ಶಿವಮೊಗ್ಗದಿಂದ 3 ಹೊಸ ರೈಲಿಗೆ ಹಸಿರು ನಿಶಾನೆ, ಎಲ್ಲೆಲ್ಲಿಗೆ ತಲುಪುತ್ತೆ? ಎಲ್ಲೆಲ್ಲಿದೆ ಸ್ಟಾಪ್? ರೈಲು ಓಡಾಟ ಯಾವತ್ತಿಂದ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 8 ನವೆಂಬರ್ 2019

ಶಿವಮೊಗ್ಗಕ್ಕೆ ಮೂರು ಹೊಸ ರೈಲುಗಳ ಘೋಷಣೆ ಆಗಿದೆ. ಬಹು ಬೇಡಿಕೆ ಇದ್ದ ಶಿವಮೊಗ್ಗ – ಚೆನ್ನೈ, ಶಿವಮೊಗ್ಗ – ತಿರುಪತಿ ಮಾರ್ಗದಲ್ಲಿ ರೈಲು ಓಡಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಮೈಸೂರು – ಶಿವಮೊಗ್ಗ ನಡುವೆ ಮತ್ತೊಂದು ರೈಲು ಘೋಷಣೆಯಾಗಿದೆ.

ನೆವೆಂಬರ್ 10ರಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹೊಸ ರೈಲುಗಳಿಗೆ ಚಾಲನೆ ಸಿಗಲಿದೆ.

ಮೂರು ರೈಲುಗಳ ತಾತ್ಕಾಲಿಕ ಸೇವೆ

ಶಿವಮೊಗ್ಗ – ಚೆನ್ನೈ, ಶಿವಮೊಗ್ಗ – ತಿರುಪತಿ, ಶಿವಮೊಗ್ಗ – ಮೈಸೂರು ಜನಸಾಧಾರಣ ರೈಲು ಪ್ರಾಯೋಗಿಕ ಸೇವೆಯನ್ನು ಆರಂಭಿಸಲಾಗುತ್ತಿದೆ. ಫೆಬ್ರವರಿ ತಿಂಗಳವರೆಗೆ ಈ ಮೂರು ರೈಲುಗಳು ಸಂಚರಿಸಲಿವೆ. ‘ಸದ್ಯ ರೈಲುಗಳು ವಾರಕ್ಕೆ ಒಂದು ದಿನ ಮಾತ್ರವೆ ಸಂಚರಿಸಲಿವೆ. ಪ್ರಯಾಣಿಕರ ಸ್ಪಂದನೆ ಆಧರಿಸಿ ಇವುಗಳ ಸೇವೆಯನ್ನು ಹೆಚ್ಚಳ ಮಾಡಲಾಗುತ್ತದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಸಂಸದ ರಾಘವೇಂದ್ರ ಅವರ ಮೊದಲ ರಿಯಾಕ್ಷನ್ ವಿಡಿಯೋ ಇಲ್ಲಿದೆ ನೋಡಿ.

ರೈಲುಗಳ ಟೈಮ್, ಎಲ್ಲೆಲ್ಲಿ ನಿಲುಗಡೆ ಇದೆ ಗೊತ್ತಾ?

ಶಿವಮೊಗ್ಗ – ಚೆನ್ನೈ (ವಾರಕ್ಕೆ ಒಂದು ದಿನ – ಪ್ರತಿ ಸೋಮವಾರ)

ಶಿವಮೊಗ್ಗ ಟೌನ್ ರಾತ್ರಿ 11.55ಕ್ಕೆ ಹೊರಡಲಿದೆ. ಭದ್ರಾವತಿ ರಾತ್ರಿ 12.17, ತರೀಕೆರೆ ರಾತ್ರಿ 12.37, ಬೀರೂರು ರಾತ್ರಿ 1.04, ಕಡೂರು ರಾತ್ರಿ 1.16, ಅರಸಿಕೆರೆ ರಾತ್ರಿ 2.05, ತುಮಕೂರು ರಾತ್ರಿ 3.58, ಚಿಕ್ಕಬಾಣಾವರ ಬೆಳಗ್ಗೆ 5 ಗಂಟೆ, ಬಾಣಸವಾಡಿ ಬೆಳಗ್ಗೆ 5.23, ಕೃಷ್ಣರಾಜಪುರಂ ಬೆಳಗ್ಗೆ 5.40, ಬಂಗಾರಪೇಟೆ ಬೆಳಗ್ಗೆ 6.30, ಜೋಳರಪೆಟ್ಟೈ ಬೆಳಗ್ಗೆ 7.58, ಕಾಟ್ಪಾಡಿ ಬೆಳಗ್ಗೆ 9.08, ಪೆರಂಬೂರು ಬೆಳಗ್ಗೆ 10.43, ಚೆನ್ನೈ ಬೆಳಗ್ಗೆ 11.15ಕ್ಕೆ ತಲುಪಲಿದೆ.

