SHIVAMOGGA LIVE NEWS | 11 ಮಾರ್ಚ್ 2022
ಹೊಸಮನೆ ಬಡಾವಣೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಡಾವಣೆಯ ಎಲ್ಲಾ ರಸ್ತೆಗಳ ಡಾಂಬರೀಕರಣಕ್ಕೆ ಗುರುವಾರ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಚಾಲನೆ ನೀಡಿದರು.
ಹೊಸಮನೆಯ ಶ್ರೀ ವಜ್ರೇಶ್ವರಿ ಗಣಪತಿ ದೇವಸ್ಥಾನದ ಪಕ್ಕದ ರಸ್ತೆಯಿಂದ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ರೇಖಾ ರಂಗನಾಥ್ ಅವರು, ಈಗಾಗಲೇ ಹೊಸಮನೆ ಬಡಾವಣೆಯೂ ಸಂಪೂರ್ಣ ಸ್ಮಾರ್ಟ್ ಸಿಟಿ ಕಾಮಗಾರಿಗಳು ಮುಗಿಯುವ ಹಂತದಲ್ಲಿ ಬಂದಿದೆ. ಬಾಕ್ಸ್ ಡ್ರೈನೇಜ್, ವಿದ್ಯುತ್ ಭೂಗತ ಕೇಬಲ್’ಗಳು, 24×7 ನೀರಿನ ಸಂಪರ್ಕ, ಪಾರ್ಕಿಂಗ್ ಲಾಕಿಂಗ್ ಟೈಲ್ಸ್ ಗಳು ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲಾಗುತ್ತದೆ. ವಾರ್ಡಿನ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕೆಂದು ತಾಕೀತು ಮಾಡಿದರು.
ಈ ಸಂದರ್ಭ ಮುಖಂಡರಾದ ಕೆ. ರಂಗನಾಥ್, ವಾರ್ಡಿನ ಪ್ರಮುಖರಾದ ಶಿವಮ್ಮ, ಗಿರಿಜಮ್ಮ, ಯೋಗೀಶ್ ಭಟ್, ಚಂದ್ರು ಗಡ್ಡೆ, ಪ್ರಜ್ವಲ್, ಚೇತನಾ ಹಾಗೂ ವಾರ್ಡಿನ ನಾಗರಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200