ಚಲಿಸುತ್ತಿದ್ದ ಆಟೋದಲ್ಲಿ ಚಾಲಕನ ಕುತ್ತಿಗೆ ಹಿಸುಕಲು ಯತ್ನಿಸಿದ ಪ್ರಯಾಣಿಕ

crime name image

SHIVAMOGGA LIVE NEWS, 3 JANUARY 2024 ಸಾಗರ : ಚಲಿಸುತ್ತಿದ್ದ ಆಟೋದಲ್ಲಿ (Auto) ಪ್ರಯಾಣಿಕನೊಬ್ಬ ಚಾಲಕನ ಕುತ್ತಿಗೆಗೆ ಕೈ ಹಾಕಿ ಬಿಗಿಯಾಗಿ ಒತ್ತಲು ಪ್ರಯತ್ನಸಿದ್ದಾನೆ. ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಮೊಬೈಲ್‌ ಫೋನ್‌ನಿಂದ ಕುತ್ತಿಗೆಗೆ ಹೊಡೆದು ಪರಾರಿಯಾಗಿದ್ದಾನೆ. ಅದೃಷ್ಟವಶಾತ್‌ ಚಾಲಕ ಪಾರಾಗಿದ್ದಾನೆ. ಸಾಗರ ತಾಲೂಕು ಮಾಸೂರು ಬಳಿ ಘಟನೆ ಸಂಭವಿಸಿದೆ. ಆಟೋ ಚಾಲಕ ಗಣೇಶ್‌ ಕುತ್ತಿಗೆ ನೋವಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಾಗರ to ಸೊರಬ, ರಾತ್ರಿ ಆಟೋ ಪ್ರಯಾಣ ಸಾಗರ ಬಸ್‌ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ … Read more

ಸರ್ಕಾರಿ ಗೌರವದೊಂದಿಗೆ ಹೆಡ್‌ ಕಾನ್ಸ್‌ಟೇಬಲ್‌ ಅಂತ್ಯ ಸಂಸ್ಕಾರ

Head-Constable-Parashuram-last-rites-at-Soraba

SHIVAMOGGA LIVE NEWS, 14 DECEMBER 2024 ಸೊರಬ : ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಪರಶುರಾಮ್‌ ಅವರ ಅಂತ್ಯಕ್ರಿಯೆಯನ್ನು (Last Rites) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅವರ ಹುಟ್ಟೂರು ಸೊರಬ ತಾಲೂಕು ಸಂಪಗೋಡು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಶಿವಮೊಗ್ಗಕ್ಕೆ ಬಂದಾಗ ಹೃದಯಾಘಾತ ಪರಶುರಾಮ್‌ ಅವರು ತೀರ್ಥಹಳ್ಳಿಯ ಹೈವೇ ಪ್ಯಾಟ್ರೋಲ್‌ ವಾಹನದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿದ್ದಾಗ ಹೃದಯಾಘಾತ ಸಂಭವಿಸಿತ್ತು. ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ … Read more

ಬೆಂಗಳೂರಿನಲ್ಲಿ ಸೊರಬ ನಿವಾಸಿಗಳ ಸಮ್ಮಿಲನ, ಹೇಗಿತ್ತು ಕಾರ್ಯಕ್ರಮ?

Minister-Madhu-bangarappa-sammilana-at-palace-ground.

  SHIVAMOGGA LIVE NEWS, 9 DECEMBER 2024 ಬೆಂಗಳೂರು : ಇಲ್ಲಿನ ಅರಮನೆ ಮೈದಾನದಲ್ಲಿ ಸೊರಬ ವಿಧಾನಸಭೆ ಕ್ಷೇತ್ರದ ಬೆಂಗಳೂರು ನಿವಾಸಿಗಳ (Residents) ಸಮ್ಮಿಲನ 2024 ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯ ಜನರು ಭಾಗವಹಿಸಿದ್ದರು. ಮಿನಿಸ್ಟರ್‌ ಹೇಳಿದ್ದೇನು? ಸೊರಬ ತಾಲೂಕಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರ 250 ಕೋಟಿ ರೂ. ಬಿಡುಗಡೆ ಮಾಡಿದೆ. ಸದ್ಯದಲ್ಲೇ ಈ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ. ಶಿಕ್ಷಣ ಇಲಾಖೆಯನ್ನು … Read more