Chennai Central

ಚೆನ್ನೈ – ಶಿವಮೊಗ್ಗ (ವಾರಕ್ಕೆ ಒಂದು ದಿನ – ಪ್ರತಿ ಮಂಗಳವಾರ)

ಚೆನ್ನೈನಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿದೆ. ಪೆರಂಬೂರು ಮಧ್ಯಾಹ್ನ 3.58, ಕಾಟ್ಪಾಡಿ ಸಂಜೆ 4.48, ಜೋಳರಪೆಟ್ಟೈ ಸಂಜೆ 6.23, ಬಂಗಾರಪೇಟೆ 7.18, ಕೃಷ್ಣರಾಜಪುರಂ ರಾತ್ರಿ 8.09, ಬಾಣಸವಾಡಿ ರಾತ್ರಿ 8.20, ಚಿಕ್ಕಬಾಣಾವರ ರಾತ್ರಿ 9 ಗಂಟೆ, ತುಮಕೂರು ರಾತ್ರಿ 10 ಗಂಟೆ, ಅರಸಿಕೆರೆ ರಾತ್ರಿ 12.25, ಕಡೂರು ರಾತ್ರಿ 1.40, ಬೀರೂರು ರಾತ್ರಿ 1.55, ತರೀಕೆರೆ ರಾತ್ರಿ 2.30, ಭದ್ರಾವತಿ ರಾತ್ರಿ 2.59, ಶಿವಮೊಗ್ಗ ಟೌನ್ ರಾತ್ರಿ 3.55ಕ್ಕೆ ತಲುಪಲಿದೆ.

ಶಿವಮೊಗ್ಗ ಚೆನ್ನೈ ರೈಲಿನಲ್ಲಿ ಮೂರು ಜನರಲ್ ಕೋಚ್, ಏಳು ಸ್ಲೀಪರ್ ಕೋಚ್, ಒಂದು ಎಸಿ ಟು ಟೈರ್, ಒಂದು ಎಸಿ ತ್ರಿ ಟೈರ್ ಕೋಚ್’ಗಳು ಸೇರಿ 14 ಕೋಚ್’ಗಳು ಇರಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

train2 1551349779

ಶಿವಮೊಗ್ಗ – ರೇಣಿಗುಂಟ (ತಿರುಪತಿಗೆ) (ವಾರಕ್ಕೆ ಒಂದು ದಿನ – ಬುಧವಾರ)

ಶಿವಮೊಗ್ಗ ಬೆಳಗ್ಗೆ 6.15ಕ್ಕೆ, ಭದ್ರಾವತಿ ಬೆಳಗ್ಗೆ 6.28, ತರೀಕೆರೆ ಬೆಳಗ್ಗೆ 6.49, ಬೀರೂರು ಬೆಳಗ್ಗೆ 7.15, ಅಜ್ಜಂಪುರ ಬೆಳಗ್ಗೆ 7.46, ಹೊಸದುರ್ಗ ರೋಡ್ ಬೆಳಗ್ಗೆ 8.16, ಚಿಕ್ಕಜಾಜೂರು ಬೆಳಗ್ಗೆ 8.43, ಚಿತ್ರದುರ್ಗ ಬೆಳಗ್ಗೆ 9.26, ಮೊಳಕಾಲ್ಮೂರು ಬೆಳಗ್ಗೆ 11, ರಾಯದುರ್ಗ ಬೆಳಗ್ಗೆ 11.29, ಬಳ್ಳಾರಿ ಮಧ್ಯಾಹ್ನ 1.10, ಗುಂಟಕಲ್ ಮಧ್ಯಾಹ್ನ 2.05, ಗೂಟಿ ಮಧ್ಯಾಹ್ನ 2.25, ತಡಿಪಾತ್ರಿ ಮಧ್ಯಾಹ್ನ 3.24, ಕೊಂಡಾಪುರಂ ಸಂಜೆ 4, ಯರ್ರಾಗುಂಟ್ಲಾ ಸಂಜೆ 4.40, ಕುಡ್ಡಾಪ ಸಂಜೆ 5.28, ರಾಜಂಪೇಟಾ ಸಂಜೆ 6.30, ರಾಣಿಗುಂಟಾ ರಾತ್ರಿ 8.05.

reniguntajunction

ರೇಣಿಗುಂಟ (ತಿರುಪತಿ) – ಶಿವಮೊಗ್ಗ (ವಾರಕ್ಕೆ ಒಂದು ದಿನ – ಗುರುವಾರ)

