ಶಿವಮೊಗ್ಗದಲ್ಲಿ ಟೈರ್‌ ಸ್ಪೋಟ, ಸಿಟಿ ಬಸ್ಸಿನಲ್ಲಿ ಗುಂಡಿಯಾಗಿ ಕೆಳಗೆ ಬಿದ್ದ ಬಾಲಕಿ

hole-in-the-city-bus-at-nehru-road

SHIVAMOGGA LIVE NEWS | 31 MARCH 2024 SHIMOGA : ಟೈರ್‌ ಸ್ಪೋಟಗೊಂಡು ಸಿಟಿ ಬಸ್ಸಿನಿಂದ ಬಾಲಕಿಯೊಬ್ಬಳು ಕೆಳಗೆ ಬಿದ್ದು ಗಾಯಗೊಂಡಿದ್ದಾಳೆ. ಕೂಡಲೆ ಬಾಲಕಿಯನ್ನು ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಶಿವಮೊಗ್ಗದ ನೆಹರು ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಸಿಟಿ ಬಸ್ಸಿನ ಟೈರ್‌ ಸ್ಪೋಟದ ರಭಸಕ್ಕೆ ಬಸ್ಸಿನ ಒಳಗೆ ರಂದ್ರವಾಗಿದೆ. ಚಾಲಕನ ಹಿಂಬದಿ ಸೀಟಿನಲ್ಲಿದ್ದ ಬಾಲಕಿ ರಂದ್ರದೊಳಗಿನಿಂದ ರಸ್ತೆಗೆ ಬಿದ್ದಿದ್ದಾಳೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ನೆಹರೂ ರಸ್ತೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಅದೃಷ್ಟವಶಾತ್‌ ಬಾಲಕಿಯ ಪ್ರಾಣ … Read more

ನಡು ರಸ್ತೆಯಲ್ಲೇ ಕೆಟ್ಟು ನಿಂತ ಬಸ್, ನೆಹರು ರೋಡಲ್ಲಿ ವಾಹನ ಸವಾರರಿಗೆ ಪೀಕಲಾಟ

Shimoga-Nehru-Road-Traffic-jam

SHIVAMOGGA LIVE NEWS | SHIMOGA | 23 ಏಪ್ರಿಲ್ 2022 ತಾಂತ್ರಿಕ ದೋಷ ಕಾಣಿಸಿಕೊಂಡು ಖಾಸಗಿ ಬಸ್ಸೊಂದು ನಡುರಸ್ತೆಯಲ್ಲಿ ನಿಂತುಬಿಟ್ಟಿದೆ. ಇದರಿಂದ ನೆಹರೂ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಗೋಪಿ ಸರ್ಕಲ್ ಕಡೆಯಿಂದ ನೆಹರೂ ರಸ್ತೆಯಲ್ಲಿ ಬಂದ ಸಿಟಿ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಜೆಡಿಎಸ್ ಕಚೇರಿ ಸಮೀಪ ಘಟನೆ ಸಂಭವಿಸಿದೆ. ರಸ್ತೆಗೆ ಅಡ್ಡಲಾಗಿ ಬಸ್ ನಿಂತಿದೆ. ಬಸ್ಸನ್ನು ತಳ್ಳುವುದಕ್ಕು ಸಾಧ್ಯವಾಗದ ಹಿನ್ನೆಲೆ ರಸ್ತೆಯಲ್ಲೇ ನಿಂತಿದೆ. ಬಸ್ ಅಡ್ಡಾದಿಡ್ಡಿ ನಿಂತಿರುವುದರಿಂದ ಗೋಪಿ ಸರ್ಕಲ್ ಕಡೆಯಿಂದ … Read more

ಶಿವಮೊಗ್ಗದಲ್ಲಿ ಸುಧಾ ಮೂರ್ತಿ, ವಿದ್ಯಾರ್ಥಿನಿಯರ ಜೊತೆ ಸಂವಾದ | PHOTO NEWS

Sudha-Murthy-at-Shimoga-Kamala-Nehru-college

SHIVAMOGGA LIVE NEWS | 5 ಏಪ್ರಿಲ್ 2022 ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಮೃತ ಮಹೋತ್ಸವದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮಾಲಿಕೆಯ ಎರಡನೇ ಉಪನ್ಯಾಸ ಕಾರ್ಯಕ್ರಮವು ಇವತ್ತು ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ನಡೆಯಿತು. ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಅವರು ಮಹಿಳಾ ಸಬಲೀಕರಣ ವಿಚಾರವಾಗಿ ವಿದ್ಯಾರ್ಥಿನಿಯರ ಜೊತೆಗೆ ಸಂವಾದ ನಡೆಸಿದರು. ಕಾರ್ಯಕ್ರಮ ಫೋಟೊ ಗ್ಯಾಲರಿ ಇಲ್ಲಿದೆ. ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ … Read more

ಶಿವಮೊಗ್ಗ ಸಿಟಿ ಸೆಂಟರ್ ಮುಂದೆ ಬೈಕ್, ಕಾರು ಡಿಕ್ಕಿ, ಡ್ರಾಗರ್ ತೋರಿಸಿ ಬೆದರಿಕೆ

BH-Road-Aamir-Ahmed-Circle-1.jpg

ಶಿವಮೊಗ್ಗದ ಲೈವ್.ಕಾಂ | SHIMOGA NEWS | 25 ಜನವರಿ 2022 ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಬಳಿ ಕಾರು, ಬೈಕ್ ಡಿಕ್ಕಿಯಾಗಿ ಯುವಕನೊಬ್ಬ ಡ್ರಾಗರ್ ತೋರಿಸಿ ಬೆದರಿಸಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದು, ಬೈಕ್ ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ದರ್ಶನ್ ಎಂದು ಗುರುತಿಸಲಾಗಿದೆ. ಅಮೀರ್ ಅಹಮದ್ ಸರ್ಕಲ್’ನಿಂದ ನೆಹರೂ ರಸ್ತೆ ಕಡೆ ಹೋಗುವ ಮಾರ್ಗದಲ್ಲಿ, ಸಿಟಿ ಸೆಂಟರ್ ಮಾಲ್ ಬಳಿ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ದರ್ಶನ್ ಚಲಾಯಿಸುತ್ತಿದ್ದ ಬೈಕ್ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿತ್ತು. … Read more

