SHIVAMOGGA LIVE NEWS | 5 JUNE 2024
RESULT NEWS : ಸೋಲರಿಯದ ಸರದಾರ ಎಸ್.ಬಂಗಾರಪ್ಪ ಅವರನ್ನು ತಮ್ಮ ಮೊದಲ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಸೋಲಿಸಿದ್ದರು. ಆ ನಂತರ ಬಂಗಾರಪ್ಪ ಪುತ್ರ ಮತ್ತು ಪುತ್ರಿಯಲ್ಲಿ ಸೋಲಿಸಿ ಅಪರೂಪದ ದಾಖಲೆ (Record) ಬರೆದಿದ್ದಾರೆ.
![]() |
ಯಡಿಯೂರಪ್ಪ ಕುಟುಂಬ V/S ಬಂಗಾರಪ್ಪ ಕುಟುಂಬ
ಶಿವಮೊಗ್ಗದಲ್ಲಿ ನಡೆದ ಕಳೆದ ಐದು ಲೋಕಸಭೆ ಚುನಾವಣೆ ಯಡಿಯೂರಪ್ಪ ಕುಟುಂಬ ಮತ್ತು ಬಂಗಾರಪ್ಪ ಕುಟುಂಬ ನೇರಾನೇರ ಮುಖಾಮುಖಿಯಾಗಿವೆ. ಎಲ್ಲದರಲ್ಲು ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಜೈತ್ರಯಾತ್ರೆ ಮುಂದುವರೆಸಿಕೊಂಡು ಬಂದಿದ್ದಾರೆ. ಐದು ಚುನಾವಣೆಗಳ ಪೈಕಿ ಬಂಗಾರಪ್ಪ ಮತ್ತು ಯಡಿಯೂರಪ್ಪ ಸ್ಪರ್ಧಿಸಿದ್ದು ಕೇವಲ ಒಂದು ಚುನಾವಣೆಯಲ್ಲಿ ಮಾತ್ರ.
ರಾಘವೇಂದ್ರ ಅಪರೂಪದ ದಾಖಲೆ
ಲೋಕಸಭೆ ಚನಾವಣೆಯಲ್ಲಿ ಈಗ ಬಿ.ವೈ.ರಾಘವೇಂದ್ರ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ಅಖಾಡದಲ್ಲಿ, ಬಂಗಾರಪ್ಪ, ಪುತ್ರ ಮಧು ಬಂಗಾರಪ್ಪ, ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಸೋಲಿಸಿದ ಅಪರೂಪದ ದಾಖಲೆ ಬರೆದಿದ್ದಾರೆ.
2009ರಲ್ಲಿ ಬಿ.ವೈ.ರಾಘವೇಂದ್ರ ಮೊದಲ ಬಾರಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಎಸ್.ಬಂಗಾರಪ್ಪ ಎದುರಾಳಿ ಆಗಿದ್ದರು. ಆಗ ರಾಘವೇಂದ್ರ 4,82,783 ಮತ ಪಡೆದಿದ್ದರು. ಬಂಗಾರಪ್ಪ 4,29,890 ಮತ ಗಳಿಸಿದ್ದರು. ಗೆಲುವಿನ ಅಂತರ 52,893 ಇತ್ತು.
2018ರಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಮತ್ತು ಜೆಡಿಎಸ್ನಿಂದ ಮಧು ಬಂಗಾರಪ್ಪ ಅಖಾಡದಲ್ಲಿದ್ದರು. ಆಗ ರಾಘವೇಂದ್ರ 5,43,306 ಮತ ಮಧು ಬಂಗಾರಪ್ಪ 4,91,158 ಮತ ಗಳಿಸಿದ್ದರು. ಗೆಲವಿನ ಅಂತರ 52,148 ಮತಗಳು.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪುನಃ ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಎದುರಾಳಿಗಳಾಗಿದ್ದರು. ಆಗ ರಾಘವೇಂದ್ರ 7,29,872 ಮತ, ಮಧು ಬಂಗಾರಪ್ಪ 5,06,512 ಮತ ಗಳಿಸಿದ್ದರು. ಗೆಲುವಿನ ಅಂತರ 2,23,360 ಮತಗಳು.
2024ರಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ನ ಗೀತಾ ಶಿವರಾಜ್ ಕುಮಾರ್ ಅವರ ವಿರುದ್ಧ 2,43,715 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬಂಗಾರಪ್ಪ ದಾಖಲೆ ಮುರಿದ ರಾಘವೇಂದ್ರ
ಇನ್ನು ಶಿವಮೊಗ್ಗ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಲೋಕಸಭೆಗೆ ಆಯ್ಕೆಯಾದ ದಾಖಲೆಯನ್ನು ಬಿ.ವೈ.ರಾಘವೇಂದ್ರ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಕೆ.ಜಿ.ಒಡೆಯರ್ ಎರಡು ಬಾರಿ, ಟಿ.ವಿ.ಚಂದ್ರಶೇಖರಪ್ಪ ಎರಡು ಬಾರಿ ಆಯ್ಕೆಯಾಗಿದ್ದರು. ಆ ದಾಖಲೆಯನ್ನು ಬಂಗಾರಪ್ಪ ಸರಿಗಟ್ಟಿದ್ದರು. 1999, 2004 ಮತ್ತು 2005 (ಉಪ ಚುನಾವಣೆ) ಆಯ್ಕೆಯಾಗಿದ್ದರು. ಬಿ.ವೈ.ರಾಘವೇಂದ್ರ ಪುನರಾಯ್ಕೆ ಆಗುವ ಮೂಲಕ ಬಂಗಾರಪ್ಪ ದಾಖಲೆಯನ್ನು ಸರಿಗಟ್ಟಿದ್ದಾರೆ. 2009, 2018 (ಉಪ ಚುನಾವಣೆ), 2019, 2024ರಲ್ಲಿ ಆಯ್ಕೆಯಾಗಿ ಕ್ಷೇತ್ರದಲ್ಲಿ ದಾಖಲೆ ಮಾಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಅಚ್ಚರಿ ಪ್ರಮಾಣದ ಮತ ಗಳಿಸಿದ ಜೊಮಾಟೊ ಡೆಲಿವರಿ ಬಾಯ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200