ರೇಣಿಗುಂಟಾ 9.45, ರಾಜಂಪೇಟಾ 10.56, ಕುಡ್ಡಾಪ 11.50, ಯರ್ರಾಗುಂಟ್ಲಾ 12.25, ಕೊಂಡಾಪುರಂ 1.07, ತಡಿಪಾತ್ರಿ 1.35, ಗೂಟಿ 2.25, ಗುಂಟಕಲ್ 3.10, ಬಳ್ಳಾರಿ 4.450, ರಾಯದುರ್ಗ 6.15, ಮೊಳಕಾಲ್ಮೂರು 6.31, ಚಿತ್ರದುರ್ಗ 8, ಚಿಕ್ಕಜಾಜೂರು 8.45, ಹೊಸದುರ್ಗ ರೋಡ್ 9.02, ಅಜ್ಜಂಪುರ 9.19, ಬೀರೂರು 9.40, ತರೀಕೆರೆ 10.39, ಭದ್ರಾವತಿ 11, ಶಿವಮೊಗ್ಗ ಬೆಳಗ್ಗೆ 11.45ಕ್ಕೆ ತಲುಪಲಿದೆ.

ಶಿವಮೊಗ್ಗ ರೇಣಿಗುಂಟ ರೈಲಿನಲ್ಲಿ ಮೂರು ಜನರಲ್ ಕೋಚ್, ಏಳು ಸ್ಲೀಪರ್ ಕೋಚ್, ಒಂದು ಎಸಿ ಟು ಟೈರ್, ಒಂದು ಎಸಿ ತ್ರಿ ಟೈರ್ ಕೋಚ್’ಗಳು ಸೇರಿ 14 ಕೋಚ್’ಗಳು ಇರಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮೈಸೂರು – ಶಿವಮೊಗ್ಗ ಜನಸಾಧಾರಣ ವಿಶೇಷ ರೈಲು (ವಾರಕ್ಕೆ ಒಂದು ದಿನ – ಸೋಮವಾರ)

ಮೈಸೂರಿನಿಂದ ಸಂಜೆ 4.40ಕ್ಕೆ ಹೊರಡಲಿದೆ. ಕೃಷ್ಣರಾಜನಗರ ಸಂಜೆ 5.21, ಹೊಳೆನರಸೀಪುರ ಸಂಜೆ 6.15, ಹಾಸನ ಸಂಜೆ 6.43, ಅರಸೀಕೆರೆ ರಾತ್ರಿ 7.40, ಕಡೂರು ರಾತ್ರಿ 8.20, ಬೀರೂರು ರಾತ್ರಿ 8.35, ತರೀಕೆರೆ ರಾತ್ರಿ 9.05, ಭದ್ರಾವತಿ ರಾತ್ರಿ 9.30, ಶಿವಮೊಗ್ಗ ರಾತ್ರಿ 10.30ಕ್ಕೆ ತಲುಪಲಿದೆ.

a6e22732388624292dd3848256980e2b

ಶಿವಮೊಗ್ಗ – ಮೈಸೂರು ಜನಸಾಧಾರಣ ವಿಶೇಷ ರೈಲು (ವಾರಕ್ಕೆ ಒಂದು ದಿನ – ಗುರುವಾರ)

ಶಿವಮೊಗ್ಗದಿದಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿದೆ, ಭದ್ರಾವತಿ ಮಧ್ಯಾಹ್ನ 1.31, ತರೀಕರೆ ಮಧ್ಯಾಹ್ನ 1.52, ಬೀರೂರು ಮಧ್ಯಾಹ್ನ 2.36, ಕಡೂರು ಮಧ್ಯಾಹ್ನ 2.50, ಅರಸೀಕೆರೆ ಮಧ್ಯಾಹ್ನ 3.20, ಹಾಸನ ಸಂಜೆ 4.18, ಹೊಳೆನರಸೀಪುರ ಸಂಜೆ 4.50, ಕೃಷ್ಣರಾಜನಗರ ಸಂಜೆ 6, ಮೈಸೂರಿಗೆ ರಾತ್ರಿ 7.05ಕ್ಕೆ ತಲುಪಲಿದೆ.

ಶಿವಮೊಗ್ಗ ಮೈಸೂರು ಜನಸಾಧಾರಣ ರೈಲಿನಲ್ಲಿ ಮೂರು ಜನರಲ್ ಕೋಚ್, ಏಳು ಸ್ಲೀಪರ್ ಕೋಚ್, ಒಂದು ಎಸಿ ಟು ಟೈರ್, ಒಂದು ಎಸಿ ತ್ರಿ ಟೈರ್ ಕೋಚ್’ಗಳು ಸೇರಿ 14 ಕೋಚ್’ಗಳು ಇರಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 8, 2019

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

Leave a Comment