ಕೆಮಿಕಲ್‌ನಲ್ಲಿ ಪೇಪರ್‌ ಅದ್ದಿ 500 ರೂ. ನೋಟ್‌ ತಯಾರಿ, ಕಣ್ಣಾರೆ ಕಂಡು ನಂಬಿದ ವ್ಯಕಿಗೆ ಲಕ್ಷ ಲಕ್ಷ ಟೋಪಿ

Crime-News-General-Image

SHIVAMOGGA LIVE NEWS | 9 FEBRUARY 2024  SHIMOGA : ಕೆಮಿಕಲ್‌ನಲ್ಲಿ ಪೇಪರ್‌ ಅದ್ದಿ 500 ರೂ. ನೋಟು ಬರುವಂತೆ ಮಾಡಿ, ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 31.30 ಲಕ್ಷ ರೂ. ವಂಚಿಸಲಾಗಿದೆ. ಹೊಸದುರ್ಗದ ಮಲ್ಲಿಕಾರ್ಜುನ ಎಂಬುವವರು ವಂಚನೆಗೊಳಗಾಗಿದ್ದು ಶಿವಮೊಗ್ಗದ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಕೆಮಿಕಲ್‌ನಲ್ಲಿ ಪೇಪರ್‌ ಅದ್ದಿ 500 ರೂ. ನೋಟ್‌  ಮಲ್ಲಿಕಾರ್ಜುನ ಅವರು ಕಾರು ರಿಪೇರಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದಾಗ ರಶೀದ್‌ ಎಂಬಾತನ ಪರಿಚಯವಾಗಿತ್ತು. ಆತ ಹಣ ಡಬಲ್‌ … Read more

ಭದ್ರಾವತಿಯಲ್ಲಿ ಫಳಫಳ ಹೊಳೆಯಿತು ಹಿತ್ತಾಳೆ ಲೋಟ, ನಂಬಿ ಚಿನ್ನದ ತಾಳಿ ಕೊಟ್ಟ ಮಹಿಳೆಗೆ ಕಾದಿತ್ತು ದೊಡ್ಡ ಆಘಾತ

Bhadravathi-Rural-Police-Station

SHIVAMOGGA LIVE NEWS | 6 FEBRUARY 2024 BHADRAVATHI : ಹಿತ್ತಾಳೆ, ಬೆಳ್ಳಿ, ಬಂಗಾರದ ವಸ್ತುಗಳಿಗೆ ಪಾಲಿಶ್‌ ಮಾಡಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ಭದ್ರಾವತಿಯ ಭಂಡಾರಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಫಳಫಳ ಹೊಳೆಯಿತು ಹಿತ್ತಾಳೆ ಲೋಟ ಜಯಮ್ಮ ಎಂಬುವವರ ಮನೆ ಬಳಿ ಬಂದ ಇಬ್ಬರು ಅಪರಿಚಿತರು ಹಿತ್ತಾಳೆ, ಬೆಳ್ಳಿ, ಚಿನ್ನದ ವಸ್ತುಗಳಿಗೆ ಪಾಲಿಶ್‌ ಮಾಡಿಕೊಡುವುದಾಗಿ ತಿಳಿಸಿದ್ದರು. ನಂಬಿದ ಜಯಮ್ಮ ಮೊದಲು ಹಿತ್ತಾಳೆ ಲೋಟ ನೀಡಿದ್ದು, ಇಬ್ಬರು ಅಪರಿಚಿತರು ಲೋಟ ಹೊಳೆಯುವಂತೆ ಮಾಡಿಕೊಟ್ಟರು. ವಿಶ್ವಾಸ … Read more

ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ರೂ. ವಂಚನೆ, ಹೇಗಾಯ್ತು ಮೋಸ? ಏನಿದು ಪ್ರಕರಣ?

