ಶಿವಮೊಗ್ಗದಿಂದ 2700 ಕಿ.ಮೀ ಸೈಕ್ಲಿಂಗ್, ಅಟಲ್ ಟನಲ್ ತಲುಪಿ ಹೊಸ ರೆಕಾರ್ಡ್ ಮಾಡಿದ ಯುವಕ, ಹೇಗಿತ್ತು ಯಾತ್ರೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

125203640 1007170469762863 4215862945643792899 o.jpg? nc cat=109&ccb=2& nc sid=730e14& nc ohc=bJYhOzOjCHwAX f8PRZ& nc ht=scontent.fblr1 3

ಶಿವಮೊಗ್ಗ ಲೈವ್.ಕಾಂ |SHIMOGA NEWS | 23 NOVEMBER 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ನಿಗದಿಯಂತೆ ಹಿಮಾಚಲ ಪ್ರದೇಶದಲ್ಲಿರುವ ಅಟಲ್ ಟನಲ್ ತಲುಪಿದ ಶಿವಮೊಗ್ಗದ ಯುವಕ. ಟನಲ್‍ನಲ್ಲಿ ಒಂಭತ್ತು ಕಿಲೋ ಮೀಟರ್‍ ಸೈಕಲ್ ಪಯಣ.

30 ದಿನದ ಸೈಕಲ್ ಯಾತ್ರೆ

ಶಿವಮೊಗ್ಗದ ಸಿದ್ದೇಶ್ವರಸ್ವಾಮಿ ಹಿರೇಮಠ್, ಸೈಕಲ್‌ನಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ. 30 ದಿನದ ಸೈನಲ್ ಯಾತ್ರೆಯಲ್ಲಿ 2700 ಕಿ.ಮೀ ಕ್ರಮಿಸಿದ್ದಾರೆ. ಹಿಮಾಚಲ ಪ್ರದೇಶದ ಅಟಲ್ ಟನಲ್ ತಲುಪಬೇಕು ಅನ್ನುವುದು ಸಿದ್ದೇಶ್ವರಸ್ವಾಮಿ ಹಿರೇಮಠ್ ಗುರಿಯಾಗಿತ್ತು.

ಹೇಗಿತ್ತು ಯಾತ್ರೆ?

  • ಸಿದ್ದೇಶ್ವರಸ್ವಾಮಿ ಹಿರೇಮಠ ಅವರು ಅಕ್ಟೋಬರ್ 22ರಂದು ಬೆಳಗ್ಗೆ ಶಿವಮೊಗ್ಗದಿಂದ ಸೈಕಲ್ ಯಾತ್ರೆ ಆರಂಭಿಸಿದ್ದರು.
  • ದಾರಿ ಉದ್ದಕ್ಕೂ ಸಿದ್ದೇಶ್ವರಸ್ವಾಮಿ ಅವರಿಗೆ ಜನರು ಪ್ರೋತ್ಸಾಹ ನೀಡಿದ್ದಾರೆ.
  • ಸಾರ್ವಜನಿಕ ಸಭೆ, ಸಮಾರಂಭಗಳು, ಪೊಲೀಸ್ ಠಾಣೆಗಳು ಸೇರಿ ಹಲವು ಕಡೆ ಸಿದ್ದೇಶ್ವರಸ್ವಾಮಿ ಅವರಿಗೆ ಸನ್ಮಾನಿಸಲಾಗಿದೆ.
  • ದಾರಿ ಉದ್ದಕ್ಕೂ ಎಲ್‍ಐಸಿ ಅಧಿಕಾರಿಗಳು ಸಹಕಾರ ನೀಡಿದ್ದಾರೆ.
  • ಕೆಲವರು ತಮ್ಮ ಮನೆಯಲ್ಲಿ ಉಳಿಯವಲು ಅವಕಾಶ ಕಲ್ಪಿಸಿದರೆ, ಇನ್ನೂ ಕೆಲವರು ಲಾಡ್ಜಿಂಗ್ ವ್ಯವಸ್ಥೆ ಮಾಡಿದ್ದಾರೆ.

125867646 1273056256389125 1127978387010940369 n.jpg? nc cat=110&ccb=2& nc sid=8bfeb9& nc ohc=PH3SJj jDnwAX8FMQOe& nc ht=scontent.fblr1 5

ಮೂರ್ನಾಲ್ಕು ದಿನಕ್ಕೊಮ್ಮೆ ವಿಶ್ರಾಂತಿ

ಶಿವಮೊಗ್ಗದಿಂದ ಬೆಳಗಾವಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಕುಲು ಮನಾಲಿ, ರೋಹ್ಟಂಗ್‌ ಮೂಲಕ ಸಿದ್ದೇಶ್ವರಸ್ವಾಮಿ ಹಿರೇಮಠ್‌ ಅವರು ಅಟಲ್‌ ಟನಲ್‌ ತಲುಪಿದ್ದಾರೆ. ಮೂರ್ನಾಲ್ಕು ದಿನಕ್ಕೊಮ್ಮೆ ಅಲ್ಲಲ್ಲಿ ವಿಶ್ರಾಂತಿ ಪಡೆದು, ಸೈಕ್ಲಿಂಗ್‌ ಮುಂದುವರೆಸುತ್ತಿದ್ದರು. ಇದರಿಂದ 2700 ಕಿ.ಮೀ ಕ್ರಮಿಸುವುದು ಸುಲಭವಾಯಿತು.

126905124 1273056083055809 7018235961347835076 n.jpg? nc cat=106&ccb=2& nc sid=8bfeb9& nc ohc=eGigp8m7pKUAX TC8Ze& nc ht=scontent.fblr1 3

ಟನಲ್‌ನಲ್ಲಿ ಸೈಕ್ಲಿಂಗ್‌

ಅಟಲ್‌ ಟನಲ್‌ ತಲುಪಿದ ಶಿವಮೊಗ್ಗದ ಸಿದ್ದೇಶ್ವರಸ್ವಾಮಿ ಹಿರೇಮಠ, ಟನಲ್‌ನಲ್ಲಿ 9 ಕಿ.ಮೀ ಸೈಕಲ್‌ ಪಯಣ ಮಾಡಿದ್ದಾರೆ. ಹೀಗೆ, ಶಿವಮೊಗ್ಗದಿಂದ ಅಟಲ್‌ ಟನಲ್‌ಗೆ ಸೈಕಲ್‌ ಯಾತ್ರೆ ಮಾಡಿ ಸಿದ್ದೇಶ್ವರಸ್ವಾಮಿ ಹಿರೇಮಠ ದಾಖಲೆ ಮಾಡಿದ್ದಾರೆ.

126615369 1008713619608548 6168072243270294966 n.jpg? nc cat=105&ccb=2& nc sid=730e14& nc ohc=MosDq1Hs8ugAX8HmiN1& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment