ಶಿವಮೊಗ್ಗ: ನಗರದ ನಿವಾಸಿಗಳಿಗೆ ನೀರಿನ ಕಂದಾಯ (water tax) ಮತ್ತು ಬಾಕಿ ಮೊತ್ತವನ್ನು ಪಾವತಿಸಲು ಅನುಕೂಲವಾಗುವಂತೆ ಮಾರ್ಚ್ 1ರಂದು ನಗರದ ಐದು ಪ್ರಮುಖ ಸ್ಥಳಗಳಲ್ಲಿ ವಿಶೇಷ ಕರ ವಸೂಲಾತಿ ಕೌಂಟರ್ಗಳನ್ನು ತೆರೆಯಲಾಗುತ್ತಿದೆ.
ವಿಶೇಷ ಕೌಂಟರ್ ಇರುವ ಸ್ಥಳಗಳು
ಎಂ.ಕೆ.ಕೆ. ರಸ್ತೆ: ಗಾಯತ್ರಿ ವಿದ್ಯಾಮಂದಿರದ ಆವರಣ, ಟಿಪ್ಪು ನಗರ: 1ನೇ ತಿರುವಿನ ಮಿಲತ್ ಶಾಲೆ ಮುಂಭಾಗ, ಸೂಳೇಬೈಲ್: ಮುಖ್ಯರಸ್ತೆಯ ದುರ್ಗಮ್ಮನ ದೇವಸ್ಥಾನದ ಹತ್ತಿರ, ಅಶೋಕನಗರ: ನಂದಿನಿ ಬೂತ್ ಹತ್ತಿರ, ವಿನೋಬನಗರ (ಕಲ್ಲಹಳ್ಳಿ): ಅಭಿಷ್ಟವರ ಗಣಪತಿ ದೇವಸ್ಥಾನದ ಹತ್ತಿರ,

2025-26 ನೇ ಸಾಲಿನ ನೀರಿನ ಕಂದಾಯ ಹಾಗೂ ಈ ಹಿಂದಿನ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ವಿಶೇಷ ಕೌಂಟರ್ಗಳ ಸದುಪಯೋಗ ಪಡೆದುಕೊಂಡು ದಂಡ ರಹಿತವಾಗಿ ಅಥವಾ ಸಕಾಲದಲ್ಲಿ ತೆರಿಗೆ ಪಾವತಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ – ಸಂತೆಕಡೂರು ಬಳಿ ಅಪಘಾತ, ಓರ್ವ ಸಾವು, ಮತ್ತೊಬ್ಬನ ಕಾಲು ಕಟ್







