ಅಡಿಕೆ ಧಾರಣೆ | 25 ಮಾರ್ಚ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ : ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 18529 24509 ಬೆಟ್ಟೆ 45100 56429 ರಾಶಿ 27000 52509 ಸರಕು 55019 88696 ‌ಇದನ್ನೂ ಓದಿ » ಸಿಗಂದೂರು ಸೇತುವೆ ವೈಭವ ಕಣ್ತುಂಬಿಕೊಂಡ ಕನ್ನಡದ ನಟ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಕಟ

ಸಿಗಂದೂರು ಸೇತುವೆ ವೈಭವ ಕಣ್ತುಂಬಿಕೊಂಡ ಕನ್ನಡದ ನಟ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಕಟ

Kannada-Actor-Sharan-visits-sigandur-temple-and-bridge.

ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ಶರಣ್‌, ಲಾಂಚ್‌ನಲ್ಲಿ ತೆರಳುವಾಗ ತೂಗು ಸೇತುವೆ ಮುಂಭಾಗ ವಿಡಿಯೋ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ » ಸಿಗಂದೂರು ಸೇತುವೆ, ಮತ್ತೊಂದು ಮಹತ್ವದ ಬೆಳವಣಿಗೆ, ಫೋಟೊ ಹಂಚಿಕೊಂಡ ಸಂಸದ ರಾಘವೇಂದ್ರ ಅಂಬರಗೋಡ್ಲು – ಕಳಸವಳ್ಳಿ ಮಧ್ಯೆ ತೂಗು ಸೇತುವೆ ನಿರ್ಮಾಣವಾಗುತ್ತಿದೆ. ಸೇತುವೆ (Bridge) ಉದ್ಘಾಟನೆ ನಂತರ ಇಲ್ಲಿನ ಲಾಂಚ್‌ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ … Read more

BREAKING NEWS – ಶಿವಮೊಗ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್‌ ಡಿವೈಎಸ್‌ಪಿ

Lokayukta-raid-on-DAR-DYSP-in-Shimoga

ಶಿವಮೊಗ್ಗ : ಸಿಬ್ಬಂದಿಯೊಬ್ಬರಿಂದ ಹಣ ಸ್ವೀಕರಿಸುವಾಗ ಪೊಲೀಸ್‌ ಇಲಾಖೆಯ ಡಿವೈಎಸ್‌ಪಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗದ ಸಶಸ್ತ್ರ ಮೀಸಲು ಪಡೆಯ (DAR) ಡಿವೈಎಸ್‌ಪಿ ಕೃಷ್ಣಮೂರ್ತಿ ರೆಡ್‌ ಹ್ಯಾಂಡ್‌ (Raid) ಆಗಿ ಸಿಕ್ಕಿಬಿದ್ದಿದ್ದಾರೆ. ಪೊಲೀಸ್‌ ಸಿಬ್ಬಂದಿಯೊಬ್ಬರಿಂದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಲೋಕಾಯುಕ್ತ ಎಸ್‌.ಪಿ. ಮಂಜುನಾಥ ಚೌಧರಿ ನೇತೃತ್ವದಲ್ಲಿ ದಾಳಿ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ. ಇದನ್ನೂ ಓದಿ » ಶಿವಮೊಗ್ಗದ ಬಿರಿಯಾನಿ ಹೊಟೇಲ್‌ನಲ್ಲಿ ಅನಿಲ ಸೋರಿಕೆಯಿಂದ ಅಗ್ನಿ ಅವಘಡ, ಮಹಿಳೆಗೆ ಗಾಯ

ಶಿವಮೊಗ್ಗದ ಬಿರಿಯಾನಿ ಹೊಟೇಲ್‌ನಲ್ಲಿ ಅನಿಲ ಸೋರಿಕೆಯಿಂದ ಅಗ್ನಿ ಅವಘಡ, ಮಹಿಳೆಗೆ ಗಾಯ

Gas-leakage-at-a-hotel-near-shimoga-bus-stand.webp

ಶಿವಮೊಗ್ಗ : ಅಡುಗೆ ಅನಿಲ (GAS) ಸೋರಿಕೆಯಾಗಿ ನಗರದ ಹೊಟೇಲ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆಗೆ ಸುಟ್ಟ ಗಾಯವಾಗಿದೆ. ಬಸ್ ನಿಲ್ದಾಣ ಸಮೀಪದ ಬಿರಿಯಾನಿ ಹೌಸ್ ಹಟೇಲ್‌ನ ಅಡುಗೆ ಮನೆಯಲ್ಲಿ ಅಡುಗೆ ಅನಿಲ (Gas) ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡುವ ಮಹಿಳೆಗೆ ಸುಟ್ಟ ಗಾಯವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ದೌಡಾಯಿಸಿ ಸಂಭವನೀಯ ಭಾರಿ ದುರಂತ ತಪ್ಪಿಸಿದ್ದಾರೆ. ಹೊಟೇಲ್‌ನ ಅಡುಗೆ ಕೋಣೆಯಲ್ಲಿ ಇದ್ದ ವಸ್ತುಗಳು ಸುಟ್ಟು ಹೋಗಿವೆ. … Read more