ಗ್ಯಾಸ್, ಪೆಟ್ರೋಲ್, ಡಿಸೇಲ್ ಎಲ್ಲವೂ ದುಬಾರಿ, ಜನರ ಮೇಲೆ ತೆರಿಗೆ ಹೊರೆ, ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ

181221 Congress Protest in Shimoga against price hike

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಡಿಸೆಂಬರ್ 2021

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನೆಡೆಸಲಾಯಿತು. ಬೆಲೆ ಏರಿಕೆ ಖಂಡಿಸಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಬೆಂಬಲವಾಗಿ ಶಿವಮೊಗ್ಗದಲ್ಲಿಯೂ ಕಾಂಗ್ರೆಸಿಗರು ಪ್ರತಿಭಟನಾ ಮೆರವಣಿಗೆ ನಡೆಸಿದರು.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ರಾಮಣ್ಣ ಶ್ರೇಷ್ಠಿ ಪಾರ್ಕ್’ನಿಂದ ಗಾಂಧಿ ಬಜಾರ್ ಮೂಲಕ ಅಮೀರ್ ಅಹಮದ್ ಸರ್ಕಲ್, ನೆಹರೂ ರೋಡ್, ಗೋಪಿ ಸರ್ಕಲ್, ಬಾಲರಾಜ ಅರಸ್ ರಸ್ತೆ ಮೂಲಕ ಮಹವೀರ ವೃತ್ತಕ್ಕೆ ಆಗಮಿಸಿ ಕಾಂಗ್ರೆಸಿಗರು ಪ್ರತಿಭಟನೆ ನಡೆಸಿದರು.

ಬಿಜೆಪಿ ವಿರುದ್ಧ ತೀವ್ರ ಆಕ್ರೋಶ

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಅಡುಗೆ ಅನಿಲ, ತೈಲೋತ್ಪನ್ನ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ನಿಯಂತ್ರಿಸಬೇಕಿದ್ದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹಾಗಾಗಿ ಜನ ಸಾಮಾನ್ಯರು ಬದುಕುವುದೆ ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರಣಾಳಿಕೆಯಲ್ಲಿ ಅಚ್ಛೇ ದಿನ್ ಘೋಷಣೆ ಮಾಡಿ ಅಧಿಕಾರಕ್ಕೆ ಬಂದರು. ಪ್ರತಿ ವಿಚಾರದಲ್ಲಿಯೂ ತೆರಿಗೆ ಹೆಚ್ಚಳ ಮಾಡಿ ಜನರ ಮೇಲೆ ಹೊರೆ ಹೊರಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು ಇದ್ದ ಸಂದರ್ಭ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಕಡಿಮೆ ಇತ್ತು. ಮೋದಿ ಸರ್ಕಾರ ಬಂದ ಮೇಲೆ ಸೆಸ್ ನೆಪದಲ್ಲಿ ಭಾರಿ ದರ ಏರಿಕೆ ಮಾಡಿದ್ದಾರೆ. ಜನರಿಂದ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

AVvXsEivUotBs48rqS1BIhHt2EVY86cgahBH932mxChd 7CtfslsdZiqj6Oy6tH8tH3uFvLhJ JImdBG8yr jZYGopOw0VJtCPXv3ql5YwzT03Uh40nzT ysTSR9szFMB G5ER6AkRuPcXViPaXog2KERahqat8TeJSeHt79XF3XLytldqpNMcvXMMEl5doE2A=s926

AVvXsEhQXHc

AVvXsEhIE53OcsFGw7hqNJLniTNrTiJ36z6Fii

ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Read more

ನೆಹರೂ ಸ್ಟೇಡಿಯಂನಲ್ಲಿ ಯುವತಿಯ ಮೊಬೈಲ್, ಹಣ ಖದೀಮರ ಪಾಲು

271119 Nehru Stadium Track 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಪಿಎಸ್ಐ ಹುದ್ದೆಯ ದೈಹಿಕ ಪರೀಕ್ಷೆಯ ಸಿದ್ಧತೆಗಾಗಿ ನೆಹರೂ ಸ್ಟೇಡಿಯಂಗೆ ಬಂದಿದ್ದ ಯುವತಿಯ ಮೊಬೈಲ್ ಮತ್ತು ನಗದು ಕಳುವಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರ್ಷಿತಾ ಎಂಬುವವರಿಗೆ ಸೇರಿದ 32 ಸಾವಿರ ರೂ. ಮೌಲ್ಯದ ಮೊಬೈಲ್ ಮತ್ತು 2 ಸಾವಿರ ರೂ. ನಗದು ಕಳ್ಳತನವಾಗಿದೆ. ಹೇಗಾಯ್ತು ಘಟನೆ? ಪಿಎಸ್ಐ ಹುದ್ದೆಯ ದೈಹಿಕ ಪರೀಕ್ಷೆಯ ಸಿದ್ಧತೆಗಾಗಿ ಹರ್ಷಿತಾ ಅವರು ಆಗಸ್ಟ್ 24ರ ಸಂಜೆ … Read more