ಶಿವಮೊಗ್ಗ ಲೈವ್.ಕಾಂ | SHIMOGA | 2 ಏಪ್ರಿಲ್ 2020
ಶ್ರೀರಾಮ ನವಮಿಗೂ ಆಚರಣೆ ಮೇಲೂ ಕರೋನ ಕರಿನೆರಳು ಆವರಿಸಿದೆ. ಈ ಭಾರಿ ಶಿವಮೊಗ್ಗದಲ್ಲಿ ವಿಜೃಂಭಣೆಯ ರಾಮನವಮಿ ಆಚರಣೆ ಇಲ್ಲವಾಗಿದೆ.
ಕೊಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಲವೇ ಕೆಲವು ಭಕ್ತರಷ್ಟೆ ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ ದೇಗುಲಕ್ಕೆ ಬಂದವರು ಹೆಚ್ಚು ಹೊತ್ತು ನಿಲ್ಲದೆ ಕೈಮುಗಿದು ಹೊರಡಬೇಕು ಎಂದು ಮೈಕ್ ಮೂಲಕ ಮನವಿ ಮಾಡಲಾಗುತ್ತಿತ್ತು.
ಶ್ರೀರಾಮನವಮಿ ವೇಳೆ ನಗರದ ವಿವಿಧೆಡೆ ಪಾನಕ, ಮಜ್ಜಿಗೆ, ಕೋಸಂಬರಿ ಹಂಚಲಾಗುತ್ತಿತ್ತು. ಆದರೆ ಕರೋನ ಲಾಕ್’ಡೌನ್ ಪರಿಣಾಮ ಈ ಬಾರಿ ಮನೆಗಳಲ್ಲಷ್ಟೇ ರಾಮನಾಮ ಜಪ ಮಾಡಿ, ಪೂಜೆ ಸಲ್ಲಿಸಿ ಶ್ರೀರಾಮನವಮಿ ಆಚರಿಸಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]