SHIVAMOGGA LIVE NEWS | 18 ಮಾರ್ಚ್ 2022
ಆರ್ಟ್ ಆಫ್ ಲಿವಿಂಗ್’ನ ಜ್ಞಾನ ಕ್ಷೇತ್ರ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲು ಶ್ರೀ ರವಿಶಂಕರ ಗುರೂಜಿ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಮಾರ್ಚ್ 20ರಂದು ಸಂಜೆ 5.30ಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಆರ್ಟ್ ಆಪ್ ಲಿವಿಂಗ್’ನ ಶಿವಮೊಗ್ಗ ಘಟಕದ ಸಂಯೋಜಕ ಬಿ.ಮೂರ್ತಿ ಅವರು, ಶಿವಮೊಗ್ಗದಲ್ಲಿ ಜ್ಞಾನ ಕ್ಷೇತ್ರವನ್ನು ಸ್ಥಾಪಿಸಲಾಗುತ್ತಿದೆ. ಇದರ ಕಟ್ಟಡ ಪೂಜೆಗೆ ಮಾರ್ಚ್ 20ರಂದು ಶ್ರೀ ರವಿಶಂಕರ್ ಗುರೂಜಿಯವರೇ ಆಗಮಿಸುತ್ತಿದ್ದಾರೆ. ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್ ಎದುರಿನ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಸ್ಥಳದಲ್ಲಿ ರುದ್ರಪೂಜೆ ಹಾಗೂ ಸತ್ಸಂಗ ಕಾರ್ಯಕ್ರಮ ನಡೆಯಲಿವೆ ಎಂದರು.
ಮಾನಸಿಕ ಒತ್ತಡ ಕಡಿಮೆ ಮಾಡಲು, ಆತ್ಮವಿಶ್ವಾಸ ಮೂಡಿಸಲು, ಸಕಾರಾತ್ಮಕ ಮನೋಭವ ಹೆಚ್ಚಿಸಲು, ಶಾಂತಿ ಮತ್ತು ನೆಮ್ಮದಿ ನೀಡಲು ಅನುಕೂಲವಾಗುವಂತೆ ಧ್ಯಾನ, ಯೋಗ, ನವಚೇತನ ಶಿಬಿರ ಮುಂತಾದವುಗಳನ್ನು ಈ ಕೇಂದ್ರದಲ್ಲಿ ಆಯೋಜಿಸಲಾಗುವುದು ಎಂದು ಮೂರ್ತಿ ಅವರು ತಿಳಿಸಿದರು.
ಪ್ರಮುಖರಾದ ರಮೇಶ್ ಬಾಬು, ಬ್ರಹ್ಮಾಚಾರಿ ಬ್ರಹ್ಮಪಾದ, ಪ್ರಶಾಂತ್ ಪೈ, ದೀಪಿಕಾ ಭಟ್, ಡಾ. ಅನುಪ್ ಪೈ, ಸುಮಾ ವೆಂಕಟೇಶ್, ಕೃಷ್ಣಪ್ಪ ಪಿ.ಆರ್, ಪ್ರಶಾಂತ್, ಚಂದ್ರಹಾಸ್, ಶಶಿಕುಮಾರ್ ಮುಂತಾದವರಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200