ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 20 MAY 2023
NITTURU : ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಹಸುವಿನ ಕಾಲು ಕಡಿದಿದ್ದಾರೆ. ಕತ್ತಲಾದರು ಹಸು (Cow) ಮನೆಗೆ ಬಾರದಿದ್ದರಿಂದ ಮಾಲೀಕರು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಹಸುವಿಗೆ ಪಶು ವೈದ್ಯರಿಂದ ಚಕಿತ್ಸೆ ಕೊಡಿಸಲಾಗುತ್ತಿದೆ.

ಹೊಸನಗರ ತಾಲೂಕು ಗೌರಿಕೆರೆಯ ಕೊಡಚಾದ್ರಿ ರಸ್ತೆ ತಿರುವಿನಲ್ಲಿ ಘಟನೆ ಸಂಭವಿಸಿದೆ. ಸಿಡ್ಲಕುಣಿ ನಿವಾಸಿ ಸುಭಾಷ್ ಎಂಬುವವರಿಗೆ ಸೇರಿದ ಹಸುವಿನ (Cow) ಕಾಲು ಕಡಿಯಲಾಗಿದೆ.
ಮೇಯಲು ಹೋಗಿದ್ದ ಹಸು
ಎಂದಿನಂತೆ ಸುಭಾಷ್ ಅವರು ತಮ್ಮ ದನವನ್ನು ಮೇಯಲು ಬಿಟ್ಟಿದ್ದರು. ರಾತ್ರಿ ಬಹು ಹೊತ್ತಿನ ತನಕ ದನ ಮನೆಗೆ ಬಾರದ ಹಿನ್ನೆಲೆ ಹುಡುಕಿಕೊಂಡು ಹೋಗಿದ್ದರು. ಆಗ ರಸ್ತೆ ಬದಿಯಲ್ಲಿ ದನ ಪತ್ತೆಯಾಗಿದೆ. ಕಾಲು ಕಡಿದಿದ್ದರಿಂದ ಎರಡು ಕಾಲಿನ ನರ ತುಂಡಾಗಿದೆ. ದನವನ್ನು ಮನೆಗೆ ಕೊಂಡೊಯ್ದು ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ – ಮಹಿಳೆಗೆ 10 ತಿಂಗಳು ಜೈಲು, ಕಾರಣವಾಯ್ತು ಸಾಮಾಜಿಕ ಜಾಲತಾಣದ ಪೋಸ್ಟ್, ಏನಿದು ಪ್ರಕರಣ?
ಕಾರಲ್ಲಿ ದನ ತುಂಬಿಕೊಂಡು ಹೋಗಿದ್ದರು
ಕೆಲ ತಿಂಗಳ ಹಿಂದೆ ಇದೇ ಸ್ಥಳದಲ್ಲಿ ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಬಂದು ದನಗಳನ್ನು ತುಂಬಿಕೊಂಡು ಹೋಗಿದ್ದರು. ಈಗ ದನದ ಕಾಲು ಕಡಿಯಲಾಗಿದೆ. ಹಾಗಾಗಿ ಸ್ಥಳಿಯರು ತಮ್ಮ ದನಗಳನ್ನು ಮೇಯಲು ಹೊರ ಬಿಡಲು ಹೆದರುವಂತಾಗಿದೆ.
ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು















