ಅಂಗನವಾಡಿ ಬೀಗ ಮುರಿದ ಕಳ್ಳರು, ಮಕ್ಕಳ ಪಾಲಿನ ಬೇಳೆ ಚೆಲ್ಲಿ, ಮೊಟ್ಟೆ ಒಡೆದು ಹಾಕಿದ ಖದೀಮರು

Anganavadi-Theft-Attempt-at-Sagara

SHIVAMOGGA LIVE | 18 JULY 2023 SAGARA : ಅಂಗಡಿಯೊಂದರ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಈ ವೇಳೆ ಅಂಗನವಾಡಿಯಲ್ಲಿದ್ದ ಬೇಳೆ ಚೀಲ ಹರಿಯಲಾಗಿದೆ. ಮಕ್ಕಳಿಗೆ ಕೊಡಲು ಇಟ್ಟಿದ್ದ ಮೊಟ್ಟೆಗಳನ್ನು ಒಡೆದು ಹಾಕಲಾಗಿದೆ. ಸಾಗರ ಪಟ್ಟಣದ ಅರಳಿಕಟ್ಟೆ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿಯಲ್ಲಿ ಭಾನುವಾರ ತಡರಾತ್ರಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಕಳ್ಳರು ಅಂಗನವಾಡಿ ಕೇಂದ್ರದಲ್ಲಿದ್ದ ಬೇಳೆ ಚೀಲವನ್ನು ಹರಿದು ಬೇಳೆಯನ್ನು ಚೆಲ್ಲಿದ್ದಾರೆ. ಮೊಟ್ಟೆಗಳ ಒಡೆದು ಹಾಕಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ KSRTC ಬಸ್‌ … Read more

ಹೆದ್ದಾರಿಯಲ್ಲಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್

Private-Bus-Incident-near-hosuru-in-Sagara

SHIVAMOGGA LIVE | 17 JULY 2023 SAGARA | ಕೆಟ್ಟು ನಿಂತಿದ್ದ ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಬಸ್ (Private Bus) ಸುಟ್ಟು ಹೋಗಿದೆ. ಸಾಗರ ತಾಲೂಕು ಆನಂದಪುರ ಬಳಿ ಘಟನೆ ಸಂಭವಿಸಿದೆ. ಖಾಸಗಿ ಬಸ್ ಕೆಟ್ಟು ರಸ್ತೆ ಬದಿ ನಿಂತಿತ್ತು. ಇವತ್ತು ರಿಪೇರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿತ್ತು. ಇದನ್ನೂ ಓದಿ – ಟ್ರಾನ್ಸ್‌ಫಾರ್ಮರ್‌ ಆಫ್‌ ಮಾಡಿ ಕರೆಂಟ್‌ ವಯರನ್ನೇ … Read more

ಟ್ರಾನ್ಸ್‌ಫಾರ್ಮರ್‌ ಆಫ್‌ ಮಾಡಿ ಕರೆಂಟ್‌ ವಯರನ್ನೇ ಕದ್ದ ಖದೀಮರು

Electric-Wire-Theft-at-Sagara-SS-Bhog-village

SHIVAMOGGA LIVE | 17 JULY 2023 SAGARA : ಟ್ರಾನ್ಸ್‌ಫಾರ್ಮರ್‌ ಆಫ್‌ ಮಾಡಿ ರಾತ್ರೋರಾತ್ರಿ ವಿದ್ಯುತ್‌ ತಂತಿ  (Power Cable) ಕಳ್ಳತನ ಮಾಡಲಾಗಿದೆ. ಸುಮಾರು ಒಂದು ಸಾವಿರ ಮೀಟರ್‌ ವಿದ್ಯುತ್‌ ತಂತಿ ಕಳುವಾಗಿದೆ ಎಂದು ಹೇಳಲಾಗುತ್ತಿದೆ. ಏನಿದು ಪ್ರಕರಣ? ಸಾಗರ ತಾಲೂಕು ಎಸ್‌.ಎಸ್.ಭೋಗ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಮತ್ತು ಹೊಸಗದ್ದೆ ಸೇರಿದಂತೆ ಇತರೆ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇಕ್ಕಿಬೀಳು ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ ಅಳವಡಿಸಲಾಗಿದೆ. ಕಳ್ಳರು ಇಕ್ಕಿಬೀಳು ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್‌ ಹರಿವು ನಿಲ್ಲಿಸಿ, ಚಾರ್ಜರ್‌ … Read more

ಯುವಕನ ಕಾಟಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ | ಕುಡಿದ ಅಮಲಿನಲ್ಲಿ ನಡು ರಸ್ತೆಯಲ್ಲಿ ಮಲಗಿ ಕುಡುಕನ ರಂಪಾಟ