ಹೋರಿ ಬೆದರಿಸುವ ಸ್ಪರ್ಧೆ, ಚರಂಡಿಗೆ ಬಿದ್ದು ಯುವಕ ಸಾವು

soraba-News-Update

SHIMOGA NEWS, 27 NOVEMBER 2024 ಸೊರಬ : ಹೋರಿ ಬೆದರಿಸುವ ಸ್ಪರ್ಧೆ ವೇಳೆ ಚರಂಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ (Youth) ಸಾವನ್ನಪ್ಪಿದ್ದಾನೆ. ಆಯನೂರಿನ ಸುಹೇಲ್‌ (19) ಮೃತ ಯುವಕ. ಸೊರಬ ತಾಲೂಕು ಯಲವಳ್ಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಣೆಗೆ ಸುಹೇಲ್‌ ತೆರಳಿದ್ದ. ವೇಗವಾಗಿ ಬಂದ ಹೋರಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಚರಂಡಿಗೆ ಬಿದ್ದಿದ್ದ ಎನ್ನಲಾಗಿದೆ. ಇದರಿಂದ ಸುಹೇಲ್‌ಗೆ ತೀವ್ರ ಪೆಟ್ಟಾಗಿತ್ತು. ಕೂಡಲೆ ಆತನನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸುಹೇಲ್‌ … Read more

ಸೊರಬ ಪೊಲೀಸರಿಂದ ಶಿವಮೊಗ್ಗದ ಇಬ್ಬರು ಅರೆಸ್ಟ್‌, ಕಾರಣವೇನು?

Arrest News Graphics

SORABA NEWS, 17 NOVEMBER 2024 : ಪಟ್ಟಣದ ಚಿಕ್ಕಪೇಟೆಯಲ್ಲಿ ಈಚೆಗೆ ನಡೆದ ಜಾನುವಾರು ಕಳವು ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ (Arrest). ಶಿವಮೊಗ್ಗದ ಮೊಹಮ್ಮದ್ ಶಾಹೀದ್ ಮತ್ತು ಮೊಹಮ್ಮದ್ ಸಲ್ಮಾನ್ ಬಂಧಿತರು.  ಇವರ ವಿರುದ್ಧ ಸಾಗರ ಪೊಲೀಸ್ ಠಾಣೆಯಲ್ಲಿಯೂ ಜಾನುವಾರು ಕಳವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಪೇಟೆಯಲ್ಲಿ ಜಾನುವಾರನ್ನು ಕಳ್ಳರು ಹೊತ್ತೊಯ್ಯುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಜಾನುವಾರು ಮಾಲೀಕ ಸತೀಶ್ ದೂರು ದಾಖಲಿಸಿದ್ದರು. ಸೊರಬ ಠಾಣೆಯಲ್ಲಿ ಪ್ರಕರಣ … Read more

ಮನೆ ಹೆಂಚು ತೆಗೆದು ಇಳಿದ ಕಳ್ಳ ಜೈಲುಪಾಲು

soraba-News-Update

SORABA NEWS, 17 NOVEMBER 2024 : ಮನೆಯ (House) ಹೆಂಚು ತೆಗೆದು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 50 ಸಾವಿರ ರೂ. ಮೌಲ್ಯದ ಆಭರಣ ಮತ್ತು 50 ಸಾವಿರ ರೂ. ನಗದು ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಅಂಬೇಡ್ಕರ್ ಬಡಾವಣೆಯ ನಿವಾಸಿ ಗೋಪಿ ದೇವೇಂದ್ರಪ್ಪ ಬಂಧಿತ. ಒಂದು ತಿಂಗಳ ಹಿಂದೆ ಕಾನುಕೇರಿ ಬಡಾವಣೆಯ ನಾಗರಾಜ್ ಅವರ ಮನೆಯಲ್ಲಿ ಯಾರೂ ಇಲ್ಲದಾಗ ಮನೆಯ ಹೆಂಚು ತೆಗೆದು ಕಳ್ಳತನ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು … Read more

ಅರಣ್ಯ ಜಾಗದಲ್ಲಿ ಅನಾನಸ್‌ ಬೆಳೆ, ಪರಿಶೀಲನೆಗೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ

soraba-News-Update

SORABA NEWS, 15 NOVEMBER 2024 : ಅರಣ್ಯ ಭೂಮಿ (Forest) ಒತ್ತುವರಿ ಆರೋಪದ ಹಿನ್ನೆಲೆ ಪರಿಶೀಲನೆಗೆ ತೆರಳಿದ ಇಲಾಖೆ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಾಗರ ಡಿಸಿಎಫ್ ಮೋಹನ್‌ಕುಮಾರ್ ಹೇಳಿದರು. ಅರಣ್ಯ ಜಾಗದಲ್ಲಿ ಅನಾನಸ್‌ ಬೆಳೆ ಸೊರಬ ತಾಲೂಕಿನ ಗಡಿಭಾಗ ಚಿಕ್ಕಲಗೋಡು ಗ್ರಾಮದಲ್ಲಿ ಶಿರಸಿ ಭಾಗದಿಂದ ಆನೆಗಳ ಹಿಂಡು ಬಂದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಉಮೇಶ್ ಹಾಗೂ ಇಮ್ರಾನ್ ಸ್ಥಳ … Read more

ಕಾರು, ಬೈಕ್‌ ಡಿಕ್ಕಿ, ಯುವಕ ದುರ್ಮರಣ, ಮಹಿಳೆ ಸ್ಥಿತಿ ಗಂಭೀರ

ACCIDENT-NEWS-GENERAL-IMAGE.

