವೆ.

Gandhi Park Shimoga poor maintenance

ಕರೆಂಟ್‌ ಶಾಕ್‌ ನಿಶ್ಚಿತ

ಮಕ್ಕಳು, ಹಿರಿಯ ನಾಗರಿಕರು ಹೆಚ್ಚಾಗಿ ಬರುವ ಜಾಗ ಆಗಿರುವುದರಿಂದ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿತ್ತು. ಆದರೆ ಗಾಂಧಿ ಪಾರ್ಕ್‌ನಲ್ಲಿ ಮಕ್ಕಳ ಕೈಗೆಟಕುವಂತೆ ಸ್ವಿಚ್‌ ಬೋರ್ಡುಗಳು, ವೈಯರ್‌ಗಳಿವೆ. ಇನ್ನು, ಅಲ್ಲಲ್ಲಿ ನೆಲದ ಮೇಲೆಯೇ ವಯರ್‌ ಹಾದು ಹೋಗಿವೆ. ಇದರ ಮೇಲೆ ಕಾಲಿಟ್ಟರೆ ಜನರಿಗೆ ಶಾಕ್‌ ಸಾದ್ಯತೆ ಅಲ್ಲಗಳೆಯುವಂತಿಲ್ಲ.

Gandhi Park Shimoga poor maintenance

ಪಾಚಿಗಟ್ಟಿದ ಸ್ವಿಮ್ಮಿಂಗ್‌ ಪೂಲ್‌

ಗಾಂಧಿ ಪಾರ್ಕ್‌ನ (Park) ಒಳಗೆ ಮಕ್ಕಳು ಈಜಲು ಸ್ವಿಮ್ಮಿಂಗ್‌ ಪೂಲ್‌ ಇದೆ. ನಿರ್ವಹಣೆಯ ಕೊರತೆಯಿಂದ ಸ್ವಿಮ್ಮಿಂಗ್‌ ಪೂಲ್‌ ಪಾಚಿಗಟ್ಟಿದೆ. ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಕೊಠಡಿಗಳು ಧೂಳು ಹಿಡಿಯುತ್ತಿವೆ.

Gandhi Park Shimoga poor maintenance

ಸೊಳ್ಳೆ ಕಾರ್ಖಾನೆಯಾದ ಕೊಳ

ಪುಟಾಣಿ ಟ್ರೈನ್‌ ನಿಲ್ದಾಣದ ಪಕ್ಕದಲ್ಲಿ ಕೊಳವಿದೆ. ಇದರಲ್ಲಿರುವ ನೀರನ್ನು ಸ್ವಚ್ಛಗೊಳಿಸಿ ಅದೆಷ್ಟು ಸಮಯವಾಗಿದೆಯೋ ತಿಳಿಯದು. ನೀರಿನಲ್ಲಿ ಕಸ ತೇಲುತ್ತಿದೆ. ಸದ್ಯ ಈ ಕೊಳ ಸೊಳ್ಳೆ ಉತ್ಪಾದನೆಯ ಕಾರ್ಖಾನೆಯಾಗಿದೆ.

Gandhi Park Shimoga poor maintenance

ಗಾಂಧಿ ಪಾರ್ಕ್‌ನ ವಾಕಿಂಗ್‌ ಪಾಥ್‌ನಲ್ಲಿ ಅಲ್ಲಲ್ಲಿ ಸ್ಲ್ಯಾಬ್‌ ಕಿತ್ತು ಪಕ್ಕಕ್ಕೆ ಜೋಡಿಸಲಾಗಿದೆ. ಶೌಚಾಲಯವಂತು ಬಾಗಿಲು ತೆರೆಯದೆ ವರ್ಷಗಳೆ ಕಳೆದಂತಿದೆ. ಸುರಕ್ಷತೆಗೆ ಸಿಸಿಟಿವಿ ಇಲ್ಲ. ಅಲಂಕಾರಿಕ ದೀಪಗಳು ಒಡೆದು ಹೋಗಿವೆ.

Gandhi Park Shimoga poor maintenance

ಟಿಕೆಟ್‌ಗೆ ದರ ವಿಧಿಸೋದ್ಯಾಕೆ?

ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಗಾಂಧಿ ಪಾರ್ಕ್‌ (Park) ಅಭಿವೃದ್ಧಿಗೆ ವಿಶೇಷ ಕಾಳಜಿ ತೋರಿದ್ದರು. ಅನುದಾನ ಬಿಡುಗಡೆ ಮಾಡಿಸಿ, ಪ್ರತಿ ಬಾರಿ ಶಿವಮೊಗ್ಗ ಪ್ರವಾಸದ ಸಂದರ್ಭ ಗಾಂಧಿ ಪಾರ್ಕ್‌ಗೆ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲಿಸುತ್ತಿದ್ದರು. ಆದರೆ ಈಗ ಗಾಂಧಿ ಪಾರ್ಕ್‌ ಸ್ಥಿತಿ ಹೇಳತೀರದಾಗಿದೆ. ಹೀಗಿದ್ದೂ, ಪಾರ್ಕ್‌ ಪ್ರವೇಶಕ್ಕೆ ಟಿಕೆಟ್‌ ಪಡೆಯಬೇಕು ಎಂಬ ನಿಯಮವಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಗಾಂಧಿ ಪಾರ್ಕ್‌ ನಿರ್ವಹಣೆಗೆ ಖಾಸಗಿಯವರಿಗೆ ಟೆಂಡರ್‌ ನೀಡಲಾಗಿದೆ. ಆದರೆ ಇಲ್ಲಿನ ಅವಸ್ಥೆ ಗಮನಿಸಿದರೆ ಇನ್ನು ಕೆಲವು ತಿಂಗಳು ಇದೇ ಸ್ಥಿತಿ ಮುಂದುವರೆದರೆ ಗಾಂಧಿ ಪಾರ್ಕ್‌ಗೆ ಜನ ಕಾಲಿಡದ ಸ್ಥಿತಿಯಾಗಲಿದೆ. ಪಾಲಿಕೆ ಅಧಿಕಾರಿಗಳು ಕಣ್ತೆರೆದು, ತಕ್ಷಣ ಕ್ರಮ ವಹಿಸಬೇಕಿದೆ.

ಇದನ್ನೂ ಓದಿ » ಸಿಗಂದೂರು ಸೇತುವೆ, ಮತ್ತೊಂದು ಡ್ರೋಣ್‌ ವಿಡಿಯೋ ರಿಲೀಸ್‌ ಮಾಡಿದ ಸಂಸದ ರಾಘವೇಂದ್ರ

poor maintenance of gandhi park

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 16, 2025

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment