ಡಾ.ಜಯಶ್ರೀ, ಪುತ್ರ ಆಕಾಶ್‌ ಆತ್ಮಹತ್ಯೆ ಕೇಸ್‌, ಗೊತ್ತಾಗಿದ್ದು ಹೇಗೆ? ‘ಸಾನಿಧ್ಯ’ ಮನೆ ಬಗ್ಗೆ ಜನ ಹೇಳಿದ್ದೇನು?

Doctor-house-at-Ashwathanagara-in-Shimoga

ಶಿವಮೊಗ್ಗ: ಸ್ತ್ರೀರೋಗ ತಜ್ಞೆ (Doctor) ಡಾ. ಜಯಶ್ರೀ (55) ಮತ್ತು ಅವರ ಪುತ್ರ ಆಕಾಶ್‌ (34) ಆತ್ಮಹತ್ಯೆ ಪ್ರಕರಣ ಅ‍ಶ್ವಥನಗರ ಬಡಾವಣೆಯನ್ನು ತಲ್ಲಣಗೊಳಿಸಿದೆ. ನೆಂಟರು, ಇಷ್ಟರು ದಿಗ್ಭ್ರಮೆಗೀಡಾಗಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿ ಇದ್ದರು ನೆಮ್ಮದಿ ಕಾಣದೆ ತಾಯಿ, ಮಗ ನೇಣಿಗೆ ಕೊರಳೊಡ್ಡಿದ್ದಾರೆ. ಒಂದೇ ಹೊತ್ತಲ್ಲಿ ತಾಯಿ, ಮಗ ನೇಣಿಗೆ ಡಾ. ಜಯಶ್ರೀ ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ. ಪ್ರತಿಷ್ಠಿತ ಕುಟುಂಬ, ಕೋಟಿ ಕೋಟಿ ಆಸ್ತಿಯ ಒಡತಿಯಾದರು ಹಮ್ಮು, ಅಹಮ್ಮು ತೋರಿದವರಲ್ಲ. ಗಟ್ಟಿಗಿತ್ತಿಯಾಗಿದ್ದ ಡಾ. ಜಯಶ್ರೀ ತಮ್ಮ ಮನೆಯ … Read more

BREAKING NEWS – ಶಿವಮೊಗ್ಗದ ಖ್ಯಾತ ಡಾಕ್ಟರ್‌ ಮತ್ತು ಪುತ್ರ ನೇಣಿಗೆ ಶರಣು

Hommaradi-Doctor-Jayashree-and-son-no-more

ಶಿವಮೊಗ್ಗ: ಖ್ಯಾತ ಸ್ತ್ರೀ ರೋಗ (Doctor) ತಜ್ಞೆ ಮತ್ತು ಅವರ ಪುತ್ರ ಅಶ್ವಥನಗರದ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೊಮ್ಮರಡಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ (55) ಮತ್ತು ಅವರ ಪುತ್ರ ಆಕಾಶ್‌ (34) ಮೃತಪಟ್ಟಿದ್ದಾರೆ. ಮನೆಯ ಕೆಳಭಾಗದಲ್ಲಿ ಡಾ. ಜಯಶ್ರೀ ಅವರು ನೇಣು ಬಿಗಿದುಕೊಂಡಿದ್ದರೆ, ಮೊದಲ ಮಹಡಿಯಲ್ಲಿ ಅಕಾಶ್‌ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ » ಕ್ರೆಡಿಟ್‌ ಕಾರ್ಡ್‌ನಿಂದ ಹಣ ಕಡಿತ, ಎಸ್‌ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ ಕಳೆದ ಒಂದೂವರೆ ವರ್ಷದ … Read more

ಶಿವಮೊಗ್ಗದ ‘ಎರಡು ರುಪಾಯಿ ಡಾಕ್ಟರ್‌’ ಹೃದಯಾಘಾತದಿಂದ ನಿಧನ

Dr-Suresh-Talyal-Harige-and-Jyothi-Nagara.

