ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಶಿವಮೊಗ್ಗ ಸಿಟಿಗೆ ಬರುವವರಿಗೆ ಇಲ್ಲಿ ಅದ್ಧೂರಿ ಸ್ವಾಗತ ನೀಡುತ್ತಿವೆ ಆಳ ಗುಂಡಿಗಳು (Pot Holes). ಈ ರಸ್ತೆಯಲ್ಲಿ ಓಡಾಡುವುದಷ್ಟೆ ಅಲ್ಲ ಅಕ್ಕಪಕ್ಕದಲ್ಲಿ ನಿಂತರು ಅಪಾಯ ನಿಶ್ಚಿತ. ಇಲ್ಲಿ ಬಿದ್ದವರು ಒಬ್ಬಿಬ್ಬರಲ್ಲ, ಕೈ ಕಾಲು ಮುರಿದುಕೊಂಡವರು ಲೆಕ್ಕಕ್ಕಿಲ್ಲ.
ಇದು ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಶಿವಮೊಗ್ಗ – ಹೊನ್ನಾಳಿ ರಸ್ತೆಯ ಫ್ಲೈ ಓವರ್ ಮತ್ತು ಅದರ ಸಂಪರ್ಕ ರಸ್ತೆಯಲ್ಲಿರುವ ಗುಂಡಿಗಳ ಕಿರು ಪರಿಚಯ.
ಗುಂಡಿ, ಗುಂಡಿ.. ಆಳ ಗುಂಡಿ..
ಹೊನ್ನಾಳಿ ರಸ್ತೆಯ ಫ್ಲೈ ಓವರ್ನ ಎರಡೂ ಬದಿಯಲ್ಲಿ ವಾಹನಗಳು ಮೇಲೇರುವಾಗ ಗಂಡಿಗಳನ್ನು ದಾಟಲೇಬೇಕು. ಮೇಲೇರಿದ ಮೇಲೂ ಇದೇ ದುಸ್ಥಿತಿ. ಹತ್ತಕ್ಕೂ ಹೆಚ್ಚು ಆಳ ಗುಂಡಿಗಳನ್ನು ದಾಟಿಕೊಂಡೆ ವಾಹನಗಳು ಸಾಗಬೇಕು. ಫ್ಲೈ ಓವರ್ ಮೇಲೆ ವಾಹನ ಚಾಲಕರು ಸ್ವಲ್ಪ ವೇಗ ಹೆಚ್ಚಿಸಿದರೆ ಅಥವಾ ಕ್ಷಣ ಕಾಲ ದೃಷ್ಟಿ ಬೇರೆಡೆ ಹಾಯಿಸಿದರೆ ಮುಗಿಯಿತು. ಅಪಘಾತ ನಿಶ್ಚಿತ, ಸವಾರರು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರುವುದು ಖಚಿತ.

ಇದನ್ನೂ ಓದಿ » ಜೀವ ವಿಮೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಐದು ವಿಧದ ಇನ್ಷುರೆನ್ಸ್ಗಳ ವಿವರ
ಪಾತಾಳ ಲೋಕವೇ ಕಾಣುತ್ತದೆ
ಇನ್ನು, ಫ್ಲೈವರ್ನಿಂದ ಕೆಳಗಿಳಿದರೆ ರಾಗಿಗುಡ್ಡದ ದಿಕ್ಕಿನ ರಸ್ತೆಯಲ್ಲಿ ಆಳ, ಅಗಲದ ಗುಂಡಿಗಳಿವೆ. ಫ್ಲೈವರ್ ಕೆಳಗಿರುವ ಚೌಡೇಶ್ವರಿ ದೇವಿ ದೇವಸ್ಥಾನದಿಂದ ಬಜಾಜ್ ಸರ್ವಿಸ್ ಸೆಂಟರ್ನ ಮುಂಭಾಗದವರೆಗೆ ಬರೀ ಗುಂಡಿಗಳೇ ಇದ್ದಾವೆ. ಈ ಗುಂಡಿಗಳು ಒಂದಕ್ಕಿಂತಲು ಒಂದು ಆಗಲ, ಒಂದಕ್ಕಿಂತಲು ಒಂದು ಆಳವಿದೆ. ಬಸ್ಸು ಲಾರಿಗಳಂತ ಭಾರೀ ವಾಹನಗಳೇ ಅತ್ತಿತ್ತ ವಾಲಾಡುತ್ತವೆ.

