ಕಾರಣವೇ ಇಲ್ಲದೆ ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲು ಪ್ಲಾನ್, ರೈತರು ಫುಲ್ ಗರಂ, ಡ್ಯಾಂನಲ್ಲಿ ನೀರೆಷ್ಟಿದೆ? ಎಷ್ಟು ನೀರನ್ನು ಹೊರ ಬಿಡಲಾಗುತ್ತೆ?

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA | 2 ಮಾರ್ಚ್ 2020 ಭದ್ರಾ ಜಲಾಶಯದಿಂದ ಆರು ಟಿಎಂಸಿ ನೀರು ಹೊರ ಹರಿಸಲು‌ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದ್ದು, ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಕ್ಕೀಡಾಗಿದ್ದಾರೆ. ಡ್ಯಾಮ್‌ನಲ್ಲಿರುವ ನೀರನ್ನು ಅಪವ್ಯಯ ಮಾಡಿದರೆ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಯಶವಂತರಾವ್ ಘೋರ್ಪಡೆ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಭದ್ರಾ ಜಲಾಶಯದಲ್ಲಿ 53.090 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ ಸುಮಾರು … Read more

KSRTC ಬಸ್ ಪ್ರಯಾಣ ದರ ಹೆಚ್ಚಳ, ಶಿವಮೊಗ್ಗದಿಂದ ಯಾವ್ಯಾವ ಊರಿಗೆ ಎಷ್ಟಾಗುತ್ತೆ ಗೊತ್ತಾ ಟಿಕೆಟ್ ರೇಟ್?

280220 KSRTC Ticket Fare 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಫೆಬ್ರವರಿ 2020 ರಾಜ್ಯ ರಸ್ತೆ ಸಾರಿಗೆ ನಿಗಮವು ಬಸ್ ಪ್ರಯಾಣ ದರವನ್ನು ಶೇ.12ರಷ್ಟು ಏರಿಕೆ ಮಾಡಿದ ಬಳಿಕ ಶಿವಮೊಗ್ಗದಿಂದ ರಾಜಧಾನಿ ಬೆಂಗಳೂರಿನ ಪ್ರಯಾಣದ ದರ ಏಕಾಏಕಿ 31 ರೂ. ಮತ್ತು ಮೈಸೂರಿಗೆ 35 ರೂ. ಹೆಚ್ಚಳವಾಗಿದೆ. ಬೆಂಗಳೂರಿಗೆ ವೇಗದೂತ ಬಸ್ ಪ್ರಯಾಣ ದರ 257 ರೂ. ಇತ್ತು. ಮಂಗಳವಾರ ಮಧ್ಯರಾತ್ರಿಯಿಂದ ಪ್ರಯಾಣ ದರವು 288 ರೂ.ಗಳಿಗೆ ಏರಿಕೆಯಾಗಿದೆ. ಅಂದರೆ ಶಿವಮೊಗ್ಗ- ಬೆಂಗಳೂರು ನಡುವಿನ ಪ್ಯಾಸೆಂಜರ್ ರೈಲು ಪ್ರಯಾಣ ದರದ … Read more

ಶಿವಮೊಗ್ಗದ ಸೈನಿಕ ಪಾರ್ಕ್’ಗೆ ಇದೆಂಥಾ ದುಸ್ಥಿತಿ? ಏಳೇ ತಿಂಗಳಲ್ಲಿ ಹೇಗಾಗಿದೆ ಗೊತ್ತಾ ಇದರ ಪರಿಸ್ಥಿತಿ? ಡಿಸಿ ಮನೆ ಮುಂದೆಯೇ ನಿರ್ಲಕ್ಷ್ಯ