ಶಿವಮೊಗ್ಗ: ‘ಎರಡು ರುಪಾಯಿ ಡಾಕ್ಟರ್‌ʼ (Doctor) ಎಂದೇ ಖ್ಯಾತರಾಗಿದ್ದ ಡಾ. ಬಿ.ಎಲ್.ಸುರೇಶ್‌ ತಲ್ಯಾಳ (72) ನಿಧನರಾಗಿದ್ದಾರೆ. ಜ್ಯೋತಿನಗರದ ಮನೆಯಲ್ಲಿ ಕಳೆದ ರಾತ್ರಿ ಹೃದಯಾಘಾತ ಸಂಭವಿಸಿತ್ತು. ಹರಿಗೆ, ಒಡ್ಡಿನಕೊಪ್ಪ, ಮಲವಗೊಪ್ಪ, ಜ್ಯೋತಿನಗರ, ವಿದ್ಯಾನಗರ ಸೇರಿದಂತೆ ವಿವಿಧೆಡೆಯ ಜನರು ಡಾ. ಸುರೇಶ್‌ ತಲ್ಯಾಳ ಅವರ ಅಂತಿಮ ದರ್ಶನ ಪಡೆದರು. ಜ್ಯೋತಿನಗರದಲ್ಲಿ ಪಾರ್ವತಿ ಕ್ಲಿನಿಕ್‌ ನಡೆಸುತ್ತಿದ್ದ ಡಾ. ಸುರೇಶ್ ತಲ್ಯಾಳ ಅವರು ಎರಡು ರುಪಾಯಿ ಡಾಕ್ಟರ್‌ ಎಂದೇ ಖ್ಯಾತರಾಗಿದ್ದರು. ಹರಿಗೆ ಮತ್ತು ಸುತ್ತಮುತ್ತಲ ಭಾಗದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೆಲವು ವರ್ಷದಿಂದ … Read more

ಶಿವಮೊಗ್ಗದಲ್ಲಿ ಡಾಕ್ಟರ್‌ಗೆ ₹1.81 ಕೋಟಿ ಪಂಗನಾಮ, ಆಗಿದ್ದೇನು?

Shimoga-doctor-lost-1.81-crore-rupees.

ಶಿವಮೊಗ್ಗ: ಹೂಡಿಕೆ, ಅಧಿಕ ಲಾಭದ ಆಸೆ ತೋರಿಸಿ ಜನರನ್ನು ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ವಿದ್ಯಾವಂತರೆ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಶಿವಮೊಗ್ಗದ ವೈದ್ಯೆಯೊಬ್ಬರು (Doctor) ವಂಚಕರ ವ್ಯೂಹಕ್ಕೆ ಸಿಲುಕಿ ₹1.81 ಕೋಟಿ ಕಳೆದುಕೊಂಡಿದ್ದಾರೆ. ವಂಚಕರ ಬಲೆಗೆ ವೈದ್ಯೆ ವೈದ್ಯೆಯೊಬ್ಬರಿಗೆ (ಹೆಸರು ಗೌಪ್ಯ) ಪ್ರತಿಷ್ಠಿತ ಷೇರು ವ್ಯವಹಾರ ಸಂಸ್ಥೆಯ ಹೆಸರು ಹೇಳಿಕೊಂಡು ಅಪರಿಚಿತರು ಕರೆ ಮಾಡಿದ್ದರು. ಹಣ ಹೂಡಿಕೆ ಮಾಡಿ ಅಧಿಕ ಲಾಭಾಂಶ ಗಳಿಸಬಹುದು ಎಂದು ತಿಳಿಸಿದ್ದರು. ಅಲ್ಲದೆ ಪ್ರತಿಷ್ಠಿತ ಷೇರು ವ್ಯವಹಾರ ಸಂಸ್ಥೆಯ ವೆಬ್‌ಸೈಟ್‌ ಮೂಲಕ … Read more

ಶಿವಮೊಗ್ಗದ ಲೇಡಿ ಡಾಕ್ಟರ್‌ ವಾಟ್ಸಪ್‌ನಿಂದ ಬಂತು ಮೆಸೇಜ್‌, ನಂಬಿದ ವೈದ್ಯನಿಗೆ ನಂತರ ಕಾದಿತ್ತು ಶಾಕ್, ಏನಿದು ಕೇಸ್?

