ಭದ್ರಾವತಿಯಲ್ಲಿ ಮಳೆಗೆ ಕುಸಿದ ಸೇತುವೆ, ರೈತರಿಗೆ ಸಂಕಷ್ಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

HOLEHONNURU NEWS, 15 OCTOBER 2024 : ಕಳೆದ ಕೆಲವು ದಿನ ಸುರಿದ ಮಳೆಗೆ ಭದ್ರಾವತಿ ತಾಲೂಕು ಹಂಚಿನಸಿದ್ದಾಪುರ ಗ್ರಾಮದಲ್ಲಿ ಭದ್ರಾ ನಾಲೆಗೆ ಅಡ್ಡಲಾಗಿ ನಿರ್ಮಿಸಿದ್ದ ಕಿರು ಸೇತುವೆ (Bridge) ಕುಸಿದು ಬಿದಿದೆ. ಇದರಿಂದ ರೈತರ ಜಮೀನುಗಳಿಗೆ ಸಂಪರ್ಕ ಕಡಿತವಾಗಿದೆ.

ಹಂಚಿನಸಿದ್ದಾಪುರ ಗ್ರಾಮದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಶಿಥಿಲಗೊಂಡಿತ್ತು. ಭಾರಿ ಮಳೆಗೆ ಶನಿವಾರ ಸೇತುವೆ ಕುಸಿದು ಬಿದ್ದಿದೆ.

bridge-at-Hanchina-siddapura-near-Holehonnuru.

ಇದನ್ನೂ ಓದಿ » ಸಿಗಂದೂರು ಸೇತುವೆ, ಸಂಸದ ರಾಘವೇಂದ್ರ ಪ್ರಕಟಿಸಿದ ಫೋಟೊ ವೈರಲ್

ಇದು ಸುಮಾರು 50ವರ್ಷಕ್ಕೂ ಹೆಚ್ಚು ಹಳೆಯ ಸೇತುವೆ. ಶಿಥಿಲವಾಗಿದ್ದ ಹಿನ್ನೆಲೆ ಪರ್ಯಾಯ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ಈ ಕಿರು ಸೇತುವೆ ಕುಸಿದಿರುವುದರಿಂದ ಅನೇಕ ರೈತರ ಜಮೀನುಗಳಿಗೆ ಸಂಪರ್ಕ ಕಡಿತವಾಗಿದೆ. ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕು ತೆರಳದಂತಾಗಿದೆ.

PACE-COLLEGE-ADVT

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment