ಅಂಗನವಾಡಿ ಸಹಾಯಕಿ ಅನುಮಾನಾಸ್ಪದ ಸಾವು ಕೇಸ್‌, ಆರೋಪಿ ಅರೆಸ್ಟ್‌

Raghavendra-Arrest-in-an-anganavadi-worker-death-case

ಶಿಕಾರಿಪುರ: ಬಿಳಕಿ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಪ್ರೇಮಾ (52) ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ (arrested). ಬಂಧಿತ ಆರೋಪಿಯನ್ನು ಶಿಕಾರಿಪುರ ತಾಲೂಕಿನ ತೊಗರ್ಸಿ ಸಮೀಪದ ಕೋಡಿಹಳ್ಳಿ ಗ್ರಾಮದ ರಾಘವೇಂದ್ರ (26) ಎಂದು ಗುರುತಿಸಲಾಗಿದೆ. ಫೆಬ್ರವರಿ 14 ರಂದು ಬಿಳಕಿ ಗ್ರಾಮದ ಮನೆಯಲ್ಲಿ ಪ್ರೇಮಾ ಅವರ ಮೃತದೇಹ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಮೃತ ಮಹಿಳೆಯ ಪುತ್ರ, ತನ್ನ ತಾಯಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು … Read more

ಅಡ್ಡಗಟ್ಟಿ ವ್ಯಕ್ತಿಯ ಹಲ್ಲು ಮುರಿದು ನಗದು, ಚಿನ್ನದ ಸರ ದೋಚಿದ ದುಷ್ಕರ್ಮಿಗಳು, ಎಲ್ಲಿ? ಏನಿದು ಕೇಸ್?

Crime-News-General-Image

ಭದ್ರಾವತಿ: ಹಳೇ ಬುಳ್ಳಾಪುರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ ಐವರು ದುಷ್ಕರ್ಮಿಗಳು, ಹಲ್ಲೆ ನಡೆಸಿ ಸುಮಾರು ₹71 ಸಾವಿರ ಮೌಲ್ಯದ ನಗದು ಮತ್ತು ಚಿನ್ನದ ಸರ ದೋಚಿರುವ (Robbed) ಘಟನೆ ನಡೆದಿದೆ. ಕವಲಗುಂಡಿ ಗ್ರಾಮದ ನಿವಾಸಿ ಚಂದ್ರಶೇಖರ್ ಹಲ್ಲೆಗೊಳಗಾದವರು. ಹಳೇ ಬುಳ್ಳಾಪುರದ ಅಂಜನಪ್ಪ ಎಂಬುವವರನ್ನು ಭೇಟಿ ಮಾಡಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. 2ನೇ ಕ್ರಾಸ್ ರಸ್ತೆಯಲ್ಲಿ ಎರಡು ಬೈಕ್‌ಗಳಲ್ಲಿ ಬಂದ ಐವರು ವ್ಯಕ್ತಿಗಳು ಚಂದ್ರಶೇಖರ್ ಅವರನ್ನು ತಡೆದು, ‘ಆಕಾಶ್ ಕರೆಯುತ್ತಿದ್ದಾನೆ ಬಾ’ ಎಂದು ಹೇಳಿ ವಾಗ್ವಾದ … Read more

ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

tunga-nagara-police-visit-gajanuru

ಶಿವಮೊಗ್ಗ: ಗಾಜನೂರಿನಲ್ಲಿ (Gajanuru) ಗಾರೆ ಮೇಸ್ತ್ರಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ. ಮೃತನನ್ನು ಶಿವಮೊಗ್ಗದ ಹೊಸಮನೆ ನಿವಾಸಿ ಶ್ರೀನಿವಾಸ್ (36) ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ಗಾಜನೂರಿನಲ್ಲಿ ವಾಸವಿದ್ದು, ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ಗಾಜನೂರಿನ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ದುಷ್ಕರ್ಮಿಗಳು ಶ್ರೀನಿವಾಸ್ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ತುಂಗಾನಗರ ಪೊಲೀಸ್ ಠಾಣೆಯ … Read more