[su_quote cite=”ರವಿ, ಆಟೋ ಚಾಲಕ“]ಈ ರಸ್ತೆಯಲ್ಲಿ ಅತ್ಯಂತ ನಾಜೂಕಾಗಿ ವಾಹನ ಓಡಿಸಬೇಕು. ಇಲ್ಲವಾದಲ್ಲಿ ವಾಹನದ ಕೆಳಭಾಗಕ್ಕೆ ನೆಲ ತಾಗಿ ಹಾನಿಯಾಗುತ್ತದೆ. ಆಟೋಗಳನ್ನು ಓಡಿವುದು ಬಹಳ ಕಷ್ಟವಾಗುತ್ತದೆ. ಸ್ವಲ್ಪ ಯಾಮಾರಿದರೆ ಆಟೋ ಪಲ್ಟಿಯಾಗುವ ಸಾಧ್ಯತೆ ಹೆಚ್ಚು.[/su_quote]
ರಸ್ತೆ ಪಕ್ಕದಲ್ಲಿ ನಿಲ್ಲುವುದೂ ಡೇಂಜರ್
ಗುಂಡಿಮಯ ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲುವುದೂ ಡೇಂಜರ್ ಅಂತಾರೆ ಇಲ್ಲಿನ ಸ್ಥಳೀಯರು. ಗುಂಡಿಯಿಂದ ಮೇಲೆದ್ದು ಬರುವ ಕಲ್ಲುಗಳು ವಾಹನಗಳ ಚಕ್ರದ ತುದಿಗೆ ಸಿಲುಕಿ ಅಕ್ಕಪಕ್ಕದಲ್ಲಿ ಹಾರುತ್ತವೆ. ಇವುಗಳು ತಗುಲಿ ಗಾಯಗೊಂಡವರು ಇದ್ದಾರೆ. ವಾಹನಗಳೂ ಹಾನಿಯಾಗಿವೆ.

[su_quote cite=”ಮೊಹಮದ್ ಅಶ್ರಫ್, ಗ್ಯಾರೇಜ್ ನಿರ್ವಾಹಕ“]ರಿಪೇರಿಗೆ ಬಂದ ಕಾರುಗಳನ್ನು ಗ್ಯಾರೇಜ್ ಮುಂದೆ ನಿಲ್ಲಿಸುತ್ತೇವೆ. ರಸ್ತೆಯಿಂದ ಸಿಡಿದ ಕಲ್ಲುಗಳು ಇಲ್ಲಿ ನಿಲ್ಲಿಸಿದ್ದ ಎರಡು ಕಾರುಗಳ ಗಾಜನ್ನು ಒಡೆದಿವೆ. ಇದರಿಂದ ನಮಗೆ ನಷ್ಟವಾಗಿದೆ. ಈ ಗುಂಡಿಗಳನ್ನು ಮುಚ್ಚುವಂತೆ ಯಾರಾದರು ಮನವಿ ಮಾಡಿದರೆ ಮಣ್ಣು ತಂದು ಹಾಕಿ ಗುಂಡಿ ಮುಚ್ಚುತ್ತಾರೆ. ಅದರಿಂದ ಯಾವುದೇ ಪ್ರಯೋಜವಿಲ್ಲ.[/su_quote]

ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಾಗಿಗುಡ್ಡ, ಶಾಂತಿನಗರ ಸೇರಿಂದಂತೆ ವಿವಿಧ ಬಡಾವಣೆಗಳಿಗೆ ಇದೇ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯಲ್ಲಿನ ಗುಂಡಿಗಳನ್ನು ಬಂದ್ ಮಾಡಿದರೆ ಮತ್ತಷ್ಟು ಅನಾಹುತಗಳನ್ನು ತಪ್ಪಿಸಬಹುದಾಗಿದೆ.



Potholes at Shimoga Honnali road near railway station
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

- ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್? 16 ಮಾರ್ಚ್ 2026 – ಅಡಿಕೆ ಧಾರಣೆ

- ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

- ಶಿವಮೊಗ್ಗ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್ ಡಿಕ್ಕಿ, ಆಗಿದ್ದೇನು?

- ಶಿವಮೊಗ್ಗದ ಇಂಜಿನಿಯರ್ಗೆ ಸಂಕಷ್ಟ ತಂದ ಮರೆವು, ಫ್ಲೈ ಓವರ್ ಬಳಿ ಆಗಿದ್ದೇನು? ಕೇಸ್ ದಾಖಲು

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