whatsapp-general-image

ಶಿವಮೊಗ್ಗ: ವೈದ್ಯೆಯೊಬ್ಬರ ವಾಟ್ಸಪ್‌ ಹ್ಯಾಕ್‌ (Hacked) ಮಾಡಿ ವೈದ್ಯರೊಬ್ಬರ ಮೊಬೈಲ್‌ಗೆ ಮೆಸೇಜ್‌ ಕಳುಹಿಸಿ ₹95,000 ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಏನಿದು ಪ್ರಕರಣ? ಶಿವಮೊಗ್ಗದ ವೈದ್ಯೆಯೊಬ್ಬರ (ಹೆಸರು ಗೌಪ್ಯ) ವಾಟ್ಸಪ್‌ ನಂಬರ್‌ ಹ್ಯಾಕ್‌ ಮಾಡಿದ ದುಷ್ಕರ್ಮಿಗಳು ಹಣದ ತುರ್ತು ಅಗತ್ಯವಿದೆ ಎಂದು ಸಹೋದ್ಯೋಗಿಗೆ ಮೆಸೇಜ್‌ ಕಳುಹಿಸಿದ್ದರು. ಅದನ್ನು ನಂಬಿದ ಸಹೋದ್ಯೋಗಿ ಆ ವಾಟ್ಸಪ್‌ ಮೆಸೇಜ್‌ನಲ್ಲಿ ಕಳುಹಿಸಲಾಗಿದ್ದ ಮತ್ತೊಂದು ಮೊಬೈಲ್‌ ನಂಬರ್‌ಗೆ ಫೋನ್‌ ಪೇ ಮೂಲಕ ಎರಡು ಬಾರಿ … Read more

ಲೋಕಾಯುಕ್ತ ಬಲೆಗೆ ಬಿದ್ದ ಡಾಕ್ಟರ್, ಏನಿದು ಕೇಸ್?

Lokayuktha-Raid-General-Image

ಶಿಕಾರಿಪುರ: ವೈದ್ಯರೊಬ್ಬರು ಶವ ಪರೀಕ್ಷೆ ವರದಿ ನೀಡುವುದಕ್ಕಾಗಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವೈದ್ಯರನ್ನು (Doctor) ಬಂಧಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್? ಶಿಕಾರಿಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯ ಗೋಪಾಲ್ ಜಿ.ಹರಿಗಿ ಬಂಧಿತ ವೈದ್ಯ. ಸತೀಶ್ ಮಂಚಿ ಎಂಬುವರ ಶವ ಪರೀಕ್ಷೆ ವರದಿ ನೀಡುವುದಕ್ಕೆ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದ ಎನ್.ವೈ.ಸುನೀಲ್ ಅರ್ಜಿ ಸಲ್ಲಿಸಿದ್ದರು. ವರದಿ ನೀಡುವುದಕ್ಕೆ ವೈದ್ಯರು 20 ರೂ. ಲಂಚದ … Read more

ಡಾಕ್ಟರ್‌ಗೆ ಆಸೆ ಮೂಡಿಸಿತು ಫೇಸ್‌ಬುಕ್‌ ಪೋಸ್ಟ್‌, ನಂಬಿ ಕ್ಲಿಕ್‌ ಮಾಡಿದ್ಮೇಲೆ ಕಾದಿತ್ತು ಬಿಗ್‌ ಶಾಕ್‌, ಕೋಟಿ ಕೋಟಿ ಮೋಸ

Online-Fraud-In-Shimoga

ಶಿವಮೊಗ್ಗ : ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಫೇಸ್‌ಬುಕ್‌ನಲ್ಲಿ ಬಂದ ಲಿಂಕ್‌ ಕ್ಲಿಕ್‌ ಮಾಡಿದ ವೈದ್ಯರೊಬ್ಬರು ಎರಡು ಕೋಟಿ ರೂ. ಹಣ ಕಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಮನೆಗೆ ಮುತ್ತಿಗೆ ಯತ್ನ, ಹಲವರು ಪೊಲೀಸ್‌ ವಸಕ್ಕೆ, ಕಾರಣವೇನು? ಶಿವಮೊಗ್ಗ ಜಿಲ್ಲೆಯ ವೈದ್ಯರೊಬ್ಬರು ಜಾಹೀರಾತಿನ ಮೇಲಿನ ಲಿಂಕ್‌ ಕ್ಲಿಕ್‌ ಮಾಡಿ, ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿದ್ದಾರೆ. ಕೂಡಲೆ ಅವರನ್ನು ವಾಟ್ಸಪ್‌ ಗ್ರೂಪ್‌ ಒಂದಕ್ಕೆ ಸೇರಿಸಿಕೊಂಡು … Read more