ಅಡಿಕೆ ಬೆಳೆಗಾರರೆ ಹುಷಾರ್‌, ಶಿವಮೊಗ್ಗದಲ್ಲಿ ಮತ್ತೆ ಶುರು ಅಡಿಕೆ ಖದೀಮರ ಹಾವಳಿ, ಕೇಸ್‌ ದಾಖಲು

Areca-in-gunny-bag-APMC-Shimoga

ಶಿವಮೊಗ್ಗ: ಮನೆ ಮುಂಭಾಗ ಚೀಲದಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಒಣ ಅಡಿಕೆಯನ್ನು (areca nut) ಕಳ್ಳರು ಹೊತ್ತೊಯ್ದಿದ್ದಾರೆ. ಕುಟುಂಬದವರೆಲ್ಲ ಮನೆಯ ಒಳಗೆ ಮಲಗಿದ್ದ ಸಮಯದಲ್ಲೆ ಕೃತ್ಯ ನಡೆದಿದೆ. ಪುರದಾಳು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಪ್ರಶಾಂತ್‌ ಎಂಬುವವರು 3 ಎಕರೆ ತೋಟದಲ್ಲಿ ಬೆಳೆದ ಅಡಿಕೆಯನ್ನು ಕಟಾವು ಮಾಡಿ, ಒಣಗಿಸಿ ಮಾರಾಟ ಮಾಡಲು ಸಿದ್ಧಪಡಿಸಿದ್ದರು. ಒಟ್ಟು 25 ಗೋಣಿ ಚೀಲಗಳಲ್ಲಿ ಒಣ ಅಡಿಕೆಯನ್ನು ತುಂಬಿ ಹನುಮಂತಾಪುರದ ತಮ್ಮ ಮನೆಯ ಮುಂಭಾಗ ಇಟ್ಟಿದ್ದರು. ಜನವರಿ 17ರ ರಾತ್ರಿ ಅಡಿಕೆ … Read more

ಆನವಟ್ಟಿ ಪೊಲೀಸರ ಕಾರ್ಯಾಚರಣೆ ಪಿಕಪ್‌ ವಾಹನ ವಶಕ್ಕೆ, ಡ್ರೈವರ್‌ ಅರೆಸ್ಟ್‌, ಕಾರಣವೇನು?

soraba anavatti graphics

ಸೊರಬ: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಆನವಟ್ಟಿ ಪಟ್ಟಣದಲ್ಲಿ ಪೊಲೀಸರು ಕಾರ್ಯಾಚರಣೆ (Police Raid) ನಡೆಸಿ ವಾಹವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ » ರಸ್ತೆಯಲ್ಲಿ ದಿಢೀರ್‌ ಎದುರಿಗೆ ಬಂದ ಮುಸುಕುಧಾರಿ, ಖಾರದ ಪುಡಿ ಎರಚಿ, ಗೃಹಿಣಿ ತಲೆಗೆ ರಾಡ್‌ನಿಂದ ಹೊಡೆತ ಮಹೀಂದ್ರಾ ಮ್ಯಾಕ್ಸ್ ಗೂಡ್ಸ್ ವಾಹನದಲ್ಲಿ ಆರು ಹಸುಗಳನ್ನು ಕುತ್ತಿಗೆ ಹಾಗೂ ಕಾಲುಗಳನ್ನು ಕಟ್ಟಿ ತುಂಬಲಾಗಿತ್ತು. ಈ ಸಂಬಂಧ ವಾಹನದ ಚಾಲಕ ಜಟ್ಟೆಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. … Read more

ಶಿವಮೊಗ್ಗ ಕೋರ್ಟ್‌ನಿಂದ ಹೊರ ಬಂದ ಆಟೋ ಡ್ರೈವರ್‌ಗೆ ಕಾದಿತ್ತು ಆಘಾತ

Shivamogga-Court-Balaraja-Urs-Road

ಶಿವಮೊಗ್ಗ: ಕೋರ್ಟ್‌ನಲ್ಲಿ ಕೆಲಸ ಮುಗಿಸಿ ಹೊರ ಬರುವಷ್ಟರಲ್ಲಿ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike) ಕಳ್ಳತನವಾಗಿದೆ ಎಂದು ಆರೋಪಿಸಿ ಆಟೋ ಡ್ರೈವರ್‌ ಮಹೊಮದ್‌ ಖಾಸಿಮ್‌ ದೂರು ನೀಡಿದ್ದಾರೆ. ಮೊಹಮದ್‌ ಖಾಸಿಮ್‌ ಅವರು ತಮ್ಮ ಮಾವನ ಸ್ಪ್ಲೆಂಡರ್‌ ಪ್ಲಸ್‌ ಬೈಕಿನಲ್ಲಿ ಕೋರ್ಟ್‌ಗೆ ಬಂದಿದ್ದರು. ಗೇಟ್‌ ಪಕ್ಕದಲ್ಲಿ ಬೈಕ್‌ ನಿಲ್ಲಿಸಿ ಕೋರ್ಟ್‌ ಒಳಗೆ ಹೋಗಿದ್ದರು. ಮಧ್ಯಾಹ್ನ ಕೆಲಸ ಮುಗಿಸಿ ಹರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more