ಈಶ್ವರಪ್ಪ, ಸದಾನಂದಗೌಡ ಹೈಕಮಾಂಡ್‌ ಭೇಟಿ ವಿಚಾರ, ಶಿವಮೊಗ್ಗದಲ್ಲಿ ಯಡಿಯೂರಪ್ಪ ರಿಯಾಕ್ಷನ್‌, ಏನಂದ್ರು?

SHIVAMOGGA LIVE NEWS | 3 NOVEMBER 2023

SHIMOGA : ಹಲವರು ನಾಯಕರನ್ನು ಹೈಕಮಾಂಡ್‌ (High Command) ದೆಹಲಿಗೆ ಕರೆಸಿಕೊಂಡಿದ್ದು ನಾನಾ ವಿಷಯದ ಕುರಿತು ಚರ್ಚೆ ನಡೆಸಿದ್ದಾರೆ. ಅದರಲ್ಲಿ ವಿಶೇಷವೇನಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ವತಿಯಿಂದ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಾಗುತ್ತಿದೆ. ವಿಐಎಸ್‌ಎಲ್‌ ಶತಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆ ತಾವು ನ.5ರ ಬಳಿಕ ಅಧ್ಯಯನ ತಂಡದೊಂದಿಗೆ ಸೇರಿಕೊಳ್ಳುವುದಾಗಿ ತಿಳಿಸಿದರು.

ಲೋಕಸಭೆ ಚುನಾವಣೆಗೆ ತಮ್ಮದೆ ರೀತಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಹೆಚ್ಚು ಸೀಟ್‌ ಗೆಲ್ಲುವ ಕಡೆಗೆ ಗಮನ ವಹಿಸುತ್ತೇವೆ. ಇನ್ನು, ಶೀಘ್ರದಲ್ಲಿಯೇ ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಕನ್ನಡದ ಪಥ ಸಂಚಲನ, ಮುಖ್ಯ ರಸ್ತೆಗಳಲ್ಲಿ ಜಾಗೃತಿ ಮೂಡಿಸಿದ ವಿದ್ಯಾರ್ಥಿ ಸಮೂಹ

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : November 3, 2023 at 6:40 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ನವೆಂಬರ್ 3, 2023

Leave a Comment