ಶಿವಮೊಗ್ಗದ ಡಾಕ್ಟರ್‌ಗೆ ಸೇನೆಯ ಕರ್ನಲ್‌ನಿಂದ ಫೋನ್‌, ಆಮೇಲೆ ಕಾದಿತ್ತು ಶಾಕ್‌, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ : ಭಾರತೀಯ ಸೇನೆಯ ಅಧಿಕಾರಿ ಎಂದು ನಂಬಿಸಿ ಶಿವಮೊಗ್ಗದ ವೈದ್ಯೆ (Doctor) ಮತ್ತು ಅವರ ಮನೆಯಲ್ಲಿ ಬಾಡಿಗೆಗೆ ಇರುವ ವ್ಯಕ್ತಿಯೊಬ್ಬರಿಗೆ 3.72 ಲಕ್ಷ ರೂ. ಹಣ ವಂಚಿಸಲಾಗಿದೆ. ವಿಡಿಯೋ ಕರೆ ಮಾಡಿ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂದು ನಂಬಿಸಿ ಹಣ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎನ್‌ಸಿಸಿ ಕಚೇರಿಯಿಂದ ಫೋನ್..!‌ ಶಿವಮೊಗ್ಗದ ಎನ್‌ಸಿಸಿ ಕಚೇರಿಯಿಂದ ಕ್ಯಾಪ್ಟನ್‌ ಮಾತನಾಡುತ್ತಿರುವುದಾಗಿ ತಿಳಿಸಿ ವ್ಯಕ್ತಿಯೊಬ್ಬ ವೈದ್ಯೆಗೆ (ಹೆಸರು ಗೌಪ್ಯ) ಕರೆ ಮಾಡಿದ್ದ. ಸೇನಾ ವಾಹನದಲ್ಲಿ ಸುಮಾರು 45 ರೋಗಿಗಳನ್ನು ನಿಮ್ಮ ಕ್ಲಿನಿಕ್‌ಗೆ … Read more

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಡ್ಯೂಟಿಗೆ ತೆರಳಿದ್ದ ವೈದ್ಯ, ಸ್ವಲ್ಪ ಹೊತ್ತಿನ ಬಳಿಕ ಹೊರ ಬಂದಾಗ ಕಾದಿತ್ತು ಆಘಾತ

160125 mc gann hospital general image

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬೈಕ್‌ ಕಳ್ಳರ ಹಾವಳಿ ಹೆಚ್ಚಾಗಿದೆ. ಈಗ ವೈದ್ಯರೊಬ್ಬರ (Doctor) ಬೈಕ್‌ ಕಳುವಾಗಿದ್ದು, ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ. ಭಾರ್ಗವ್‌ ಎಂಬುವವರ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕಳ್ಳತನವಾಗಿದೆ. ಡಾ. ಭಾರ್ಗವ್‌ ಅವರು ಜ.23ರಂದು ರಾತ್ರಿ 8.45ಕ್ಕೆ ಮೆಗ್ಗಾನ್‌ ಆಸ್ಪತ್ರೆ ಆಡಳಿತ ಭವನದ ಮುಂಭಾಗ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ನಿಲ್ಲಿಸಿ ಕರ್ತವ್ಯಕ್ಕೆ ತೆರಳಿದ್ದರು. ರಾತ್ರಿ 9.30ರ ಹೊತ್ತಿಗೆ ಗಮನಿಸಿದಾಗ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. … Read more

ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಡಾಕ್ಟರ್‌, ನರ್ಸ್‌, ಕಾರಣವೇನು?

160125 mc gann hospital general image

SHIVAMOGGA LIVE NEWS, 19 DECEMBER 2024 ಶಿವಮೊಗ್ಗ : ಭದ್ರಾವತಿಯ ಬಿಆರ್‌ಪಿಯ ಆಸ್ಪತ್ರೆಯ ವೈದ್ಯೆ (Doctor) ಮತ್ತು ನರ್ಸ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ. ಹಂಸವೇಣಿ ಮತ್ತು ನರ್ಸ್‌ ಸುಕನ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕರ್ತವ್ಯದ ವಿಚಾರವಾಗಿ ಇಬ್ಬರು ಪರಸ್ಪರರ ವಿರುದ್ಧ ಆರೋಪಿಸಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೆ ಇಬ್ಬರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ … Read more