Drunker-Sleeps-on-Road-creating-Traffic-Jam-at-Tippu-Nagara-Road

SHIVAMOGGA LIVE | 14 JULY 2023 ಪ್ರೀತಿ ಕಾಟಕ್ಕೆ ಯುವತಿ ಆತ್ಮಹತ್ಯೆ SAGARA : ಪ್ರೀತಿಸುವಂತೆ ಯುವಕನ ಕಿರುಕುಳಕ್ಕೆ (Harassment) ಮನನೊಂದು ಸಾಗರದಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದಿರಾ ಗಾಂಧಿ ಪ್ರಥಮ ದರ್ಜೆ ಕಾಲೇಜು ಬಿಎಸ್ಸಿ ಪದವಿ ವಿದ್ಯಾರ್ಥಿನಿ ಭವ್ಯಾ (19) ಸಾವನ್ನಪ್ಪಿದ್ದಾಳೆ. ಸೊರಬ ತಾಲೂಕು ಆನವಟ್ಟಿಯ ಹುರಳಿಕೊಪ್ಪದ ಪ್ರದೀಪ್‌ ಎಂಬಾತ ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ಪರಿಚಯವಾಗಿದ್ದ. ಪದೇ ಪದೆ ಫೋನ್‌ ಮಾಡಿ ಪ್ರೀತಿಸುವಂತೆ ಕಿರುಕುಳ (Harassment) ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದೆ ಕಾರಣಕ್ಕೆ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಜೋರು, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ?

Rain-At-Shimoga-City

SHIVAMOGGA LIVE | 6 JULY 2023 SHIMOGA : ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಉತ್ತಮ ಮಳೆಯಾಗಿದೆ (Rain Report). ಸರಾಸರಿ 36.40 ಮಿ.ಮೀ ಸುರಿದಿದೆ. ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಕಡಿಮೆ ಮಳೆಯಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ? ಶಿವಮೊಗ್ಗ 11.80 ಮಿ.ಮಿ, ಭದ್ರಾವತಿ 10.10 ಮಿ.ಮಿ., ತೀರ್ಥಹಳ್ಳಿ 50.40 ಮಿ.ಮಿ., ಸಾಗರ 80.80 ಮಿ.ಮಿ., ಶಿಕಾರಿಪುರ 18.90 ಮಿ.ಮಿ., ಸೊರಬ 28.20 ಮಿ.ಮಿ. ಹಾಗೂ ಹೊಸನಗರ 54.60 … Read more

IMPACT | ಶಿವಮೊಗ್ಗ ಲೈವ್‌ ವರದಿ ಇಂಪ್ಯಾಕ್ಟ್‌, ಶಿವಮೊಗ್ಗ – ಸಾಗರ ಹೆದ್ದಾರಿಯಲ್ಲಿ ತಪ್ಪಿತು ಮತ್ತಷ್ಟು ಅಪಘಾತ

Shivamogga-Live-Report-Impact-sagara-Road

SHIVAMOGGA LIVE|19 JUNE 2023 SHIMOGA : ಸಾಲು ಸಾಲು ಅಪಘಾತ, ಶಿವಮೊಗ್ಗ ಲೈವ್.ಕಾಂನ ನಿರಂತರ ವರದಿ ಬೆನ್ನಿಗೆ ಹೆದ್ದಾರಿ (Highway) ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಸಾಗರ ರಸ್ತೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಶಿವಮೊಗ್ಗದ ಸಾಗರ ರಸ್ತೆಗೆ ತುಮಕೂರು – ಶಿವಮೊಗ್ಗ ಚತುಷ್ಪಥ ರಸ್ತೆ ಸೇರಲಿದೆ. ಶ್ರೀರಾಮಪುರ ಬಳಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ಸಾಗರ ರಸ್ತೆಯ (Highway) ಒಂದು ಬದಿಯನ್ನು ಬಂದ್‌ ಮಾಡಲಾಗಿದೆ. ಮತ್ತೊಂದು ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. … Read more

ಶಿವಮೊಗ್ಗದ ಈ ಹೆದ್ದಾರಿಗೆ ಇನ್ನೆಷ್ಟು ಬಲಿ ಬೇಕು? ಇನ್ನಾದರೂ ಎಚ್ಚೆತ್ತುಕೊಳ್ತಾರಾ ಅಧಿಕಾರಿಗಳು?

