ವಿಷ ಕುಡಿದು ಮಹಿಳೆ ಸಾವು, ವಿಜ್ಞಾನಿ, ಎಂಜಿನಿಯರ್, ಟೀಚರ್ ವಿರುದ್ಧ ಕೇಸ್, ವಿಷ ಸೇವಿಸಲು ಕಾರಣವೇನು?

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 14 ಜೂನ್ 2020 ಜಮೀನು ವಿಚಾರವಾಗಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ವಿಜ್ಞಾನಿ, ಎಂಜಿನಿಯರ್ ಮತ್ತು ಟೀಚರ್ ವಿರುದ್ಧ ಕೇಸ್ ದಾಖಲಾಗಿದೆ. ಶಿಕಾರಿಪುರ ತಾಲೂಕು ಕಾಗಿನೆಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಗಿನೆಲ್ಲಿ ಗ್ರಾಮದ ಸುಶೀಲಮ್ಮ(43) ವಿಷ ಸೇವಿಸಿ ಮೃತರಾಗಿದ್ದಾರೆ. ಸುಶೀಲಮ್ಮ ಅವರು ಶನಿವಾರ ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ … Read more

ಶಿವಮೊಗ್ಗದ ಟ್ರಾಫಿಕ್ ಪೊಲೀಸ್ ಠಾಣೆಯೊಳಗೆ ನುಗ್ಗಿ ಹೆಡೆ ಎತ್ತಿ ನಿಂತ ನಾಗರಹಾವು

120520 Snake Eneters Traffic Police Station 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಮೇ 2020 ಶಿವಮೊಗ್ಗದ ಟ್ರಾಫಿಕ್ ಪೊಲೀಸ್ ಠಾಣೆಗೆ ನಾಗರಹಾವು ನುಗಿತ್ತು. ಇದರಿಂದ ಠಾಣೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಉರಗ ಪ್ರೇಮಿ ಕಾಚಿನಕಟ್ಟೆಯ ಆಕಾಶ್ ನಾಗರ ಹಾವನ್ನು ಹಿಡಿದು, ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ವಿದ್ಯಾನಗರದಲ್ಲಿರುವ ಪೂರ್ವ ಸಂಚಾರಿ ಪೊಲೀಸ್ ಠಾಣೆಗೆ ನುಗ್ಗಿದ್ದ ಹಾವು, ಕೆಲಕಾಲ ಬಾಗಿಲು ಬಳಿ ಅವಿತು ಕುಳಿತಿತ್ತು. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಆಕಾಶ್‍ಗೆ ಮಾಹಿತಿ ನೀಡಿದ್ದರು. ಕೆಲ ತಿಂಗಳ ಹಿಂದೆಯು ಈ ಠಾಣೆಯೊಳಗೆ ನಾಗರ … Read more

ಲಾಕ್‌ಡೌನ್‌ ಟೈಮಲ್ಲಿ ಮದ್ಯದ ಅಂಗಡಿಗೆ ಕನ್ನ, ಇಬ್ಬರು ಅರೆಸ್ಟ್, ಯಾವ ಬಾರ್? ಎಷ್ಟು ಮೌಲ್ಯದ ಮದ್ಯ ಕದ್ದಿದ್ದರು?

210420 Two Arrested For Bar Theft 1

ಶಿವಮೊಗ್ಗ ಲೈವ್.ಕಾಂ | SHIMOGA | 21 ಏಪ್ರಿಲ್ 2020 ಲಾಕ್‍ಡೌನ್ ಅವಧಿಯಲ್ಲಿ ಮದ್ಯದಂಗಡಿಗೆ ಕನ್ನ ಹಾಕಿ ಮದ್ಯವನ್ನು ಕಳ್ಳತನ ಮಾಡಿದ್ದ ಇಬ್ಬರು ಅರೆಸ್ಟ್ ಆಗಿದ್ದಾರೆ. ಬಂಧಿತರನ್ನು ಹಸೂಡಿ ಹಕ್ಕಿಪಿಕ್ಕಿ ಕ್ಯಾಂಪ್‍ನ ರಮೇಶ್ (22), ಅಕ್ಬರ್ ಅಲಿಯಾಸ್ ರವಿ (22) ಎಂದು ಗುರುತಿಸಲಾಗಿದೆ. ಮಾರ್ಚ್ 23 ರಿಂದ ಏಪ್ರಿಲ್  16ರ ನಡುವೆ ಹೊಳೆಬೆನವಳ್ಳಿಯ ಮದ್ಯದಂಗಡಿಗೆ ಕನ್ನ ಕೊರೆದು ಮದ್ಯ ಕಳ್ಳತನ ಮಾಡಿದ್ದರು. ಬಂಧನದ ವೇಳೆ ಇವರಿಂದ 10,430 ರೂ. ಮೌಲ್ಯದ ಮದ್ಯದ ಬಾಟಲಿ ಮತ್ತು ಪೌಚುಗಳು, 26 … Read more

ಮ್ಯಾಕ್ಸ್ ಆಸ್ಪತ್ರೆ ಮುಂದೆ 500 ರೂ. ಹಣದ ಕಂತೆ ಬೀಳಿಸಿಕೊಂಡಿದ್ದ ವ್ಯಕ್ತಿ ಪತ್ತೆ, ಯಾರದು? ಪೊಲೀಸರು ಖಚಿತಪಡಿಸಿಕೊಂಡಿದ್ದು ಹೇಗೆ?