crime name image

SHIVAMOGGA LIVE NEWS | 3 NOVEMBER 2023 SHIMOGA : ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರಾಣೆಬೆನ್ನೂರಿನ ದಂಪತಿಗೆ ವ್ಯಕ್ತಿಯೊಬ್ಬ 30 ಲಕ್ಷ ರೂ. ವಂಚಿಸಿದ (Job Scam) ಆರೋಪ ಕೇಳಿ ಬಂದಿದೆ. ಕೊಟ್ಟ ಹಣವು ಸಿಗದೆ, ಕೆಲಸವು ದೊರೆಯದೆ ಆತಂಕಕ್ಕೀಡಾದ ದಂಪತಿ ದೂರು ನೀಡಿದ್ದಾರೆ. ಕೋವಿಡ್‌ ಸಂದರ್ಭ ರಾಣೆಬೆನ್ನೂರಿನ ಕಿರಣ್‌ ಮತ್ತು ದೀಪಾ ದಂಪತಿ ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡರು. ತಮ್ಮೂರಿಗೆ ಮರಳಿ ಜೀವನ ನಡೆಸುತ್ತಿದ್ದರು. ಶಿವಮೊಗ್ಗದಲ್ಲಿರುವ ಸಂಬಂಧಿಯೊಬ್ಬರ ಅಂಗಡಿ ಬಳಿ ಬಂದಾಗ ವೆಂಕಟರೆಡ್ಡಿ ಎಂಬಾತನ … Read more

ನಿಧಿ ಆಸೆ, ಬೆಂಗಳೂರಿನ ವ್ಯಕ್ತಿಗೆ ಶಿವಮೊಗ್ಗದಲ್ಲಿ ಲಕ್ಷ ಲಕ್ಷ ರೂ. ವಂಚನೆ, ಹೇಗಾಯ್ತು ಮೋಸ?

crime name image

SHIVAMOGGA LIVE NEWS | 24 AUGUST 2023 SHIMOGA : ಮನೆ ಬುನಾದಿ ಅಗೆಯುವಾಗ ಚಿನ್ನದ ನಾಣ್ಯಗಳ (Gold Coins) ನಿಧಿ ಪತ್ತೆಯಾಗಿದೆ. ಅದನ್ನು ಮಾರಾಟ ಮಾಡುತ್ತಿರುವುದಾಗಿ ನಂಬಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಐದು ಲಕ್ಷ ರೂ. ವಂಚನೆ ಮಾಡಲಾಗಿದೆ. ಬೆಂಗಳೂರಿನ ಮಂಜುನಾಥ ಸ್ವಾಮಿ ಎಂಬುವವರಿಗೆ ಶಿವಪ್ಪ ಗೊಲ್ಲರ್‌ ಎಂಬಾತ ವಂಚನೆ ಮಾಡಿದ್ದಾನೆ. ಅಜ್ಜನಿಗೆ ಸಿಕ್ತು ರಾಶಿ ರಾಶಿ ಚಿನ್ನದ ನಾಣ್ಯ ಹುಬ್ಬಳ್ಳಿಯ ಬಸಾಪುರ ಗ್ರಾಮದಲ್ಲಿ ಮನೆಯ ಬುನಾದಿ ಅಗೆಯುವಾಗ ಅಜ್ಜನಿಗೆ ಚಿನ್ನದ ನಾಣ್ಯಗಳ (Gold Coins) … Read more

ಶಿವಮೊಗ್ಗ ವಿಮಾನ ನಿಲ್ದಾಣ, ತನಿಖೆಗೆ ಒತ್ತಾಯ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹ

DK-Shivakumar-abhimani-Mohan-protest-against-airport-scam

SHIVAMOGGA LIVE | 1 AUGUST 2023 SHIMOGA : ಸೋಗಾನೆ ವಿಮಾನ ನಿಲ್ದಾಣ (Airport) ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ಈ ಹಿನ್ನಲೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಬಾಕಿ ಇರುವ ಬಿಲ್ ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘದ ಪ್ರಮುಖರು ಮತ್ತು ಕಾಂಗ್ರಸ್ ನಾಯಕರು, ವಿಮಾನ ನಿಲ್ದಾಣ ಕಾಮಗಾರಿಯ ಪರಿಷ್ಕೃತ ಮೊತ್ತದಲ್ಲಿ ಅವ್ಯವಹಾರ ನಡೆದಿರುವ ಶಂಕೆ … Read more