Shimoga-Sagara-BH-Road-Highway-near-Srirampura

SHIVAMOGGA LIVE | 7 JUNE 2023 ಘಟನೆ 1 : ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಸ್‌ ಡಿಕ್ಕಿ ವಿನೋಬನಗರದ ಜೈ ಪ್ರಕಾಶ್‌ ಮಲ್ನಾಡ್‌ ಎಂಬುವವರು ರಸ್ತೆಯ (Highway) ಎಡಬದಿಯಲ್ಲಿ ನಡೆದು ಹೋಗುತ್ತಿದ್ದರು. ಹಿಂದಿನಿಂದ ಬಂದ ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಜೈ ಪ್ರಕಾಶ ಮಲ್ನಾಡ್‌ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಸ್‌ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಜೂ.8ರಂದು ಶ್ರೀರಾಂಪುರ ಬಳಿ ರಾತ್ರಿ ಈ ಘಟನೆ ಸಂಭವಿಸಿದೆ. ಘಟನೆ 2 : ರಾಂಗ್‌ … Read more

ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಇನ್ನೋವಾ‌, ಬೈಕ್ ಮುಖಾಮುಖಿ ಡಿಕ್ಕಿ, ಸಿಸಿಟಿವಿ ದೃಶ್ಯ ಹೇಳಿತು ಸಾಕ್ಷಿ

Bike-Car-Collision-at-Shimoga-Sagara-Road

SHIVAMOGGA LIVE | 8 JUNE 2023 SHIMOGA : ರಾಂಗ್‌ ಸೈಡ್‌ನಲ್ಲಿ (Wrong Side) ಬೈಕ್‌ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದ ಇಬ್ಬರು ಬೈಕ್‌ ಸವಾರರು ಗಾಯಗೊಂಡಿದ್ದಾರೆ. ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗಿದೆ. ಶಿವಮೊಗ್ಗ – ಸಾಗರ ರಸ್ತೆಯ ಪೆಸೆಟ್‌ ಕಾಲೇಜು ಮುಂಭಾಗ ಜೂ.5ರ ರಾತ್ರಿ ಘಟನೆ ಸಂಭವಿಸಿದೆ. ಬೈಕ್‌ ಸವಾರರಾದ ಸಾಗರ ತಾಲೂಕು ಕುಂಬ್ರಿ ಗ್ರಾಮದ ರಘು (28) ಮತ್ತು ಸಂದೀಪ (29) ಗಾಯಗೊಂಡಿದ್ದಾರೆ. ಇದನ್ನೂ ಓದಿ – ಸಿಟಿ ಬಸ್‌ ಡಿಕ್ಕಿಯಾಗಿ ಪ್ರಜ್ಞಾಹೀನ … Read more

40 ಪರ್ಸೆಂಟ್‌ ವಿರುದ್ಧ ಶಿವಮೊಗ್ಗದಲ್ಲಿ ಮಹಿಳೆಯರ ಹೋರಾಟ, ಡಿಸಿ ಕಚೇರಿ ಗೇಟ್‌ಗೆ ಅಡ್ಡಲಾಗಿ ಕುಳಿತು ಆಕ್ರೋಶ

Charaka-Women-Protest-In-front-of-Shimoga-DC-Office

SHIVAMOGGA LIVE | 3 JUNE 2023 SHIMOGA : ಚರಕ ಸಂಸ್ಥೆಗೆ (charaka) ಸರ್ಕಾರ ಬಿಡುಗಡೆ ಮಾಡಿರುವ ಯೋಜನೆಯೊಂದರ ಹಣದಲ್ಲಿ ಅಧಿಕಾರಿಗಳು ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಕೈ ಮಗ್ಗ ಮತ್ತು ಜವಳಿ ಇಲಾಖೆಯ ನೀತಿ, ನಿಯಮಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಚರಕ ಪ್ರಸನ್ನ ನೇತೃತ್ವದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಗೇಟ್‌ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸಿದರು. 40 ಪರ್ಸೆಂಟ್‌ ವ್ಯವಸ್ಥೆ … Read more

ನಾಡ ಕಚೇರಿಗೆ ಎಂಎಲ್‌ಎ ದಿಢೀರ್‌ ಭೇಟಿ, ಉಪ ತಹಶೀಲ್ದಾರ್‌ಗೆ ಖಡಕ್‌ ಸೂಚನೆ

MLA-Beluru-Gopalakrishna-Sudden-Visit-to-Ripponpete-Nadakacheri.

SHIVAMOGGA LIVE | 31 MAY 2023 RIPPONPETE : ಇಲ್ಲಿನ ನಾಡ ಕಚೇರಿಗೆ (Nada Kacheri) ಶಾಸಕ ಬೇಳೂರು ಗೋಪಾಲಕೃಷ್ಣ ಅವರು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಕಾರ್ಯ ಚಟುವಟಿಕೆ ಗಮನಿಸಿದರು. ಸಾರ್ವಜನಿಕರ ಅಹವಾಲು ಆಲಿಸಿದರು. ಈ ವೇಳೆ ಉಪ ತಹಶೀಲ್ದಾರ್‌ ಹುಚ್ಚರಾಯಪ್ಪ ಅವರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಕೆಲವು ಸೂಚನೆ ನೀಡಿದರು. ನಾಡ ಕಚೇರಿಗೆ (Nada Kacheri) ಸೂಕ್ತ ಕಟ್ಟಡವಿಲ್ಲ. ಮುಂದೆ ಸೂಕ್ತ ಸ್ಥಳ ಗುರುತಿಸಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು … Read more