ಭದ್ರಾ ನಾಲೆಗೆ ಉರುಳಿದ ಕಾರು, ಚಾಲಕ ಸಾವು, ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಹೊಳೆಹೊನ್ನೂರು: ಭದ್ರಾ ಬಲದಂಡೆ ನಾಲೆಗೆ (Bhadra Canal) ಕಾರು ಉರುಳಿ ಬಿದ್ದು, ಚಾಲಕ ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ದಾನವಾಡಿ ಗ್ರಾಮದಲ್ಲಿ ಹಾದು ಹೋಗಿರುವ ನಾಲೆಯಲ್ಲಿ ಘಟನೆ ಸಂಭವಿಸಿದೆ.
➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಸಿಗಂದೂರು ಸೇತುವೆ ಮೇಲೆ ಕಾರಿನಲ್ಲಿ ಸಂಸದ ರಾಘವೇಂದ್ರ ಸಂಚಾರ, ಪರಿಶೀಲನೆ ಬಳಿಕ ಹೇಳಿದ್ದೇನು?

ಹೊಸದುರ್ಗ ತಾಲೂಕು ಕಾಸಪ್ಪನಹಳ್ಳಿ ಗ್ರಾಮದ ಭೋಜರಾಜ್ (32) ಮೃತಪಟ್ಟವರು. ಗುರುವಾರ ಬೆಳಗ್ಗೆಯಿಂದ ಕಾರು ದಾನವಾಡಿ ಗ್ರಾಮದಲ್ಲಿ ಓಡಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಧ್ಯಾಹ್ನದ ನಂತರ ಗ್ರಾಮದ ದೊಡ್ಡ ನಾಲೆ ಏರಿ ಮೇಲೆ ಹೋಗಿದೆ. ಸಂಜೆ ಏರಿಯಿಂದ ನಾಲೆಗೆ ಕಾರು ಉರುಳಿದ್ದನ್ನು ಸ್ಥಳೀಯ ಯುವಕರು ನೋಡಿದ್ದಾರೆ.

Car drowned at bhadra canal
ಶೋಧ ಕಾರ್ಯದಲ್ಲಿ ಈಶ್ವರ್‌ ಮಲ್ಪೆ.

ಕಾರು ಮೇಲೆತ್ತಲು ಈಶ್ವರ್‌ ಮಲ್ಪೆ ತಂಡ

ಕ್ಷಣಾರ್ಧದಲ್ಲಿ ಕಾರು ಮುಳುಗಿದ್ದು, ತಕ್ಷಣ ಗ್ರಾಮಸ್ಥರು, ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದು, ಕಾರು ಪತ್ತೆಯಾದರೂ ಮೇಲೆತ್ತಲು ಸಾಧ್ಯವಾಗಲಿಲ್ಲ. ಶುಕ್ರವಾರ ಈಜು ತಜ್ಞ ಮಲ್ಪೆ ಈಶ್ವರ ಅವರನ್ನು ಕರೆಸಿ ಕಾರು ಮೇಲೆತ್ತಲಾಯಿತು. ಕಾರಿನಲ್ಲಿ ಭೋಜರಾಜ್ ಶವ ದೊರೆತಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

SLV-BOOK-SHOP-SHIMOGA

ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾನವಾಡಿ ಗ್ರಾಮಸ್ಥರು ಮಲ್ಪೆ ಈಶ್ವರ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದರು.

Car drowned at bhadra canal

ಇದನ್ನೂ ಓದಿ » ವಿಶ್ವದಲ್ಲೆ ಮೊದಲ ಬಾರಿ, ಶಿವಮೊಗ್ಗದಲ್ಲಿ 1404 ಮಂದಿಯಿಂದ ವಚನ ಗಾಯನ, ಹೇಗಿತ್ತು? ಇಲ್ಲಿದೆ ಫೋಟೊ ಆಲ್ಬಂ

JNNCE-ADMISSION-2025-26

Car drowned at bhadra canal

Car drowned at bhadra canal

The-Team-PU-College-scaled

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment