SHIVAMOGGA LIVE NEWS | 20 MAY 2023
NITTURU : ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಹಸುವಿನ ಕಾಲು ಕಡಿದಿದ್ದಾರೆ. ಕತ್ತಲಾದರು ಹಸು (Cow) ಮನೆಗೆ ಬಾರದಿದ್ದರಿಂದ ಮಾಲೀಕರು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಹಸುವಿಗೆ ಪಶು ವೈದ್ಯರಿಂದ ಚಕಿತ್ಸೆ ಕೊಡಿಸಲಾಗುತ್ತಿದೆ.
ಹೊಸನಗರ ತಾಲೂಕು ಗೌರಿಕೆರೆಯ ಕೊಡಚಾದ್ರಿ ರಸ್ತೆ ತಿರುವಿನಲ್ಲಿ ಘಟನೆ ಸಂಭವಿಸಿದೆ. ಸಿಡ್ಲಕುಣಿ ನಿವಾಸಿ ಸುಭಾಷ್ ಎಂಬುವವರಿಗೆ ಸೇರಿದ ಹಸುವಿನ (Cow) ಕಾಲು ಕಡಿಯಲಾಗಿದೆ.
ಮೇಯಲು ಹೋಗಿದ್ದ ಹಸು
ಎಂದಿನಂತೆ ಸುಭಾಷ್ ಅವರು ತಮ್ಮ ದನವನ್ನು ಮೇಯಲು ಬಿಟ್ಟಿದ್ದರು. ರಾತ್ರಿ ಬಹು ಹೊತ್ತಿನ ತನಕ ದನ ಮನೆಗೆ ಬಾರದ ಹಿನ್ನೆಲೆ ಹುಡುಕಿಕೊಂಡು ಹೋಗಿದ್ದರು. ಆಗ ರಸ್ತೆ ಬದಿಯಲ್ಲಿ ದನ ಪತ್ತೆಯಾಗಿದೆ. ಕಾಲು ಕಡಿದಿದ್ದರಿಂದ ಎರಡು ಕಾಲಿನ ನರ ತುಂಡಾಗಿದೆ. ದನವನ್ನು ಮನೆಗೆ ಕೊಂಡೊಯ್ದು ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ – ಮಹಿಳೆಗೆ 10 ತಿಂಗಳು ಜೈಲು, ಕಾರಣವಾಯ್ತು ಸಾಮಾಜಿಕ ಜಾಲತಾಣದ ಪೋಸ್ಟ್, ಏನಿದು ಪ್ರಕರಣ?
ಕಾರಲ್ಲಿ ದನ ತುಂಬಿಕೊಂಡು ಹೋಗಿದ್ದರು
ಕೆಲ ತಿಂಗಳ ಹಿಂದೆ ಇದೇ ಸ್ಥಳದಲ್ಲಿ ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಬಂದು ದನಗಳನ್ನು ತುಂಬಿಕೊಂಡು ಹೋಗಿದ್ದರು. ಈಗ ದನದ ಕಾಲು ಕಡಿಯಲಾಗಿದೆ. ಹಾಗಾಗಿ ಸ್ಥಳಿಯರು ತಮ್ಮ ದನಗಳನ್ನು ಮೇಯಲು ಹೊರ ಬಿಡಲು ಹೆದರುವಂತಾಗಿದೆ.
ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200