ಹೆಗ್ಗೋಡಿನ ನೀನಾಸಂನಲ್ಲಿ ಕೆ.ವಿ.ಸುಬ್ಬಣ್ಣ ಸ್ಮರಣೆ, ವಿಶೇಷ ಉಪನ್ಯಾಸ, ನಾಟಕ
ಸಾಗರ: ಹೆಗ್ಗೋಡಿನ ನೀನಾಸಂ (NINASAM)ಸಂಸ್ಥೆ ವತಿಯಿಂದ ನೀನಾಸಂ ಸಭಾಂಗಣದಲ್ಲಿ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜುಲೈ 16ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಡಾ. ಮಹೇಶ ಅಡಕೋಳಿ ಅವರು ಕಾಳಿದಾಸನ ಶೃಂಗಾರ ದರ್ಶನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ 7 ಗಂಟೆಗೆ ನೀನಾಸಂ ತಂಡದ ಮಂಜು ಕೊಡಗು ನಿರ್ದೇಶನದ ನಾಟಕ ಮೀಡಿಯಾ ಪ್ರದರ್ಶನಗೊಳ್ಳಲಿದೆ ಎಂದು ಕೆ.ವಿ.ಅಕ್ಷರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಒಂದೇ ಸೆಕೆಂಡ್ಗೆ NETFLIXನ ಎಲ್ಲ ವಿಡಿಯೋ … Read more