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರತಿದಿನ ಎಷ್ಟು ರೈಲು ಸಂಚರಿಸುತ್ತವೆ? ಟೈಮಿಂಗ್‌ ಏನು?

shimoga-to-bangalore-jan-shatabdi-train-railway.webp

ರೈಲ್ವೆ ವೇಳಾಪಟ್ಟಿ : ಬೆಂಗಳೂರಿನಿಂದ ಶಿವಮೊಗ್ಗದ ಮಧ್ಯೆ ಆರು ರೈಲುಗಳು (Trains) ಸಂಚರಿಸುತ್ತವೆ. ಈ ಪೈಕಿ ಎರಡು ರೈಲುಗಳು ಹೊರತು ಉಳಿದ ರೈಲುಗಳು ನಿತ್ಯ ಸಂಚರಿಸುತ್ತವೆ. ಯಾವ್ಯಾವ ರೈಲಿನ ಟೈಮಿಂಗ್‌ ಏನು? ರೈಲು 1 : ಯಶವಂತಪುರ – ಶಿವಮೊಗ್ಗ ಇಂಟರ್‌ ಸಿಟಿ (ರೈಲು ಸಂಖ್ಯೆ 16579) ಬೆಳಗ್ಗೆ 9.15ಕ್ಕೆ ಯಶವಂತಪುರದಿಂದ ರೈಲು ಹೊರಡಲಿದೆ. ಮಧ್ಯಾಹ್ನ 1.18ಕ್ಕೆ ಭದ್ರಾವತಿ ನಿಲ್ದಾಣ ತಲುಪಲಿದೆ. ಮಧ್ಯಾಹ್ನ 2.15ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣ ತಲುಪಲಿದೆ. ರೈಲು 2 : ಬೆಂಗಳೂರು – … Read more

ಅಗತ್ಯಬಿದ್ದರೆ ಭದ್ರಾವತಿ ಶಾಸಕರೊಂದಿಗೆ ದೆಹಲಿಗೆ ತೆರಳಿ ಚರ್ಚೆಗೆ ಸಿದ್ಧ, ಸಚಿವ ಮಧು ಬಂಗಾರಪ್ಪ ಪ್ರಕಟ

Minister-Madhu-Bangarappa-and-MLA-Sangameshwara-at-Bhadravathi

ಭದ್ರಾವತಿ : ಮೈಸೂರು ಪೇಪರ್‌ ಮಿಲ್ಸ್‌ (ಎಂ.ಪಿ.ಎಂ) ಕಾರ್ಖಾನೆ (Factory) ಪುನಾರಂಭಕ್ಕೆ ಶಾಸಕ ಸಂಗಮೇಶ್ವರ ಅವರು ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಅಗತ್ಯ ಬಿದ್ದರೆ ಶಾಸಕರೊಂದಿಗೆ ದೆಹಲಿಗೆ ತೆರಳಿ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಭದ್ರಾವತಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಂಘಟನಾ ಸಭೆ ಉದ್ಘಾಟಿಸಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ರಾಜ್ಯದಲ್ಲಿ ಹಣಕಾಸು ಕೊರತೆ ಇಲ್ಲ. ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದೆ. ಹಣದ ಕೊರತೆ ಉಂಟಾಗಿದ್ದರೆ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಬಿಸಿಯೂಟ, … Read more

ಭದ್ರಾವತಿಯಲ್ಲಿ ಮನೆ ಮೇಲೆ ಪೊಲೀಸ್‌ ದಾಳಿ, ಓರ್ವ ವಶಕ್ಕೆ, ಏನೇನೆಲ್ಲ ಸಿಕ್ತು?

