ಸಾಗರ: ಮಾವ, ಸೊಸೆ ಬೈಕಿನಲ್ಲಿ ತೆರಳುವಾಗ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಸೊಸೆ ಶೃತಿ ತಲೆಗೆ ರಾಡ್ನಿಂದ ಹೊಡೆದ (Attacking) ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೊರಬ ತಾಲೂಕು ತತ್ತೂರು ಗ್ರಾಮದ ಗೋವಿಂದ (24) ಮತ್ತು ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಕಿರಣ್ ಕುಮಾರ್ (32) ಬಂಧಿತರು.
ಏನಿದು ಪ್ರಕರಣ?
ಶೃತಿ ಅವರು ಸೊರಬದಲ್ಲಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದರು. ಅವರ ಮಾವ ಶೃತಿ ಅವರನ್ನು ಬೈಕಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಮರದ ಮರೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ದಿಢೀರ್ ರಸ್ತೆಗೆ ಬಂದ್ದು ಬೈಕ್ ಅಡ್ಡಗಟ್ಟಿದ್ದ. ಜರ್ಕಿನ್ ಧರಿಸಿದ್ದ ಆತ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ. ಶೃತಿ ಅವರ ಮಾವನ ಕಣ್ಣಿಗೆ ಖಾರದ ಪುಡಿ ಎರಚಿ, ರಾಡ್ನಿಂದ ಶೃತಿ ತಲೆಗೆ ಹೊಡೆದಿದ್ದ. ಘಟನೆಗೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆಗಾಗಿ ಪೊಲೀಸ್ ಅಧೀಕ್ಷಕರ ನಿಖಿಲ್.ಬಿ ಅವರ ಮಾರ್ಗದರ್ಶನದಲ್ಲಿ ಸಾಗರ ಡಿವೈಎಸ್ಪಿ ಕೇಶವ ಕೆ.ಇ, ಸಾಗರ ಗ್ರಾಮಾಂತರ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು. ಪಿಎಸ್ಐ ಪ್ರವೀಣ್ ಎಸ್.ಪಿ, ಸಿಡಿಆರ್ ಸೆಲ್ ಶಿವಮೊಗ್ಗದ ಸಿಬ್ಬಂದಿ ಇಂದ್ರೇಶ, ಗುರು, ಎ.ಎಸ್.ಐ ಸಿದ್ದರೂಡ, ಪ್ರಶಾಂತ್, ಪರಶುರಾಮ್, ತಾಹಿರ್, ಉಮೇಶ್ ಲಮಾಣಿ, ಹರ್ಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಮನೆಯೊಳಗೆ ನುಗ್ಗಿ ವೃದ್ಧೆಯ ಕೈಲಿದ್ದ ರೋಲ್ಡ್ ಗೋಲ್ಡ್ ಬಳೆ ಕದ್ದೊಯ್ದ ಕಳ್ಳರು..!