270220 Sainika Park No Maintenence 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಫೆಬ್ರವರಿ 2020 ಕರ್ನಾಟಕದ ಮೊದಲ ಸೈನಿಕ ಪಾರ್ಕ್’ಗೆ ಇದೆಂಥಾ ದುಸ್ಥಿತಿ? ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರ ಮನೆ ಮುಂದೆಯೇ ಇರುವ ಹೆಮ್ಮೆಯ ಉದ್ಯಾನವನಕ್ಕಿಲ್ಲ ರಕ್ಷಣೆ. ನಿರ್ಮಾಣವಾಗಿ ಎಳು ತಿಂಗಳಲ್ಲಿ ಸೈನಿಕ ಪಾರ್ಕ್, ಕಳೆ ಕಳೆದುಕೊಂಡು ತನ್ನ ಹಳೆ ಸ್ವರೂಪಕ್ಕೆ ಬಂದಿದೆ. ಅನೈತಿಕ ಚಟುವಟಿಕೆಯ ಬೀಡಾಗಿದೆ. ಬೀಯರ್ ಬಾಟಲಿಗಳು, ಮದ್ಯದ ಪೌಚ್’ಗಳು, ಗುಟ್ಕಾ, ಸಿಗರೇಟ್ ಪ್ಯಾಕೆಟ್’ಗಳೇ ರಾರಾಜಿಸುತ್ತಿವೆ. ಕಾರ್ಗಿಲ್ ವಿಜಯ ದಿವಸ್’ಗೆ ಉದ್ಘಾಟನೆ 2019ರ  ಜುಲೈ ತಿಂಗಳಲ್ಲಿ ಕಾರ್ಗಿಲ್ … Read more

ವೈಭವದ ಸಾಗರ ಮಾರಿಕಾಂಬ ಜಾತ್ರೆಗೆ ತೆರೆ, ಕೊನೆ ದಿನವು ಹರಿದು ಬಂತು ಭಕ್ತಸಾಗರ

180220 Sagara Marikamba Jathre Inauguration 1

ಶಿವಮೊಗ್ಗ ಲೈವ್.ಕಾಂ | SAGARA | 26 ಫೆಬ್ರವರಿ 2020 ಸಾಗರದ ಐತಿಹಾಸಿಕ ಶ್ರೀ ಮಾರಿಕಾಂಬ ಜಾತ್ರೆಗೆ ತೆರೆಬಿದ್ದಿದೆ. 9 ದಿನ ನಡೆದ ಅದ್ಧೂರಿ ಜಾತ್ರೆಯಲ್ಲಿ ಲಕ್ಷಾಂತರ ಜನರು ಶ್ರೀದೇವಿಯ ದರ್ಶನ ಪಡೆದರು. ನಿತ್ಯ ಸಾವಿರಾರು ಜನರು ಸರತಿ ಸಾಲಿನಲ್ಲಿ ದೇವಿಗೆ ಉಡಿ ಸಮರ್ಪಿಸುವ ಮೂಲಕ ಹರಕೆ ತೀರಿಸಿದರು. ಶ್ರೀದೇವಿಗೆ ಕುಂಕುಮಾರ್ಚನೆ, ತುಲಾಭಾರ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಸಾಗರದ ಜನರು ಹಬ್ಬಕ್ಕಾಗಿಯೇ ಆಗಮಿಸಿ ದರ್ಶನ ಪಡೆದರು. ದಾಸೋಹಕ್ಕೆ ಒಂದು ಲಕ್ಷ ಜನ … Read more

ಶಿವಮೊಗ್ಗದಲ್ಲಿ ಸಿಎಂ, ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆ ಆಗಬಾರದು, ಆಟೋ ಕಾಂಪ್ಲೆಕ್ಸ್, ಕೈಗಾರಿಕಾ ವಲಯಕ್ಕೆ 40 ಕೋಟಿ ಮಂಜೂರು

ಶಿವಮೊಗ್ಗ ಲೈವ್.ಕಾಂ | SHIMOGA | 24 ಫೆಬ್ರವರಿ 2020 ಸಾಗರ ರಸ್ತೆಯ ಕೈಗಾರಿಕಾ ವಲಯ, ಆಟೋ ಕಾಂಪ್ಲೆಕ್ಸ್ ಹಾಗೂ ಕಲ್ಲೂರು-ಮಂಡ್ಲಿ ಕೈಗಾರಿಕಾ ವಲಯ ಅಭಿವೃದ್ದಿಗೆ 40 ಕೋಟಿ ರೂ. ಮಂಜೂರಾತಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಭೆ ನಡೆಸಿದ ಅವರು,ಮೂರೂ ಕೈಗಾರಿಕಾ ವಲಯಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ರಸ್ತೆ, ಚರಂಡಿ ಸೇರಿ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವುದಾಗಿ … Read more