ಫೇಸ್‌ಬುಕ್‌ನಲ್ಲಿ ಜಾಹೀರಾತು, ಫೋನಿನಲ್ಲಿ ಬಣ್ಣ ಬಣ್ಣದ ಮಾತು, ನಂಬಿದ ಶಿವಮೊಗ್ಗದ ವ್ಯಕ್ತಿಗೆ ಆಘಾತ ಕಾದಿತ್ತು, ಏನಿದು?

facebook-fraud-in-Shimoga

SHIVAMOGGA LIVE | 20 JUNE 2023 SHIMOGA : ಫೇಸ್‌ಬುಕ್‌ ಮಾರ್ಕೆಟ್‌ ಪ್ಲೇಸ್‌ನಲ್ಲಿ (Facebook Market Place) ಕಾರು ಮಾರಾಟಕ್ಕಿದೆ ಎಂಬುದನ್ನು ಗಮನಿಸಿ ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರು 1 ಲಕ್ಷ ರು. ಹಣ ಕಳೆದುಕೊಂಡಿದ್ದಾರೆ. ಸೇನೆಯ ಅಧಿಕಾರಿಯ ಸೋಗಿನಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬರನ್ನು ವಂಚಿಸಲಾಗಿದೆ. ಹೇಗಾಯ್ತು ವಂಚನೆ? ಫೇಸ್‌ಬುಕ್‌ನ ಮಾರ್ಕೆಟ್‌ ಪ್ಲೇಸ್‌ ಪೇಜ್‌ನಲ್ಲಿ (Facebook Market Place) ಆಲ್ಟೋ ಕಾರು ಮಾರಾಟಕ್ಕಿದೆ ಎಂದು ಪೋಸ್ಟ್‌ ಪ್ರಕಟಿಸಲಾಗಿತ್ತು. ಇದನ್ನು ಗಮನಿಸಿದ ಶಿವಮೊಗ್ಗದ ವ್ಯಕ್ತಿ ಪೋಸ್ಟ್‌ನಲ್ಲಿದ್ದ … Read more

ಆಸ್ಪತ್ರೆಯ ಪಕ್ಕದ ಬೆಡ್ನಲ್ಲಿದ್ದವಳು ಸಾಮಾನ್ಯಳಲ್ಲ, ಬಣ್ಣದ ಮಾತಿಗೆ ಶಿವಮೊಗ್ಗದ ಮಹಿಳೆ ಕಳೆದುಕೊಂಡಳು ಲಕ್ಷ ಲಕ್ಷ

Crime-News-General-Image

SHIVAMOGGA LIVE NEWS | 11 APRIL 2023 SHIMOGA : ಮೆಗ್ಗಾನ್ ಆಸ್ಪತ್ರೆಯ ಮಹಿಳಾ ವಾರ್ಡ್‍ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಚಿನ್ನದ ನಾಣ್ಯಗಳನ್ನು (gold coin) ಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 10 ಲಕ್ಷ ರೂ. ವಂಚಿಸಿದ್ದಾಳೆ. ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ಮಹಿಳಾ ವಾರ್ಡ್‍ನಲ್ಲಿ ವಂಚಕಿ ಪರಿಚಯ ಶಿವಮೊಗ್ಗದ ರಶ್ಮಿ ಎಂಬುವವರು ಗರ್ಭಕೋಶದ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆಯಲು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳಾ ವಾರ್ಡ್‍ನಲ್ಲಿ ರಶ್ಮಿ ಅವರ ಪಕ್ಕದ ಬೆಡ್‍ನಲ್ಲಿ ದಾಖಲಾಗಿದ್ದ ಗೀತಾ ಅಲಿಯಾಸ್ ಜಯಮ್ಮ … Read more

ಉಪನ್ಯಾಸಕಿಗೆ ಬಂತು ಫೋನ್ ಕರೆ, 24 ಗಂಟೆಯಲ್ಲಿ ಬ್ಲಾಕ್ ಆಗಲಿದೆ ಎಂದು ಎಚ್ಚರಿಕೆ, ನಂಬಿಸಿ ವಂಚನೆ