SORABA NEWS, 4 NOVEMBER 2024 : ಬೈಕ್‌ ಮತ್ತು ಕಾರಿನ (Car) ಮಧ್ಯೆ ಅಪಘಾತವಾಗಿ ಸವಾರ ಸಾವನ್ನಪ್ಪಿದ್ದು, ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸೊರಬ ತಾಲೂಕು ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆಯ ವರದಾನದಿ ಸೇತುವೆ ಮೇಲೆ ಘಟನೆ ಸಂಭವಿಸಿದೆ. ಹೊಸನಗರ ತಾಲೂಕು ಕಾರಕ್ಕಿಯ ಸುದರ್ಶನ್‌ (22) ಮೃತಪಟ್ಟಿದ್ದಾನೆ. ಬೈಕ್‌ನಲ್ಲಿದ್ದ ಬೆಳ್ಳಮ್ಮ ಪುಟ್ಟಪ್ಪ ಚಿಟ್ಟಕ್ಕಿ (65) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಸೊರಬದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಕ್‌ ಹೊಸನಗರದಿಂದ ಸೊರಬ ಮಾರ್ಗವಾಗಿ … Read more

ಶುರುವಾಯ್ತು ಹೋರಿ ಹಬ್ಬದ ಕ್ರೇಜ್‌, ಈ ಬಾರಿ ಹೇಗಿದೆ ಉತ್ಸಾಹ?

Hori-Habba

SHIKARIPURA NEWS, 4 NOVEMBER 2024 : ಬೆಳಕಿನ ಹಬ್ಬ ದೀಪಾವಳಿ ಆಚರಣೆ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹೋರಿ ಹಬ್ಬದ ಅಬ್ಬರ ಆರಂಭವಾಗಿದೆ. ಕೆಲವೆಡೆ ದೀಪಾವಳಿಯಂದೇ ಹೋರಿ ಹಬ್ಬ (Hori Habba) ನಡೆಸಲಾಗಿದೆ. ಇನ್ನು ವಿವಿಧೆಡೆ ದೊಡ್ಡ ಮಟ್ಟದ ಸ್ಪರ್ಧೆಗಳಿಗೆ ಸಿದ್ಧತೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ ಜಿಲ್ಲೆಯ ಹಲವು ಕಡೆ ಹೋರಿ ಹಬ್ಬ ಆಯೋಜಿಸಲಾಗುತ್ತದೆ. ಅಖಾಡಕ್ಕಿಳಿಯುವ ಪೈಲ್ವಾನರು ಹೋರಿಗಳನ್ನು ತಡೆದು ನಿಲ್ಲಿಸಬೇಕು. ಅವುಗಳಿಗೆ ಕಟ್ಟಿರುವ ಕೊಬ್ಬರಿ ಹರಿದುಕೊಳ್ಳಬೇಕು. ಇದು … Read more

ಬಂಗಾರಪ್ಪ ಜನ್ಮದಿನ, ಮೂವರಿಗೆ ಬಂಗಾರ ಪ್ರಶಸ್ತಿ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

Bangarappa-Award during Birthday-programme-venugopala-naki-and-gd-manjunath

SHIMOGA NEWS, 23 OCTOBER 2024 : ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಜನ್ಮದಿನದ ಸಂದರ್ಭ ನೀಡುವ ಬಂಗಾರ ಪ್ರಶಸ್ತಿಗೆ (Award) ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಅ.26ರಂದು ಸೊರಬದ ಬಂಗಾರಧಾಮದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್‌ ನಾಯಕ್‌, ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್‌.ಜಿ.ಸುಶೀಲಮ್ಮ, ಸಾಹಿತಿ ಕುಂ.ವೀರಭದ್ರಪ್ಪ, ಗ್ರಾಮೀಣ ರಂಗಭೂಮಿ ಕಲಾವಿದೆ ಪ್ರತಿಭಾ ನಾರಾಯಣ್‌ ಅವರಿಗೆ ಈ ಬಾರಿ ಬಂಗಾರ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ಒಂದು … Read more