GOOGLE PAY LOAN, ಬ್ಯಾಂಕ್‌ಗೆ ಹೋಗೋದೆ ಬೇಡ, ಸಿಗುತ್ತೆ ಲಕ್ಷ ರೂ. ಸಾಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

JUST MAHITI : ಡಿಜಿಟಲ್‌ ಪೇಮೆಂಟ್‌ಗೆ ಖ್ಯಾತಿಯಾಗಿರುವ ಗೂಗಲ್‌ ಪೇ ಆ್ಯಪ್ ಮೂಲಕ ಈಗ ಒಂದು ಲಕ್ಷ ರೂ.ವರೆಗೆ ಸಾಲ (Loan) ಪಡೆಯಬಹುದಾಗಿದೆ. ಗೂಗಲ್‌ ಸಂಸ್ಥೆ ಹೊಸ ಯೋಜನೆಗೆ ಚಾಲನೆ ನೀಡಲಾಗಿದ್ದು, ಬ್ಯಾಂಕ್‌ಗೆ ಹೋಗದೆ, ಮೊಬೈಲ್‌ನಲ್ಲಿ ಒಂದೇ ಕ್ಲಿಕ್‌ ಮೂಲಕ ಪರ್ಸನಲ್‌ ಲೋನ್‌ ಪಡೆಯಬಹುದಾಗಿದೆ.

‘ಸಾಲ ನೀಡುವ ಹಣಕಾಸು ಸಂಸ್ಥೆ ಮತ್ತು ಗ್ರಾಹಕರ ಮಧ್ಯೆ ಸೇತುವೆಯಾಗಿ ಗೂಗಲ್‌ ಪೇ ಆ್ಯಪ್ ಕಾರ್ಯ ನಿರ್ವಹಿಸಲಿದೆ. ಪ್ರತಿ ತಿಂಗಳು ಆಯ್ಕೆ ಮಾಡಿದ ಬ್ಯಾಂಕುಗಳ ಮೂಲಕವೇ ಇ.ಎಂ.ಐ ಕಡಿತಗೊಳಿಸಲಾಗುತ್ತದೆʼ ಎಂದು ಗೂಗಲ್‌ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Google-Pay-general-image.

ಸಾಲ ಪಡೆಯೋದು ಹೇಗೆ?

JUST-MAHITHI-LOGOಸಾಲ ಪಡೆಯುವವರು ಗೂಗಲ್‌ ಪೇ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಹಣಕಾಸು ಸಂಸ್ಥೆಯು ಅರ್ಜಿ ಪರಿಶೀಲನೆ ಬಳಿಕ ಸಾಲ ನೀಡಲಿದೆ ಎಂದು ಗೂಗಲ್‌ ತಿಳಿಸಿದೆ. ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ವಿವರಣೆ.

ಹಂತ 1 » Google Pay ಆ್ಯಪ್‌ನಲ್ಲಿ Manage Your Money ವಿಭಾಗದಲ್ಲಿ Loans ಮೇಲೆ ಕ್ಲಿಕ್‌ ಮಾಡಬೇಕು. ಇದರಲ್ಲಿ Offers ಮೇಲೆ ಕ್ಲಿಕ್‌ ಮಾಡಿದಾಗ ಲೋನ್‌ ಆಫರ್‌ಗಳು ಲಭ್ಯವಾಗಲಿವೆ.

ಹಂತ 2 » ನಿಮಗೆ ಅವಶ್ಯವಿರುವ ಲೋನ್‌ ಆಫರ್‌ಗಳನ್ನು ಆಯ್ಕೆ ಮಾಡಬೇಕು.   ಕೆಲವು ಖಾಸಗಿ ಮಾಹಿತಿ, ಉದ್ಯೋಗ ಸಂಬಂಧ ಮಾಹಿತಿ ದಾಖಲಿಸಬೇಕು. Continue ಮೇಲೆ ಕ್ಲಿಕ್‌ ಮಾಡಬೇಕು.

ಹಂತ 3 » ಎಸ್‌ಎಂಎಸ್‌ ಮೂಲಕ OTP ಬರಲಿದೆ. ಅದನ್ನು ಗೂಗಲ್‌ ಪೇ ಆ್ಯಪ್‌ನಲ್ಲಿ ದಾಖಲಿಸಬೇಕು. SUBMIT ಮೇಲೆ ಕ್ಲಿಕ್‌ ಮಾಡಬೇಕು.

ಇದನ್ನೂ ಓದಿ » WhatsApp : ಇನ್ಮುಂದೆ ನಿಮ್ಮಿಷ್ಟದ ಸೆಲಬ್ರಿಟಿ ಧ್ವನಿಯಲ್ಲಿ ಕಳುಹಿಸಬಹುದು Voice Note

ವೈಯಕ್ತಿಕ ಸಾಲ ನೀಡುವ ಹಣಕಾಸು ಸಂಸ್ಥೆಯು ನಿಮ್ಮ ಅರ್ಜಿ ಪರಿಶೀಲಿಸದೆ. ಅರ್ಹವಾಗಿದ್ದಲ್ಲಿ ಸಾಲ ನೀಡಲಿದೆ. ನಿಮ್ಮ ಅರ್ಜಿಯ ಸ್ಟೇಟಸ್‌ ಏನು ಎಂಬುದನ್ನು ಪರಿಶೀಲಿಸಿಕೊಳ್ಳಬಹುದು. ಇದಕ್ಕೂ ಗೂಗಲ್‌ ಪೇ ಆ್ಯಪ್‌ನಲ್ಲಿ ಅವಕಾಶವಿದೆ. ಅರ್ಜಿ ಪುರಸ್ಕೃತವಾಗಿದ್ದರೆ ಹಣ ಸಂದಾಯವಾಗಲಿದೆ. ತಿರಸ್ಕೃತವಾಗಿದ್ದರೆ ಆ್ಯಪ್‌ನಲ್ಲೇ ರಿಜೆಕ್ಟ್‌ ಎಂದು ತೋರಿಸಲಿದೆ ಎಂದು ಗೂಗಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ ಡಿಎಂಐ ಫೈನಾನ್ಸ್‌ ಸಂಸ್ಥೆ ಗೂಗಲ್‌ ಪೇ ಆ್ಯಪ್‌ ಮೂಲಕ ಸಾಲ ನೀಡುವ ಯೋಜನೆ ಆರಂಭಿಸಿದೆ. ಈ ಸಂಸ್ಥೆಯು ನವದೆಹಲಿ ಮೂಲದ್ದಾಗಿದೆ.

ಇದನ್ನೂ ಓದಿ » ಇವು ಸಾಮಾನ್ಯ ಗುಂಡಿಗಳಲ್ಲ, ಬಂದ್‌ ಆಗಲು PM, CMಗಳೆ ಬರಬೇಕು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 16, 2024

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?

₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?

Leave a Comment