Online-Fraud-In-Shimoga

SHIVAMOGGA LIVE NEWS | 9 APRIL 2023 SHIMOGA : ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ಫೋನ್ (Phone Call) ಮಾಡಿ ಉಪನ್ಯಾಸಕಿ ಒಬ್ಬರ ಖಾತೆಯಿಂದ 98 ಸಾವಿರ ರೂ. ಹಣ ಡ್ರಾ ಮಾಡಲಾಗಿದೆ. ಶಿವಮೊಗ್ಗದ ಉಪನ್ಯಾಸಕಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತನೊಬ್ಬ ತಾನು ಕೆನರಾ ಬ್ಯಾಂಕ್ (Phone Call) ಸಿಬ್ಬಂದಿ ಎಂದು ತಿಳಿಸಿದ್ದಾನೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಅಪ್‍ಡೇಟ್ ಮಾಡಬೇಕು ಇಲ್ಲವಾದಲ್ಲಿ 24 ಗಂಟೆಯಲ್ಲಿ ಖಾತೆ ಬ್ಲಾಕ್ ಆಗಲಿದೆ. ಎಟಿಎಂ ಕಾರ್ಡ್ ಅವಧಿ … Read more

ಮೀನು ಸಾಕಾಣಿಕೆ ಮಾಡಬೇಕಿದ್ದ ಗುತ್ತಿಗೆದಾರ ಕೆರೆಯ ನೀರು ಖಾಲಿ ಮಾಡಿ, ಮಣ್ಣು ತೆಗೆದು ಮಾರಿದ

Bhadravathi News Graphics

SHIVAMOGGA LIVE NEWS | 5 DECEMBER 2022 ಭದ್ರಾವತಿ : ಕೆರೆಯ ನೀರನ್ನು ಖಾಲಿ ಮಾಡಿ, ಮಣ್ಣು ತೆಗೆದು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಾಗಿದೆ. (lake scam) ನಜೀರ್ ಅಹಮದ್ ಎಂಬುವವರು ಭದ್ರಾವತಿ ತಾಲೂಕು ಸಿದ್ದಾಪುರ ಕೆರೆಯಲ್ಲಿ (lake scam) ನೀರು ಖಾಲಿ ಮಾಡಿ, ಮಣ್ಣು ತೆಗೆಸುತ್ತಿದ್ದರು. ಹಿಟಾಚಿ ಬಳಸಿ 15 ರಿಂದ 20 ಅಡಿಯಷ್ಟು ಮಣ್ಣು ತೆಗೆದಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದರು. ಈ ಹಿನ್ನಲೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು … Read more

‘ಮನೆಯಲ್ಲಿ ಕೆಲವೇ ಗಂಟೆ ಕೆಲಸ ಮಾಡಿ ಲಕ್ಷ ಲಕ್ಷ ಸಂಪಾದಿಸಿ’, ಸ್ವಲ್ಪ ಯಾಮಾರಿದರೆ ಬೀಳುತ್ತೆ ಟೋಪಿ

Online-Fraud-Case-image

SHIVAMOGGA LIVE | 24 JUNE 2022 | WORK FROM HOME SCAM ಎಷ್ಟೇ ಸಂಬಳ ಬಂದರೂ ಕಡಿಮೆ ಅನಿಸುವ ಜಮಾನ ಇದು. ಹಾಗಾಗಿಯೇ ಬಹುತೇಕರು PART TIME JOB, WORK FROM HOMEಗಳ ಹುಡುಕಾಟದಲ್ಲಿರುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡು, ಜನರನ್ನು ವಂಚಿಸುವ ಜಾಲಗಳು ಕಾರ್ಯಪ್ರವೃತ್ತವಾಗಿವೆ. ಇವರ ಬಲೆಗೆ ಬಿದ್ದವರು ಅದರಿಂದ ಹೊರ ಬರುವುದು ಅಷ್ಟು ಸುಲಭವಲ್ಲ. WORK FROM HOME ಜಾಲಕ್ಕೆ ಸಿಲುಕಿ ಶಿವಮೊಗ್ಗದ ಮಹಿಳೆಯೊಬ್ಬರು 1.35 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಈ … Read more