ಶಿವಮೊಗ್ಗದ ಹುಲಿ, ಸಿಂಹಧಾಮಕ್ಕೆ ಬನ್ನೇರುಘಟ್ಟದಿಂದ ನೂತನ ಅತಿಥಿಗಳು
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2021 ನೈಸರ್ಗಿಕ ಕಾಡು ಹೊಂದಿರುವ ಶಿವಮೊಗ್ಗ ಮೃಗಾಲಯಕ್ಕೆ ನೂತನ ಅತಿಥಿಗಳ ಆಗಮನವಾಗಿದೆ. ಬನ್ನೇರುಘಟ್ಟ ಅಭಯಾರಣ್ಯದಿಂದ ಎರಡು ಸಿಂಹಗಳನ್ನು ಸಫಾರಿಗೆ ತರಲಾಗಿದೆ. ಇದರಿಂದ ಸಫಾರಿಯಲ್ಲಿ ಸಿಂಹಗಳ ಸಂಖ್ಯೆ ಆರಕೆ ಏರಿಕೆಯಾಗಿದೆ. ಏಳು ವರ್ಷದ ಸುಚಿತ್ರಾ ಮತ್ತು ಯಶ್ವಂತ್ ಎಂಬ ಹೆಸರಿನ ಎರಡು ಸಿಂಹಗಳನ್ನು ಶಿವಮೊಗ್ಗಕ್ಕೆ ತರಲಾಗಿದೆ. ದೀರ್ಘಕಾಲದ ಒಡನಾಟ ಹೊಂದಿರುವುದರಿಂದ ಇವರೆಡು ಸಿಂಹಗಳನ್ನು ಒಂದೆ ಕ್ರಾಲ್ನಲ್ಲಿ ಇಡಲಾಗಿದೆ. ಕೆಲ ದಿನಗಳ ಬಳಿಕ ಇವುಗಳು ಸಫಾರಿಯಲ್ಲಿ ತಿರುಗಾಡಲು ಬಿಡಲಾಗುತ್ತದೆ. … Read more