SHIVAMOGGA LIVE NEWS | 16 APRIL 2024
BHADRAVATHI : ತುಂಗಾ-ಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಭದ್ರಾವತಿ ತಹಶೀಲ್ದಾರ್ ಕೆ.ಆರ್.ನಾಗರಾಜು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಎಲ್ಲೆಲ್ಲಿ ನಿಷೇಧ? ಕಾರಣವೇನು?
ತಾಲೂಕಿನ ಡಣಾಯಕಪುರ, ಸಿದ್ಲೀಪುರ, ಸನ್ಯಾಸಿಕೊಡಮಗ್ಗಿ, ಮಂಗೋಟೆ, ಆನವೇರಿ, ವಡೇರಪುರ (ನಿಂಬೆಗೊಂದಿ) ಗ್ರಾಮಗಳಲ್ಲಿ ತುಂಗಾ – ಭದ್ರಾ ನದಿ ಪಾತ್ರಕ್ಕೆ ಅಕ್ರಮ ಪ್ರವೇಶವನ್ನು ನಿಷೇಧಿಸಲಾಗಿದೆ.
ಈ ಹಿಂದೆ ಇಲ್ಲಿನ ನಿಕ್ಷೇಪಗಳಲ್ಲಿ ಗಣಿಗಾರಿಕೆ ನಡೆಸಲು ಹರಾಜು ಮೂಲಕ 5 ವರ್ಷ ಅವಧಿಗೆ ವಿಲೇವಾರಿ ಮಾಡಲಾಗಿತ್ತು. ಅವಧಿ ಮುಗಿದರು ಅಕ್ರಮವಾಗಿ ಮರಳು ಗಣಿಗಾರಿಕೆ ಮುಂದುವರಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವರದಿ ಸಲ್ಲಿಸಿದ್ದರು. ಅಲ್ಲದೆ ಇಲ್ಲಿನ ನಿಕ್ಷೇಪಗಳನ್ನು ಹರಾಜು ಮೂಲಕ ವಿಲೇಪಡಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆ ತಹಶೀಲ್ದಾರ್ ಅವರು ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ – ನೆಹರೂ ರಸ್ತೆಯಲ್ಲಿ ಆಟೋ ಚಾಲಕನ ತಲೆಗೆ ದೊಣ್ಣೆಯಿಂದ ಹೊಡೆದ ಮತ್ತೊಬ್ಬ ಆಟೋ ಚಾಲಕ