ಆಘಾತಕಾರಿ ಸಂಗತಿ, ಶಿವಮೊಗ್ಗ ಜಿಲ್ಲೆಯಾದ್ಯಂತ 30 ದಿನದಲ್ಲಿ 29 ಮಂದಿ ರಸ್ತೆ ಅಪಘಾತದಲ್ಲಿ ಸಾವು

BH Road Shivappanayaka Statue 1

ಶಿವಮೊಗ್ಗ ಲೈವ್.ಕಾಂ | SHIMOGA | 24 ಫೆಬ್ರವರಿ 2020 ಜಿಲ್ಲೆಯಲ್ಲಿ ಕಳೆದ 30 ದಿನಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿಬರೋಬ್ಬರಿ 29 ಮೃತಪಟ್ಟಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಹೆಲ್ಮಟ್ ಧರಿಸದ ಪ್ರಕರಣಗಳಾಗಿವೆ. ಇಂತಹ ಆಘಾತಕಾರಿ ಮಾಹಿತಿಯನ್ನು ಎಸ್ಪಿ ಕೆ.ಎಂ.ಶಾಂತರಾಜು ಬಹಿರಂಗ ಪಡಿಸಿದ್ದಾರೆ. ನಗರದ ಡಿಎಆರ್ ಸಭಾಂಗಣದಲ್ಲಿ ಎಸ್ಸಿ ಮತ್ತು ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಹೆಲ್ಮಟ್ ಧರಿಸದ ಸಾರ್ವಜನಿಕರ ರಕ್ಷಣೆಗೆ ಹೆಲ್ಮೆಟ್ ಪಕರಣ ಕಡ್ಡಾಯಗೊಳಿಸಲಾಗಿದೆ. ಕಳೆದೊಂದು ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ 29 ಜನರು ಮೃತಪಟ್ಟಿದ್ದಾರೆ. ಅದರಲ್ಲಿ … Read more

ನಾಳೆ ಶಿವಮೊಗ್ಗ ಮಾರಿ ಜಾತ್ರೆಗೆ ಚಾಲನೆ, ರೆಡಿಯಾಯ್ತು ಒಂದೂವರೆ ಕೆಜಿ ಬೆಳ್ಳಿ ಗದೆ, ಈ ಬಾರಿ ಜಾತ್ರೆಯ ವಿಶೇಷತೆಗಳೇನು ಗೊತ್ತಾ?

240220 Marikamba Jatre Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 24 ಫೆಬ್ರವರಿ 2020 ಫೆಬ್ರವರಿ 25ರಿಂದ ಐದು ದಿನ ನಡೆಯಲಿರುವ ಶಿವಮೊಗ್ಗ ಮಾರಿಕಾಂಬ ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ದೇವಸ್ಥಾನ ಮುಂಭಾಗದ ರಸ್ತಯಲ್ಲಿ ಪೆಂಡಾಲ್ ಹಾಕಲಾಗಿದೆ. ದೇಗುಲದ ಮುಂದೆ ಚಪ್ಪರ ಹಾಕುವ ಕಾರ್ಯ ನಡೆಯುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಫೆ.25ರಂದು ಮಾರಿದೇವಿಯನ್ನು ಗಾಂಧಿ ಬಜಾರ್‌ನಲ್ಲಿ ಕೂರಿಸಲಾಗುತ್ತಿದ್ದು ಅಲ್ಲಿ ಪೇಂಟಿಂಗ್, ದ್ವಾರ ಬಾಗಿಲಿನ ಸಿದ್ಧತೆ ನಡೆಯುತ್ತಿದೆ. ಈ ಬಾರಿ ವಿಐಪಿ ಪಾಸ್‌ಗಳನ್ನು … Read more

ಸಹ್ಯಾದ್ರಿ ಉತ್ಸವ ಮಾದರಿಯಲ್ಲೇ ಶಿವಮೊಗ್ಗ ಮಾರಿಕಾಂಬ ಜಾತ್ರೆಯಲ್ಲೂ ಹೆಲಿ ಟೂರಿಸಂ, ಹಾರಾಟ ಯಾವತ್ತಿಂದ? ದರ ಎಷ್ಟು ಗೊತ್ತಾ?