200220 Money Returned by Jayanagara Police 1

ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020 ಮ್ಯಾಕ್ಸ್ ಆಸ್ಪತ್ರೆ ಬಳಿ ದೊರೆತೆ ಹತ್ತು ಸಾವಿರ ರೂಪಾಯಿ ಹಣವನ್ನು ವಾರಸುದಾರರಿಗೆ ಒಪ್ಪಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡಿದ್ದರು. ಹಣ ಯಾರಿಗೆ ಸೇರಿದ್ದು? ಹತ್ತು ಸಾವಿರ ರುಪಾಯಿ ಹಣವು ತೀರ್ಥಹಳ್ಳಿ ತಾಲೂಕು ಬಾಳೆಹಿತ್ಲು ಗ್ರಾಮದ ಉದಯ್ ಕುಮಾರ್ ಎಂಬುವವರಿಗೆ ಸೇರಿದೆ. ಇದನ್ನು ಖಚಿತಪಡಿಸಿಕೊಂಡ ಪೊಲೀಸರು, ಉದಯ್ ಕುಮಾರ್ ಅವರಿಗೆ ಇವತ್ತು ಹಣ ಹಿಂತಿರುಗಿಸಿದ್ದಾರೆ. ಹಣ ಕಳೆದುಕೊಂಡಿದ್ದು ಹೇಗೆ? … Read more

ಕಾಡು ಹಂದಿ ಬೇಟೆಯಾಡಿದ್ದ ಇಬ್ಬರು ಅರೆಸ್ಟ್, ಮತ್ತೊಬ್ಬ ಎಸ್ಕೇಪ್, ತೀರ್ಥಹಳ್ಳಿಯಲ್ಲಿ ಘಟನೆ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 05 ಜುಲೈ 2019 ಕಾಡು ಹಂದಿ ಬೇಟೆ ಮಾಡಿದ ಇಬ್ಬರನ್ನು ವನ್ಯಜೀವಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಮರಹಳ್ಳಿ – ಹೊರಬೈಲು ಅರಣ್ಯ ವ್ಯಾಪ್ತಿಯಲ್ಲಿ ಕಾಡು ಹಂದಿ ಬೇಟೆಯಾಡಿದ್ದರು. ಹೊರಬೈಲು ತಿಮ್ಮಪ್ಪ, ಸುರೇಂದ್ರ ಬಂಧಿತರು. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 21ರಂದು ಹೊರಬೈಲು ಅರಣ್ಯ ವ್ಯಾಪ್ತಿಯಲ್ಲಿ ಹಂದಿ ಬೇಟೆಯಾಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಇಬ್ಬರನ್ನು ಬಂಧಿಸಿ, ಜೆಎಂಎಫ್’ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹೆಚ್ಚಿನ ತನಿಖೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ … Read more

ರಿಪ್ಪನ್’ಪೇಟೆಯ ಉದ್ಯಮಿ ಮನೆ ಹಿಂಬಾಗಿಲು ಒಡೆದು ಕಳ್ಳತನ ಮಾಡಿದ್ದವರು ಅರೆಸ್ಟ್

theft case general image

ಶಿವಮೊಗ್ಗ ಲೈವ್.ಕಾಂ | 2 ಮೇ 2019 ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಕಳ್ಳತ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಿಪ್ಪನ್’ಪೇಟೆಯ ಉದ್ಯಮಿಯೊಬ್ಬರ ಮನೆಯಲ್ಲಿ ಇವರು ಕಳ್ಳತನ ಮಾಡಿದ್ದರು. ಶಿವಮೊಗ್ಗದ ಸೀಗೆಹಟ್ಟಿಯ ಗಣೇಶ್ ಮತ್ತು ಹೊಳೆ ಬಸ್ ನಿಲ್ದಾಣ ಬಳಿಯ ಮಂಜುನಾಥ್ ಬಂಧಿತರು. ರಿಪ್ಪನ್’ಪೇಟೆಯ ಉದ್ಯಮಿ ಮಹಮದ್ ಫಾಜಿಲ್ ಅವರ ಮನೆಯ ಹಿಂಬಾಗಿಲನ್ನು ಒಡೆದು, ಕಳ್ಳತನ ಮಾಡಿದ್ದರು. ಉದ್ಯಮಿ ಫಾಜಿಲ್ ಅವರು ಕಾರ್ಯ ನಿಮಿತ್ತ ಕಾರವಾರಕ್ಕೆ ತೆರಳಿದ್ದರು. ಈ ವೇಳೆ ಘಟನೆ ನಡೆದಿತ್ತು. ಶಿವಮೊಗ್ಗ … Read more