ವಿಮೆ ಸುದ್ದಿ: ಜೀವ ವಿಮೆ (Life Insurance) ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ವಿಭಿನ್ನ ಆರ್ಥಿಕ ಉದ್ದೇಶಗಳನ್ನು ಪೂರೈಸುವುದು ಇವುಗಳ ಗುರಿ. ವಿಮೆಯಿಂದ ಆರ್ಥಿಕ ರಕ್ಷಣೆ, ಉಳಿತಾಯ ಮತ್ತು ಹೂಡಿಕೆ ಅವಕಾಶಗಳು ದೊರೆಯಲಿವೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಯಾವೆಲ್ಲ ಬಗೆಯ ವಿಮೆಗಳಿವೆ?
1. ಅವಧಿ ವಿಮಾ ಯೋಜನೆ
- ಟರ್ಮ್ ಲೈಫ್ ಇನ್ಸುರೆನ್ಸ್ (Life Term Insurance) ಪಾಲಿಸಿಯು ನಿರ್ದಿಷ್ಟ ಅವಧಿಗೆ ಇರುತ್ತದೆ. ಸಾಮಾನ್ಯವಾಗಿ 10 ರಿಂದ 30 ವರ್ಷದವರೆಗೆ ರಕ್ಷಣೆ ನೀಡುತ್ತದೆ.
- ಈ ಅವಧಿಯಲ್ಲಿ ಪಾಲಿದಾರ ಮೃತರಾದರೆ ನಾಮ ನಿರ್ದೇಶಿತ ವ್ಯಕ್ತಿಗೆ (Nominee) ನಿರ್ದಿಷ್ಟ ಮೊತ್ತ ನೀಡಲಾಗುತ್ತದೆ.
- ಇದು ಉಳಿತಾಯ ಯೋಜನೆಯ ಪಾಲಿಸಿಯಲ್ಲ. ಆದರೆ ಅತ್ಯಂತ ಕೈಗೆಟಕುವ ಮತ್ತು ಕಡಿಮೆ ದರದ ಪ್ರೀಮಿಯಂ (Premium) ಹೊಂದಿರುತ್ತದೆ.

2. ಜೀವಮಾನ ವಿಮೆ ಪಾಲಿಸಿ
- ವಿಮೆಯಲ್ಲಿ ಜೀವಿತಾವಧಿ ಪೂರ್ತಿಯಾಗಿ ವಿಮೆಯ ರಕ್ಷಣೆ ಲಭಿಸಲಿದೆ. ಹಲವು ವಿಮೆಗಳಲ್ಲಿ ವಯೋಮಿತಿ ಇರುತ್ತದೆ. ಆದರೆ ಈ ಪಾಲಿಸಿಯಲ್ಲಿ ಆ ನಿಯಮವಿಲ್ಲ.
- ಪಾಲಿಸಿದಾದರು ಮೃತರಾದರೆ ನಾಮನಿರ್ದೇಶಿತ ವ್ಯಕ್ತಿ ವಿಮೆ ಮೊತ್ತವನ್ನು ಪಡೆಯಬಹುದಾಗಿದೆ.
- ಪಾಲಿಸಿದಾರರು ಜೀವಂತ ಇರುವಾಗಲೆ ವಿಮೆ ಮೊತ್ತವನ್ನು ಭಾಗಶಃ ಹಿಂಪಡೆಯಲು ಅವಕಾಶವಿದೆ. ಅಲ್ಲದೆ ವಿಮೆಯ ಮೇಲೆ ಸಾಲವನ್ನು ಪಡೆಯಲು ಅವಕಾಶವಿದೆ.
3. ಯೂನಿಟ್ ಲಿಂಕ್ಡ್ ಇನ್ಸುರೆನ್ಸ್ ಪ್ಲಾನ್ (ಯುಲಿಪ್)
- ಅಧಿಕ ಲಾಭವನ್ನು ನೀಡಬಹುದು ಅಥವಾ ಅಪಾಯವನ್ನು ಉಂಟು ಮಾಡುವ ಪಾಲಿಸಿ ULIP.
- ಪಾಲಿಸಿದಾರರು ತಮ್ಮ ಪ್ರೀಮಿಯಂ ಮೊತ್ತವನ್ನು ಬಾಂಡ್ಗಳು ಮತ್ತು ಷೇರುಗಳಲ್ಲಿ ತೊಡಗಿಸಬಹುದಾಗಿದೆ.
- ಮಾರುಕಟ್ಟೆಯ ಏರಿಳಿತಗಳ ಆಧಾರದಲ್ಲಿ ಆದಾಯ ನಿರೀಕ್ಷಿಸಬಹುದಾಗಿದೆ.
4. ಎಂಡೋಮೆಂಟ್ ಪಾಲಿಸಿ
- ಈ ಪಾಲಿಸಿಯಲ್ಲಿ ಹೂಡಿಕೆ ಮತ್ತು ವಿಮೆ ಎರಡು ಅವಕಾಶ ಇರಲಿದೆ.
- ನಿರ್ದಿಷ್ಟ ಅವಧಿಯ ಬಳಿಕ ಪಾಲಿಸಿ ಮೆಚುರಿಟಿಯಾಗಲಿದೆ. ಆಗ ಅಥವಾ ಪಾಲಿಸಿದಾ ಮೃತರಾದ ಬಳಿಕ ನಿಗದಿತ ಮೊತ್ತವನ್ನು ನೀಡುತ್ತದೆ.
- ಕೆಲವು ಪ್ಲಾನ್ಗಳಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಹಣ ಪಡೆಯಲು ಅವಕಾಶವಿದೆ.
5. ಮಕ್ಕಳ ವಿಮಾ ಯೋಜನೆ
- ಮಕ್ಕಳ ಭವಿಷ್ಯದ ಆರ್ಥಿಕ ಅಗತ್ಯ ಮತ್ತು ಹೂಡಿಕೆಗೆ ಅತ್ಯಂತ ಅನುಕೂಲ ಈ ವಿಮಾ ಯೋಜನೆ.
- ಮಕ್ಕಳು ವಯಸ್ಕರಾದ ನಂತರ ಮೊತ್ತವನ್ನು ಪಾವತಿಸಲಾಗುತ್ತದೆ.
ಇದನ್ನೂ ಓದಿ » ಮಕ್ಕಳ ಕಣ್ಣಿನ ಆರೈಕೆ, ರೋಟರಿ ಟ್ರಸ್ಟ್ ಅಧ್ಯಕ್ಷರಿಂದ ಎರಡು ಪ್ರಮುಖ ಟಿಪ್ಸ್, ಏನೇನದು?
all about Life Insurance policies
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