Helicopter General Image 1

ಶಿವಮೊಗ್ಗ ಲೈವ್.ಕಾಂ | SHIMOGA | 23 ಫೆಬ್ರವರಿ 2020 ಸಹ್ಯಾದ್ರಿ ಉತ್ಸವ ಮಾದರಿಯಲ್ಲೇ ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆಯಲ್ಲೂ ಹೆಲಿ ಟೂರಿಸಿಂ ಇರಲಿದೆ. ಜಾತ್ರೆ ನಡೆಯುವ ಐದು ದಿನವು ಶಿವಮೊಗ್ಗದ ನಗರದ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಾತ್ರೆ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಹೆಲಿಕಾಪ್ಟರ್ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತು ವಿಜಯೇಂದ್ರ ಅವರ ಸಹಕಾರದಿಂದ ಹೆಲಿ ಟೂರಿಸಂಗೆ ಅವಕಾಶ ಲಭ್ಯವಾಗಿದೆ. ನಾಗರಹಳ್ಳಿ ಹೋಂಡ ಸಂಸ್ಥೆಯ … Read more

ನಿರುದ್ಯೋಗದ ವಿರುದ್ಧ ಮಿಸ್ಡ್ ಕಾಲ್ ಅಭಿಯಾನ, ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ, ಯಾವಾಗ? ಸ್ಪರ್ಧೆ ಎಲ್ಲಿ ನಡೆಯಲಿದೆ?

ಶಿವಮೊಗ್ಗ ಲೈವ್.ಕಾಂ | SHIMOGA | 22 ಫೆಬ್ರವರಿ 2020 ಯುವ ಕಾಂಗ್ರೆಸ್ ವತಿಯಿಂದ ನಿರುದ್ಯೋಗ ಕುರಿತು ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಯುವ ಕಾಂಗ್ರೆಸ್ ನಗರಾಧ್ಯಕ್ಷ ಗಿರೀಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 23ರಂದು ಕ್ರಾಂತಿಕಾರಿ ಭಗತ್ ಸಿಂಗ್ ಅವರು ಹುತಾತ್ಮರಾದ ದಿನ, ದೆಹಲಿಯಲ್ಲಿರುವ ಯುವ ಕಾಂಗ್ರೆಸ್ ಕಚೇರಿಯಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ ಎಂದರು. ಫೆಬ್ರವರಿ 29ರವರೆಗೆ ರಿಜಿಸ್ಟರ್ ಮಾಡಿಕೊಳ್ಳಲು ಅವರು ಅವಕಾಶವಿದೆ. ಫೇಸ್’ಬುಕ್, ಟ್ವಿಟರ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಮಿಸ್ಡ್ ಕಾಲ್ … Read more

ಮಾಮ್’ಕೋಸ್ ಚುನಾವಣೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಮತದಾನ ಬಿರುಸು, ಕೊನೆ ಕ್ಷಣದಲ್ಲಿ ಆರು ಸಾವಿರ ಮತದಾರರ ಹೆಚ್ಚಳ

220220 Mamcos Election in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಫೆಬ್ರವರಿ 2020 ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ (ಮ್ಯಾಮ್ಕೋಸ್) ನಿರ್ದೇಶಕರ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯುತ್ತಿದೆ. 19 ನಿರ್ದೇಶಕರ ಸ್ಥಾನಕ್ಕೆ ಸಹಕಾರ ಭಾರತಿ ಮತ್ತು ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ನಡುವೆ ಜಿದ್ದಾಜಿದ್ದಿ ಇದೆ. ಮೂರು ಜಿಲ್ಲೆಯ ಒಂಭತ್ತು ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲು ಮತದಾನ ಕೇಂದ್ರವಿದೆ. ಇನ್ನು ದಾವಣಗೆರೆಯ ಚನ್ನಗಿರಿ, ಚಿಕ್ಕಮಗಳೂರಿನ ತರೀಕೆರೆ, ಕೊಪ್ಪ, ಶೃಂಗೇರಿಯಲ್ಲಿ ಬೆಳಗ್ಗೆಯಿಂದ ಮತದಾನ ನಡೆಯುತ್ತಿದೆ. ಸಂಜೆ 4 … Read more