200123 Police Jeep With Light jpg

ಭದ್ರಾವತಿ : ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ದಾಳಿ (Raid) ನಡೆಸಿದ ಪೊಲೀಸರು ನೂರು ಕೆ.ಜಿ ಗೋಮಾಂಸ ಮತ್ತು ಗೋವುಗಳನ್ನು ರಕ್ಷಿಸಲಾಗಿದೆ. ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿಯ ಅನ್ವರ್‌ ಕಾಲೋನಿಯ ಮನೆಯೊಂದರಲ್ಲಿ ಗೋವಧೆ ಮಾಡಿ ಗೋಮಾಂಸ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ (Raid) ನಡೆಸಿದ್ದಾರೆ. ದಾಳಿ ವೇಳೆ 104 ಕೆ.ಜಿ ಗೋಮಾಂಸ, ಕಬ್ಬಿಣದ ಮಚ್ಚು, ಚೂರಿ, ಎಲೆಕ್ಟ್ರಾನಿಕ್‌ ತೂಕದ ಯಂತ್ರ, 15 ಕಬ್ಬಿಣದ ಹುಕ್ಕುಗಳು, 810 ರೂ. ನಗದು ಪತ್ತೆಯಾಗಿದೆ … Read more

ಸಾಗರದ ಪ್ರತಿಷ್ಠಿತ ಎಂ.ಡಿ.ಎಫ್‌ಗೆ ನೂತನ ಅಧ್ಯಕ್ಷರ ಆಯ್ಕೆ

B-R-Jayanth-is-the-new-president-of-MDF

ಸಾಗರ : ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ (ಎಂ.ಡಿ.ಎಫ್‌) ನೂತನ ಅಧ್ಯಕ್ಷರಾಗಿ (President) ಬಿ.ಆರ್.ಜಯಂತ್‌ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಎಂ.ಡಿ.ಎಫ್‌ನ 59ನೇ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಎಲ್‌.ಬಿ ಮತ್ತು ಎಸ್‌.ಬಿ.ಎಸ್‌ ಕಾಲೇಜು ಆವರಣದ ಕಂಚಿಕೈ ದೇವಪ್ಪ ಸಭಾಂಗಣದಲ್ಲಿ ಮಹಾಸಭೆ ನಡೆಯಿತು. ಎಂ.ಹರನಾಥರಾವ್‌ ಮತ್ತಿಕೊಪ್ಪ ಅವರು ಈವರೆಗೂ ಎಂ.ಡಿ.ಎಫ್‌ನ ಅಧ್ಯಕ್ಷರಾಗಿದ್ದರು. ಇದನ್ನೂ ಓದಿ » ‘ಸರಿಯಾಗಿ ಕರೆಂಟ್‌ ಕೊಡ್ತಿಲ್ಲʼ, ಮೆಸ್ಕಾಂ ಕಚೇರಿ ಮುಂದೆ ಕುಳಿತು ಬಳಕೆದಾರರ ಆಕ್ರೋಶ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮೈಸುಡಲಿದೆ ಬಿಸಿಲು, ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಅಬ್ಬರ ಜೋರಿದೆ. ಇವತ್ತು ಕೂಡ ಉಷ್ಣಾಂಶ ಹೆಚ್ಚಿರಲಿದೆ (Weather Report). ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 36 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ … Read more

ಅರ್ಚಕರಿಗೆ ಲಂಡನ್‌ ಮಮತಾಳಿಂದ ಬಂತು ಫ್ರೆಂಡ್‌ ರಿಕ್ವೆಸ್ಟ್‌, ಅಕ್ಸೆಪ್ಟ್‌ ಮಾಡಿದ್ಮೇಲೆ ಕಾದಿತ್ತು ಬಿಗ್‌ ಶಾಕ್‌

SMS-Fraud-Shimoga-CEN-Police-Station.

ಶಿವಮೊಗ್ಗ : ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಕಳುಹಿಸಿದ್ದ ಫ್ರೆಂಡ್‌ ರಿಕ್ವೆಸ್ಟ್‌ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (Priest) ಸಂಕಷ್ಟ ತಂದೊಡ್ಡಿದೆ. ಲಕ್ಷ‌ ಲಕ್ಷ ರೂ. ಹಣ ಕಳೆದುಕೊಂಡಿರುವ ಅರ್ಚಕ, ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಮತಾ ಕಳಹಿಸಿದ ರಿಕ್ವೆಸ್ಟ್‌ ಮಮತಾ ಜಾಯ್‌ ಎಂಬ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (ಹೆಸರು, ಊರು ಗೌಪ್ಯ) ಫೇಸ್‌ಬುಕ್‌ನಲ್ಲಿ ರಿಕ್ವೆಸ್ಟ್‌ ಬಂದಿತ್ತು. ಕೆಲ ಸಮಯದ ನಂತರ ಆಕೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ರಿಪ್ಲೆ ಮಾಡಿದ ಮಮತಾ ಜಾಯ್‌, ತನ್ನ ವಾಟ್ಸಪ್‌ ನಂಬರ್‌ ಹಂಚಿಕೊಂಡು ಚಾಟಿಂಗ್‌ ಮಾಡಿದ್ದಳು. … Read more