SHIVAMOGGA LIVE NEWS | 21 JUNE 2024
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
RAINFALL NEWS : ಶಿವಮೊಗ್ಗದಲ್ಲಿ ಆರಿದ್ರಾ ಮಳೆ ಶುರುವಾಗಿದೆ. ನಗರದಲ್ಲಿ ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಗಿದೆ. ಕಳೆದ ಕೆಲವು ದಿನದಿಂದ ಮಳೆ ಕಡಿಮೆಯಾಗಿದ್ದರಿಂದ ರೈತರು ಆತಂಕಕ್ಕೀಡಾಗಿದ್ದರು. ಜಿಲ್ಲೆಯ ವಿವಿಧೆಡೆಯು ಮಳೆಯಾಗುತ್ತಿದೆ. ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಮಳೆ ಬರುತ್ತಿದೆ.
ಶಿವಮೊಗ್ಗದ ಕೋಟೆಗಂಗೂರು, ಅಬ್ಬಲಗೆರೆ, ಸೂಗೂರು, ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಕೊನಗವಳ್ಳಿ, ಆಯನೂರು, ಕುಂಸಿಯಲ್ಲಿ ಮಳೆಯಾಗುತ್ತಿರುವ ವರದಿಯಾಗಿದೆ. ಭದ್ರಾವತಿಯ ಅರೆಬಿಳಚಿ, ಅರಕೆರೆ, ದಾಸರಕಲ್ಲಹಳ್ಳಿ, ಮೈದೊಳಲು, ಗುಡುಮಘಟ್ಟ, ಮಂಗೋಟೆ, ನಿಂಬೆಗೊಂದಿಯಲ್ಲಿ ಮಳೆಯಾಗುತ್ತಿದೆ.
ಶಿಕಾರಿಪುರದ ಕಲ್ಮನೆ, ಸಾಲೂರು, ಗಾಮ, ಅಮಟೆಕೊಪ್ಪ, ಮತ್ತಿಕೋಟೆ, ಚಿಕ್ಕಜಂಬೂರು, ಹಿರೆಜಂಬೂರು, ತಡಗಣಿ, ತಾಳಗುಂದ, ಬಿಳಕಿ, ಹಾರಿಗೆ. ಸೊರಬದ ಚಿತ್ತೂರು, ಇಂಡುವಳ್ಳಿ, ಶಿಗ್ಗಾ, ಮಾವಲಿ, ಹೆಗ್ಗೋಡು, ಹೊಸಬಾಳೆ, ಮಟುಗುಪ್ಪೆ, ಉದ್ರಿ, ತವನಂದಿ, ಬೆನ್ನೂರು, ಕುಬಟೂರು, ತಲ್ಲೂರು, ಬೆನ್ನೂರು. ಸಾಗರದ ಆಚಾಪುರ, ಹೊಸೂರು, ಹಿರೆಬಿಲಗುಂಜಿ, ತ್ಯಾಗರ್ತಿ, ಭೀಮನಕೋಣೆ, ಕಲ್ಮನೆ, ಕೋಳೂರು, ಕಾಂಡಿಕೆ, ಸಿರಿವಂತೆ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ.
ಹೊಸನಗರದ ಕೋಡೂರು, ಮುಂಬಾರು, ಅಮೃತ, ಅರಸಾಳು, ಬಾಳೂರು, ಚಿಕ್ಕಜೇನಿ, ಮಾರುತಿಪುರದಲ್ಲಿ ಮಳೆಯಾಗಿದೆ.
ಇದನ್ನೂ ಓದಿ – ಮಣಿಪಾಲ್ ಆಸ್ಪತ್ರೆಯ ಆರೋಗ್ಯ ಕಾರ್ಡ್ ನೋಂದಣಿ ಆರಂಭ, ಪ್ರಯೋಜನವೇನು? ನೋಂದಣಿ ಹೇಗೆ?
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






